
ರಾಂಚಿ(ಅ.07): ಏಕದಿನ ಸರಣಿ ಜಯಸಿದ ಭಾರತಕ್ಕೆ ಮೊದಲ ಟಿ20 ಪಂದ್ಯದಲ್ಲಿ ಆಸೀಸ್ ಪಡೆ ಸುಲಭ ತುತ್ತಾಗಿದ್ದಾರೆ. ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯೂ ಕೂಡ ಆಸ್ಟ್ರೇಲಿಯಾ ಪಾಲಿಗೆ ವರದಾನವಾಗಲಿಲ್ಲ.
ಮಳೆಯಿಂದಾಗಿ ಡೆಕ್ವರ್ತ್ ಲೂಯಿಸ್ ಅನ್ವಯ ಆಸ್ಟ್ರೇಲಿಯಾ 118 ರನ್'ಗಳಿಗೆ ಬದಲಾಗಿ ಭಾರತಕ್ಕೆ 6 ಓವರ್'ಗಳಲ್ಲಿ 48 ರನ್ ಗುರಿ ನೀಡಲಾಗಿತ್ತು. ಸುಲಭ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ 5.3 ವರ್'ಗಳಲ್ಲಿ 1 ವಿಕೇಟ್ ನಷ್ಟಕ್ಕೆ 49 ರನ್ ಪೇರಿಸಿ 9 ವಿಕೇಟ್'ಗಳ ಜಯಭೇರಿ ಬಾರಿಸಿದರು.
ಶಿಖರ್ ಧವನ್ (15: 12 ಎಸೆತ, 3 ಬೌಂಡರಿ), ಕೊಹ್ಲಿ(22: 14 ಎಸೆತ,3 ಬೌಂಡರಿ) ಹಾಗೂ ರೋಹಿತ್ ಶರ್ಮಾ (11: 7 ಎಸೆತ , ಬೌಂಡರಿ, ಒಂದು ಸಿಕ್ಸ್'ರ್) ರನ್'ಗಳನ್ನು ಬಾರಿಸಿ ಗೆಲುವಿನ ಪತಾಕೆ ಹಾರಿಸಿದರು.
ಟಾಸ್ ಗೆದ್ದ ಭಾರತ, ಬೌಲರ್'ಗಳದ್ದೆ ಆಟ
ರಾಂಚಿಯ ಜೆಎಸ್'ಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಂಡರು.ಫಿಂಚ್ (42: 30 ಎಸೆತ, 4 ಬೌಂಡರಿ, 1 ಸಿಕ್ಸ್'ರ್),ಮ್ಯಾಕ್ಸ್'ವೆಲ್(17: 16 ಎಸೆತ, 2 ಬೌಂಡರಿ) ಹಾಗೂ ವಿಕೇಟ್ ಕೀಪರ್ ಪೈನೆ(17: 16 ಎಸೆತ, 1 ಬೌಂಡರಿ, 1 ಸಿಕ್ಸ್'ರ್) ರನ್'ಗಳನ್ನು ಹೊಡೆದಿದ್ದನ್ನು ಬಿಟ್ಟರೆ ಉಳಿದ ಬ್ಯಾಟ್ಸ್'ಮೆನ್'ಗಳು ಒಂದಕಿಯ ಮೊತ್ತವನ್ನು ಬಾರಿಸಲಿಲ್ಲ. ಅಂತಿಮವಾಗಿ 18.4 ಓವರ್'ಗಳಲ್ಲಿ 118/8 ರನ್ ಗಳಿಸಿದ್ದಾಗ ಮಳೆ ಶುರುವಾಗಿ ಟೀಂ ಇಂಡಿಯಾಗೆ 6 ಓವರ್'ಗಳಲ್ಲಿ 48 ರನ್ ಗುರಿ ನೀಡಲಾಯಿತು.
ಭಾರತದ ಪರ ಕುಲ್ದೀಪ್ ಯಾದವ್ 16/2, ಬುರ್ಮಾ 17/2 ಹಾಗೂ ಬಿ. ಕುಮಾರ್, ಪಾಂಡ್ಯ, ಚಹಾಲ್ ತಲಾ ಒಂದೊಂದು ವಿಕೇಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಕುಲ್ದೀಪ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಸ್ಕೋರ್
ಆಸ್ಟ್ರೇಲಿಯಾ 18.4 ಓವರ್'ಗಳಲ್ಲಿ 118/8
(ಫಿಂಚ್:42, ಕುಲ್ದೀಪ್ ಯಾದವ್ 16/2, ಬುರ್ಮಾ 17/2)
ಭಾರತ 5.3 ಓವರ್'ಗಳಲ್ಲಿ 49/1 (ಡೆಕ್ವರ್ತ್ ಲೂಯಿಸ್ ಅನ್ವಯ 6 ಓವರ್'ಗಳಲ್ಲಿ 48 ರನ್ ಗುರಿ)
ಟೀ ಇಂಡಿಯಾಗೆ 9 ವಿಕೇಟ್ ಜಯ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.