ಫಿಫಾ ವಿಶ್ವಕಪ್ 2018: ರಷ್ಯಾಗೆ ಸೈಕಲ್ ಸವಾರಿ ಮಾಡಿದ ಕೇರಳ ಫುಟ್ಬಾಲ್ ಅಭಿಮಾನಿ

Published : Jun 19, 2018, 12:28 PM IST
ಫಿಫಾ ವಿಶ್ವಕಪ್ 2018: ರಷ್ಯಾಗೆ ಸೈಕಲ್ ಸವಾರಿ ಮಾಡಿದ ಕೇರಳ ಫುಟ್ಬಾಲ್ ಅಭಿಮಾನಿ

ಸಾರಾಂಶ

ಭಾರತ ತಂಡ ಫುಟ್ಬಾಲ್ ಕ್ರೀಡೆಯಲ್ಲಿ ಬೆಳವಣಿಗೆ ಕಾಣುತ್ತಿದೆ. ಆದರೆ ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಕೆಲ ಕಾಲ ಕಾಯಬೇಕು. ಹಾಗಂತ ಭಾರತದಲ್ಲಿ ಫುಟ್ಬಾಲ್ ಅಭಿಮಾನಿಗಳಿಗೇನು ಕೊರತೆ ಇಲ್ಲ. ಇದೀಗ ಕೇರಳ ಫುಟ್ಬಾಲ್ ಅಭಿಮಾನಿ ಫಿಫಾ ವಿಶ್ವಕಪ್‌ಗಾಗಿ ರಷ್ಯಾಗೆ ಸೈಕಲ್ ಸವಾರಿ ಮಾಡಿ ದಾಖಲೆ ಬರೆದಿದ್ದಾರೆ. 

ತಿರುವನಂತಪುರಂ(ಜೂ.19): ಫುಟ್ಬಾಲ್ ಪಂದ್ಯವನ್ನ ಅತೀ ಹೆಚ್ಚು ಪ್ರೀತಿಸುವ ಭಾರತದ ರಾಜ್ಯಗಳಲ್ಲಿ ಕೇರಳ ಮುಂಚೂಣಿಯಲ್ಲಿದೆ. ಇಲ್ಲಿನ ಪುಟಾಣಿಗಳಿಂದ ಹಿಡಿದು,ಎಲ್ಲಾ ವಯಸ್ಕರಿಗೂ ಫುಟ್ಬಾಲ್ ಅಚ್ಚುಮೆಚ್ಚು. ಇದೀಗ ಕೇರಳ ಫುಟ್ಬಾಲ್ ಅಭಿಮಾನಿಯೊಬ್ಬ ರಷ್ಯಾಗೆ ಸೈಕಲ್‌ನಲ್ಲಿ ಪ್ರಯಾಣ ಮಾಡಿ ದಾಖಲೆ ಬರೆದಿದ್ದಾರೆ.

ಫಿಫಾ ವಿಶ್ವಕಪ್‌ಗಾಗಿ ರಷ್ಯಾ ತಲುಪಿದ ಈ ಫುಟ್ಬಾಲ್ ಅಭಿಮಾನಿ ಹೆಸರು ಕ್ಲಿಫಿನ್ ಫ್ರಾನ್ಸಿಸ್. 28 ವರ್ಷದ ಕ್ಲಿಫಿನ್ ಫ್ರಾನ್ಸಿಸ್ ಫೆ.23 ರಂದು ಕೇರಳದಿಂದ ದುಬೈಗೆ ತೆರಳಿದರು. ಅಲ್ಲಿ ಹೊಸ ಸೈಕಲ್ ಖರೀದಿಸಿದ ಅವರು, ಹಡಗಿನಲ್ಲಿ ಇರಾನ್‌ನ ಬಂದರ್ ಅಬ್ಬಾಸ್ ಎನ್ನುವ ಸ್ಥಳ ತಲುಪಿದರು. ಮಾ.13 ರಂದು ಇಲ್ಲಿಂದ
ಅವರ ಸೈಕಲ್ ಯಾನ ಆರಂಭವಾಯಿತು. 4 ತಿಂಗಳ ಪ್ರಯಾಣದಲ್ಲಿ ಹಲವು ದೇಶ, ಪ್ರಾಂತ್ಯಗಳನ್ನು ದಾಟಿ ಜೂ.5 ಕ್ಕೆ ರಷ್ಯಾ ಪ್ರವೇಶಿಸಿರುವ ಅವರು, ಜೂ.21ರ ವೇಳೆಗೆ ಮಾಸ್ಕೋ ಸೇರಲಿದ್ದಾರೆ. 

ಮಾಸ್ಕೋದ ಲುಜ್ನಿಕಿ ಕ್ರೀಡಾಂಗಣದಲ್ಲಿ ಜೂ.26 ರಂದು ನಡೆಯಲಿರುವ ಫ್ರಾನ್ಸ್-ಡೆನ್ಮಾರ್ಕ್ ಪಂದ್ಯದ ಟಿಕೆಟ್ ಖರೀದಿಸಿರುವ ಕ್ಲಿಫಿನ್, ಪಂದ್ಯ ವೀಕ್ಷಣೆಗೆ ಉತ್ಸುಕರಾಗಿದ್ದಾರೆ. ಆದರೆ ಕ್ಲಿಫಿನ್ ಕನಸು ದೊಡ್ಡದಿದೆ. ತಾವು ಆರಾಧಿಸುವ ಅರ್ಜೆಂಟೀನಾದ ಕಾಲ್ಚೆಂಡಿನ ಮಾಂತ್ರಿಕ ಲಿಯೋನೆಲ್ ಮೆಸ್ಸಿಯನ್ನು ಭೇಟಿಯಾಗುವ ಕನಸು ಹೊತ್ತು ರಷ್ಯಾಗೆತೆರಳಿರುವುದಾಗಿ ಕ್ಲಿಫಿನ್ ಹೇಳಿದ್ದಾರೆ. 

ಕ್ಲಿಫಿನ್ ಫ್ರಾನ್ಸಿಸ್ ಒಬ್ಬ ಹವ್ಯಾಸಿ ಸೈಕಲ್ ಪಟು. ಕಳೆದ ವರ್ಷ ಕೇರಳದಿಂದ ಕನ್ಯಾಕುಮಾರಿಗೆ ಸೈಕಲ್‌ನಲ್ಲಿ ಪ್ರಯಾಣಿಸಿದ್ದರು. ಆ ವೇಳೆಯೇ ರಷ್ಯಾಗೆ ಸೈಕಲ್ ನಲ್ಲಿ ಹೋಗುವ ಯೋಜನೆ ರೂಪಿಸಿದೆ. ಅದಕ್ಕೆ ಬೇಕಿರುವ ಸಕಲ ತಯಾರಿ ಮಾಡಿಕೊಂಡೆ ಎಂದು ಕ್ಲಿಫಿನ್ ಹೇಳಿದ್ದಾರೆ. 

ಬಿ.ಟೆಕ್ ಪದವೀಧರರಾಗಿರುವ ಫ್ರಾನ್ಸಿಸ್ ಕೊಚ್ಚಿಯಲ್ಲಿ ಕೆಲ ಕಾಲ ಉದ್ಯೋಗದಲ್ಲಿದ್ದರು. ಬಳಿಕ ಶಾಲೆಯೊಂದರಲ್ಲಿ ಗಣಿತ ಶಿಕ್ಷಕನಾಗಿ ಸೇರಿಕೊಂಡ ಕ್ಲಿಫಿನ್, ಸಂಪಾದಿಸುವ ಹಣವನ್ನು ಉಳಿತಾಯ ಮಾಡಿ ರಷ್ಯಾ ಪ್ರವಾಸಕ್ಕೆ ಅಣಿಯಾದರು. ಸಂಬಂಧಿಕರು ಸಹ ಅವರ ಪ್ರವಾಸಕ್ಕೆ ಆರ್ಥಿಕ
ನೆರವು ನೀಡಿದ್ದಾಗಿ ಹೇಳಿಕೊಂಡಿದ್ದಾರೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?