ಇಥೋಪಿಯಾದ ಅನ್ದಮ್ಲಾಕ್- ಕೀನ್ಯಾದ ಆ್ಯಗ್ನೆಸ್‌ಗೆ ಮಡಿಲಿಗೆ ಬೆಂಗಳೂರು 10K!

Published : May 19, 2019, 01:25 PM ISTUpdated : May 19, 2019, 01:26 PM IST
ಇಥೋಪಿಯಾದ ಅನ್ದಮ್ಲಾಕ್- ಕೀನ್ಯಾದ ಆ್ಯಗ್ನೆಸ್‌ಗೆ ಮಡಿಲಿಗೆ ಬೆಂಗಳೂರು 10K!

ಸಾರಾಂಶ

ಪ್ರತಿಷ್ಟಿತ ಬೆಂಗಳೂರು 10K ಮ್ಯಾರಥಾನ್ ಓಟ ಮುಕ್ತಾಯವಾಗಿದೆ.  ಪುರುಷರ ವಿಭಾಗದಲ್ಲಿ ಓಟದಲ್ಲಿ ಇಥೋಪಿಯಾದ ಅನ್ದಮ್ಲಾಕ್ ಬೆಲಿಹು ಹಾಗೂ ಮಹಿಳೆಯರ ವಿಭಾಗದಲ್ಲಿ ಕೀನ್ಯಾದ ಆ್ಯಗ್ನೆಸ್ ತಿರೋಪ್ ಪ್ರಥಮ ಬಹುಮಾನ ಗೆದ್ದುಕೊಂಡಿದ್ದಾರೆ. ಇಲ್ಲಿದೆ ಓಟದ ಸಂಪೂರ್ಣ ವಿವರ.  

ಬೆಂಗಳೂರು(ಮೇ.19): ಬೆಂಗಳೂರು 10k ಮ್ಯಾರಥಾನ್ ಓಟ ಅದ್ದೂರಿಯಾಗಿ ಅಂತ್ಯಗೊಂಡಿದೆ. ಈ ಬಾರಿ ಪುರುಷರ ವಿಭಾಗದಲ್ಲಿ ಓಟದಲ್ಲಿ ಇಥೋಪಿಯಾದ ಅನ್ದಮ್ಲಾಕ್ ಬೆಲಿಹು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಕೀನ್ಯಾದ ಆ್ಯಗ್ನೆಸ್ ತಿರೋಪ್ ಗೆದ್ದುಕೊಂಡಿದ್ದಾರೆ. ಬೆಂಗಳೂರು 10K ಮ್ಯಾರಥಾನ್ ಓಟ ಗೆದ್ದವರ ಸಂಪೂರ್ಣ ವಿವರ ಇಲ್ಲಿದೆ.

ಪುರಷರ ವಿಭಾಗ
ಪ್ರಥಮ: ಅನ್ದಮ್ಲಾಕ್ ಬೆಲಿಹು (ಇಥೋಪಿಯಾ)

ದ್ವಿತೀಯ: ಮಂಡೆ ಬುಶೆಂದಿಚ್ (ಉಗಾಂಡ)

ತೃತೀಯ: ಬಿರಾನು ಲೆಗೆಸಿ (ಇಥೋಪಿಯಾ)

ಭಾರತೀಯರ ವಿಭಾಗ
ಪ್ರಥಮ: ಕರಣ್ ಸಿಂಗ್
ದ್ವಿತೀಯ: ಲಕ್ಷ್ಮಣನ್ ಗೋವಿಂದನ್
ತೃತೀಯ: ಅವಿನಾಶ್ ಮುಕುಂದ್ ಸಬ್ಲೆ

ಮಹಿಳೆಯರ ವಿಭಾಗ
ಪ್ರಥಮ: ಆ್ಯಗ್ನೆಸ್ ತಿರೋಪ್  (ಕೀನ್ಯಾ)

ದ್ವಿತೀಯ: ಲೆಟೆಸೆನ್ಬೆಟ್  ಗಿಡೇ (ಇಥೋಪಿಯಾ)

ತೃತೀಯ: ಸೆನ್ಬೆರೇ ಥಿಫೆರಿ (ಇಥೋಪಿಯಾ)

ಭಾರತೀಯರ ವಿಭಾಗ

ಪ್ರಥಮ: ಸಂಜೀವಿನಿ ಜಾಧವ್ 

ದ್ವಿತೀಯ: ಪಾರುಲ್ ಚೌಧರಿ

ತೃತೀಯ: ಚಿಂತಾ ಯಾದವ್

ಇಂದು(ಮೇ.19) ಬೆಳಗ್ಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ 10k ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಲಾಯಿತು. ಬೆಂಗಳೂರು 10k ರಾಯಭಾರಿ ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್‌ಕುಮಾರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಪುನೀತ್, 10K ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿರುವುದು ಸಂತಸ ನೀಡಿದೆ. ಈ ರೀತಿಯ ಸ್ಪರ್ಧೆಗಳು ಬೆಂಗಳೂರಿನಲ್ಲಿ ನಡೆಯುತ್ತಿರಬೇಕು ಎಂದರು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana