
ಮುಂಬೈ(ಜ.09): ಟೀಮ್ ಇಂಡಿಯಾದ ಯಶಸ್ವಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಇತ್ತೀಚೆಗೆ ಏಕದಿನ ಮತ್ತು ಟಿ-20 ತಂಡದ ನಾಯಕತ್ವ ತ್ಯಜಿಸಿದ್ದರು. ಸ್ವಇಚ್ಛೆಯಿಂದ ಧೋನಿ ಈ ನಿರ್ಧಾರ ಕೈಗೊಂಡಿದ್ಧಾರೆ ಎನ್ನಲಾಗಿತ್ತು. ಆದರೆ, ಅಸಲಿ ಸತ್ಯವೇ ಬೇರೆ. ಧೋನಿ ಬಲವಂತವಾಗಿ ನಾಯಕತ್ವ ತ್ಯಜಿಸುವಂತೆ ಆಯ್ಕೆ ಸಮಿತಿ ಒತ್ತಡ ಹಾಕಿತ್ತು ಎಂದು ವರದಿಗಳು ಕೇಳಿಬರುತ್ತಿವೆ.
ಬಿಸಿಸಿಐ ಮೂಲಗಳನ್ನುದ್ದೇಶಿಸಿ ಹೆಡ್`ಲೈನ್ಸ್ ಟುಡೇ ಮಾಡಿರುವ ವರದಿ ಪ್ರಕಾರ, ಕಳೆದ ವಾರ ನಾಗ್ಪುರದಲ್ಲಿ ನಡೆದ ಜಾರ್ಖಂಡ್ ಮತ್ತು ಗುಜರಾತ್ ತಂಡಗಳ ನಡುವಿನ ರಣಜಿ ಸೆಮಿಫೈನಲ್ ಪಂದ್ಯದ ವೇಳೆ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್`ಕೆ ಪ್ರಸಾದ್, ಧೋನಿಯನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದರು. ನಾಯಕತ್ವ ತ್ಯಜಿಸಲು ಸೂಕ್ತ ಸಮಯ ಎಂದು ಸೂಚಿಸಿದ್ದರು.
ಈ ಎಲ್ಲ ಪ್ರಹಸನದ ಬಳಿಕ ಧೋನಿಯ ರಾಜೀನಾಮೆ ನಿರ್ಧಾರವನ್ನ ಪ್ರಸಾದ್ ಪ್ರಕಟಿಸಿದರು. `ಧೋನಿ ಸಮಯ ಪ್ರಜ್ಞೆಯನ್ನ ನಾನು ಅಭಿನಂದಿಸುತ್ಥೇನೆ. ಟೆಸ್ಟ್ ಕ್ರಿಕೆಟ್`ನಲ್ಲಿ ವಿರಾಟ್ ತಮ್ಮ ಸಾಮರ್ಥ್ಯವನ್ನ ಸಾಬೀತುಪಡಿಸಿದ ಬಗ್ಗೆ ಧೋನಿಗೆ ಸ್ಪಷ್ಟ ಅರಿವಿದೆ' ಎಂದು ಹೇಳಿದ್ದರು.
ಇದೇವೇಳೆ, ರಣಜಿ ತಂಡದಲ್ಲಿ ಆಡುವ ಕುರಿತಂತೆ ಜಾರ್ಖಂಡಿನಿಂದ ಬಿಸಿಸಿಐ ಪ್ರತಿನಿಧಿಸುವ ಅಧಿಕಾರಿಗಳ ಜೊತೆ ಧೋನಿಗೆ ಮನಸ್ತಾಪ ಉಂಟಾಗಿತ್ತು. ಹೀಗಾಗಿಯೇ, ಧೋನಿಗೆ ಅಷ್ಟಾಗಿ ಬೆಂಬಲ ಸಿಕ್ಕಿಲ್ಲ ಎನ್ನಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.