
ನವದೆಹಲಿ(ಡಿ.23): ಇಂಗ್ಲೆಂಡ್ ವಿರುದ್ಧದ ಸರಣಿ ಜಯದ ಬಳಿಕ ಭಾರತದ ಯಶಸ್ವಿ ಸ್ಪಿನ್ನರ್ ಆರ್. ಅಶ್ವಿನ್`ಗೆ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ಘೋಷಿಸಿದೆ. ಈ ಸಂತಸವನ್ನ ಇಂಡಿಯನ್ ಕ್ರಿಕೆಟ್ ಫೇಸ್ಬುಕ್ ಪೇಜ್`ನಲ್ಲಿ ಹಂಚಿಕೊಂಡಿರುವ ಅಶ್ವಿನ್ ಯಶಸ್ಸಿಗೆ ಕಾರಣರಾದ ಬಹುತೇಕರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಐಸಿಸಿ, ಟೀಮ್ ಇಂಡಿಯಾ, ಕೊಹ್ಲಿ, ರವಿಶಾಸ್ತ್ರೀ, ಕುಟುಂಬ ಎಲ್ಲರಿಗೂ ಥ್ಯಾಂಕ್ಸ್ ಹೇಳಿದ್ದಾರೆ. ಆದರೆ, ಧೋನಿ ಥ್ಯಾಂಕ್ಸ್ ಹೇಳದ ಬಗ್ಗೆ ಅಭಿಮಾನಿಗಳು ಕೋಪಗೊಂಡಿದ್ದಾರೆ.
ಈ ಕುರಿತು, ಟ್ವಿಟ್ಟರ್`ನಲ್ಲಿ ಪ್ರಶ್ನಿಸಿರುವ ಅಭಿಮಾನಿಗಳು, ಧೋನಿಯನ್ನ ಮರೆತುಬಿಟ್ಟಿರಾ..? ನಿಮ್ಮ ಯಶಸ್ಸಿನಲ್ಲಿ ಧೋನಿ ಮಾತ್ರವಿಲ್ಲವೇ..? ಒಬ್ಬ ಸ್ಪಿನ್ನರ್ ಆಗಿ ರೂಪುಗೊಳ್ಳುವಲ್ಲಿ ಧೋನಿ ಕೊಟ್ಟ ಅವಕಾಶ ಕಾರಣವಲ್ಲವೇ? ಎಂದೆಲ್ಲ ಪ್ರಶ್ನಿಸಿದ್ಧಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.