ಡೆನ್ಮಾರ್ಕ್ ಓಪನ್ ಪ್ರಶಸ್ತಿ ಹೊಸ್ತಿಲಲ್ಲಿ ಶ್ರೀಕಾಂತ್

Published : Oct 21, 2017, 10:20 PM ISTUpdated : Apr 11, 2018, 12:56 PM IST
ಡೆನ್ಮಾರ್ಕ್ ಓಪನ್ ಪ್ರಶಸ್ತಿ ಹೊಸ್ತಿಲಲ್ಲಿ ಶ್ರೀಕಾಂತ್

ಸಾರಾಂಶ

ಕೇವಲ 39 ನಿಮಿಷಗಳ ಕಾದಾಟದಲ್ಲಿ ಸೊಗಸಾದ ಸ್ಮ್ಯಾಶ್ ಹಾಗೂ ಸರ್ವ್'ಗಳ ಮೂಲಕ ಎದುರಾಳಿ ಆಟಗಾರರನ್ನು ತಬ್ಬಿಬ್ಬು ಮಾಡಿದ ಶ್ರೀಕಾಂತ್ ಅರ್ಹವಾಗಿಯೇ ಫೈನಲ್ ಪ್ರವೇಶಿಸಿದರು.

ಒಡೆನ್ಸೆ(ಅ.21): ಭಾರತದ ಅನುಭವಿ ಶಟ್ಲರ್ ಕಿದಾಂಬಿ ಶ್ರೀಕಾಂತ್ ಡೆನ್ಮಾರ್ಕ್ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ 2017ರಲ್ಲಿ ಮೂರನೇ ಸೂಪರ್ ಸೀರೀಸ್ ಪ್ರಶಸ್ತಿ ಗೆಲ್ಲುವ ಹೊಸ್ತಿಲಲ್ಲಿದ್ದಾರೆ.

ಇಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವ ನಂ.8 ಆಟಗಾರ ಶ್ರೀಕಾಂತ್, ಹಾಂಕಾಂಗ್‌'ನ ವಿನ್ಸೆಂಟ್ ವಾಂಗ್ ವಿಂಗ್ ವಿರುದ್ಧ 21-18, 21-17 ನೇರ ಗೇಮ್‌'ಗಳಲ್ಲಿ ಸುಲಭ ಗೆಲುವು ದಾಖಲಿಸಿದರು.

ಕೇವಲ 39 ನಿಮಿಷಗಳ ಕಾದಾಟದಲ್ಲಿ ಸೊಗಸಾದ ಸ್ಮ್ಯಾಶ್ ಹಾಗೂ ಸರ್ವ್'ಗಳ ಮೂಲಕ ಎದುರಾಳಿ ಆಟಗಾರರನ್ನು ತಬ್ಬಿಬ್ಬು ಮಾಡಿದ ಶ್ರೀಕಾಂತ್ ಅರ್ಹವಾಗಿಯೇ ಫೈನಲ್ ಪ್ರವೇಶಿಸಿದರು.

ಹೋರಾಟ ಮುಗಿಸಿದ ಸೈನಾ, ಪ್ರಣಯ್

ಭಾರತದ ಸೈನಾ ನೆಹ್ವಾಲ್ ಹಾಗೂ ಎಚ್.ಎಸ್.ಪ್ರಣಯ್ ಡೆನ್ಮಾರ್ಕ್ ಓಪನ್‌ನಿಂದ ಹೊರಬಿದ್ದಿದ್ದಾರೆ. ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌'ನಲ್ಲಿ ಸೈನಾ ಜಪಾನ್‌'ನ ಅಕಾನೆ ಯಮಗೂಚಿ ವಿರುದ್ಧ 10-21, 13-21 ನೇರ ಗೇಮ್‌'ಗಳಲ್ಲಿ ಪರಾಭವಗೊಂಡರು.

ಇನ್ನು ಪ್ರೀ ಕ್ವಾರ್ಟರ್‌'ನಲ್ಲಿ ದಿಗ್ಗಜ ಲೀ ಚಾಂಗ್ ವೀ ಸೋಲಿಸಿದ್ದ ಪ್ರಣಯ್ ಕ್ವಾರ್ಟರ್ ಫೈನಲ್‌'ನಲ್ಲಿ ವಿಶ್ವ ನಂ.2, ಅಗ್ರಶ್ರೇಯಾಂಕಿತ ಆಟಗಾರ ಕೊರಿಯಾದ ಸೊನ್ ವಾನ್ ಹೊ ವಿರುದ್ಧ 13-21, 18-21 ಗೇಮ್‌'ಗಳಲ್ಲಿ ನಿರಾಸೆ ಅನುಭವಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೋಹಿತ್, ಜಡೇಜಾ ಅಲ್ಲ! ಟೀಂ ಇಂಡಿಯಾ ಸರಣಿ ಸೋಲಿಗೆ ಈ ಇಬ್ಬರೇ ಕಾರಣ! ನೀವೇನಂತೀರಾ?
ಕೊನೆಗೂ ಮುಗಿಯಿತಾ ಈ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನ ವೃತ್ತಿಬದುಕು?