
ರಾಜ್ಕೋಟ್(ನ.08): ಅಂಪೈರ್ ತೀರ್ಪಿನ ವಿಶ್ಲೇಷಣೆ (ಡಿಆರ್ಎಸ್) ‘ರಾಕೆಟ್ ವಿಜ್ಞಾನ’ವಲ್ಲ ಎಂದು ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಡಿಆರ್ಎಸ್ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಳವಡಿಸಲಾಗುತ್ತಿದೆ. ಕ್ರಿಕೆಟ್ ಆಟಗಾರರಾಗಿರುವವರು ಡಿಆರ್ಎಸ್ ವ್ಯವಸ್ಥೆ ವಿಜ್ಞಾನಕ್ಕಿಂತ ದೊಡ್ಡದಲ್ಲ ಎನ್ನುವುದನ್ನು ಅರಿತುಕೊಳ್ಳಬೇಕಿದೆ.
ಅಂಪೈರ್ ತೀರ್ಪಿನ ವಿಶ್ಲೇಷಣೆಗಾಗಿ ಇರುವ ಮತ್ತೊಂದು ಸಾಧನವಾಗಿದೆ. ಪಂದ್ಯದಲ್ಲಿ ಬೌಲರ್ ಎಸೆದ ಚೆಂಡು, ಪ್ಯಾಡ್ಗೆ ಬಡಿಯಿತೊ, ಅದು ಲೈನ್ನಲ್ಲಿತ್ತಾ ಅಥವಾ ಲೈನ್ನ ಬದಿಯಲ್ಲಿತ್ತಾ ಎನ್ನುವುದನ್ನು ಕೂಲಂಕುಷವಾಗಿ ಪರಿಶೀಲಿಸಲು ಡಿಆರ್ಎಸ್ ನೆರವಾಗಲಿದೆ ಎಂದು ಕೊಹ್ಲಿ ತಿಳಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.