
ಕೊಲಂಬೊ(ಸೆ.07): ಕ್ರಿಕೆಟ್'ನಲ್ಲಿ ಟಾಸ್ ಸಾಕಷ್ಟು ಬಾರಿ ಪಂದ್ಯದ ಫಲಿತಾಂಶದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ.
ಶ್ರೀಲಂಕಾ ಹಾಗೂ ಭಾರತ ನಡುವಿನ ಏಕೈಕ ಟಿ20 ಪಂದ್ಯದಲ್ಲಿ ಟಾಸ್ ಫಿಕ್ಸಿಂಗ್ ಆಗಿತ್ತೆ ಎಂಬ ಅನುಮಾನ ಮೂಡ ತೊಡಗಿವೆ.
ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡು ಪಂದ್ಯ ಗೆದ್ದಿತ್ತು. ಆದರೆ ನಿಜಕ್ಕೂ ಟಾಸ್ ಗೆದ್ದಿದ್ದು ಶ್ರೀಲಂಕಾ..!
ಟಾಸ್ ವೇಳೆ ಉಭಯ ತಂಡದ ಆಟಗಾರರಿಗೆ ಮುರುಳಿ ಕಾರ್ತಿಕ್ ಔಪಚಾರಿಕವಾಗಿ ಮ್ಯಾಚ್ ರೆಫ್ರಿ ಆ್ಯಂಡಿ ಪೇಕ್ರಾಫ್ಟ್ ಎದುರು ಟಾಸ್ ಪರಿಚಯಿಸಿದರು.
ಶ್ರೀಲಂಕಾ ನಾಯಕ ಉಫುಲ್ ತರಂಗಾ ನಾಣ್ಯವನ್ನು ಟಾಸ್ ಮಾಡಿದರು. ಕೊಹ್ಲಿ ಹೆಡ್ ಆಯ್ದುಕೊಂಡರು. ರೆಫ್ರಿ 'ಟೇಲ್ಸ್ ಇಂಡಿಯಾ' ಎನ್ನುತ್ತಿದ್ದಂತೆ, ಕಾರ್ತಿಕ್ ಟೀಂ ಇಂಡಿಯಾ ನಾಯಕನ ನಿರ್ಧಾರವನ್ನು ಕೇಳಿದ್ದಾರೆ.
ಉಭಯ ನಾಯಕರಾಗಲೀ, ರೆಫ್ರಿಯಾಗಲೀ ಈ ಬಗ್ಗೆ ಚಕಾರವೆತ್ತದಿರುವುದು ಟಾಸ್ ಬಗ್ಗೆ ಫಿಕ್ಸಿಂಗ್ ಆಗಿತ್ತಾ ಎನ್ನುವ ಅನುಮಾನ ಮೂಡುವಂತೆ ಮಾಡಿದೆ.
ಹೀಗಿತ್ತು ಆ ಕ್ಷಣ..
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.