
ಕೋಲ್ಕತಾ(ಜೂ.10): ಅರ್ಜೆಂಟೀನಾ ಫುಟ್'ಬಾಲ್ ದಂತಕಥೆ ಡಿಯಾಗೋ ಮರಡೋನಾ ಎರಡನೇ ಬಾರಿಗೆ ಆಗಮಿಸುತ್ತಿದ್ದು, ದಾದ ಅವರನ್ನು ಭೇಟಿಯಾಗಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ.
‘ಕೋಲ್ಕತಾಕ್ಕೆ ತೆರಳಲು ಹಾಗೂ ಕೋಲ್ಕತಾ ಮಹಾರಾಜ, ದಾದಾ (ಸೌರವ್ ಗಂಗೂಲಿ) ಅವರನ್ನು ಭೇಟಿಯಾಗಲು 100 ದಿನ ಬಾಕಿ ಇದೆ’ ಎಂದು ಮರಡೋನಾ ತಮ್ಮ ಅಧಿಕೃತ ಫೇಸ್ಬುಕ್ ಪೇಜ್ನಲ್ಲಿ ಬರೆದುಕೊಂಡಿದ್ದಾರೆ.
ಜೂನಿಯರ್ ವಿಶ್ವ ಕಪ್ಗೆ ಪ್ರಚಾರ ನೀಡುವ ಸಲುವಾಗಿ ಮರಡೋನಾ ಸೆ.18ರಿಂದ 20ರ ತನಕ ಭಾರತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇದೇ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಸೇರಿದಂತೆ ಭಾರತದ ಫುಟ್ಬಾಲ್ ಹಾಗೂ ಕ್ರಿಕೆಟ್ ಆಟಗಾರರು, ಬಾಲಿವುಡ್ ಮತ್ತು ಟಾಲಿವುಡ್ ನಟರನ್ನೊಳಗೊಂಡ ಸೆಲೆಬ್ರಿಟಿಗಳ ತಂಡದೊಂದಿಗೆ ಕೂಡಿಕೊಂಡು ಮರಡೋನಾ ಸೌಹಾರ್ದತಯುತ ಫುಟ್ಬಾಲ್ ಪಂದ್ಯವೊಂದನ್ನು ಸಹ ಆಡಲಿದ್ದಾರೆ.
ಬೈಚುಂಗ್ ಭುಟಿಯಾ, ಜೋಸ್ ಬಾರಿಟ್ಟೋ, ಜೋ-ಪೌಲ್ ಆ್ಯಂಚರಿ, ಐಆ್ಯಮ್ ವಿಜಯನ್ ಸೌಹಾರ್ದಯುತ ಪಂದ್ಯದಲ್ಲಿ ಭಾಗವಹಿಸುವುದನ್ನು ಖಚಿತ ಪಡಿಸಿದ್ದಾರೆ. ಮನೋಜ್ ತಿವಾರಿ, ದೀಪ್'ದಾಸ್ ಗುಪ್ತಾ, ರಣವೀರ್ ಸಿಂಗ್ ಕೂಡಾ ಫುಟ್'ಬಾಲ್ ಪಂದ್ಯ ಆಡಲಿದ್ದಾರೆ ಎಂದು ಪಂದ್ಯದ ಆಯೋಜಕರು ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.