ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ-ಕಬಡ್ಡಿ ಕೋಚ್ ನೇಣಿಗೆ ಶರಣು!

By Web DeskFirst Published Oct 16, 2018, 11:58 AM IST
Highlights

ಕಳೆದೆರಡು ದಿನದಿಂದ ಬಾಲಕಿ ಮೇಲೆ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದ ಬೆಂಗಳೂರು ಕ್ರೀಡಾ ಪ್ರಾಧಿಕಾರದ ಕಬಡ್ಡಿ ಕೋಚ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಷ್ಟಕ್ಕೂ ಕೋಚ್ ಮೇಲೆ ಕೇಳಿಬಂದ ಆರೋಪ ಏನು? ಇಲ್ಲಿದೆ.

ದಾವಣಗೆರೆ(ಅ.16): ಲೈಂಗಿಕ ಕಿರುಕುಳ ಆರೋಪದ ಮೇಲೆ ಅಮಾನತ್ತುಗೊಂಡಿದ್ದ ಬೆಂಗಳೂರು ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ಕಬಡ್ಡಿ ಕೋಚ್ ವಿ ಹೊಸಮನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬಾಲಕಿ ಬಟ್ಟೆ ಬದಲಾಯಿಸುವುದನ್ನ ಕದ್ದು ನೋಡಿದ ಆರೋಪಕ್ಕೆ ಗುರಿಯಾದ ವಿ ಹೊಸಮನಿ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರಿಂದ ನೊಂದಿದ್ದ ಹೊಸಮನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಯಲ್ಲಿ ದೆಹಲಿಗೆ ತೆರಳುವುದಾಗಿ ಮೊಬೈಲ್‌ ಬಿಟ್ಟು ಹೋಗಿದ್ದ  ಹೊಸಮನಿ ಹರಿಹರ ಹೊಟೆಲ್‌ನಲ್ಲಿ ರೂಂ ಪಡೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಗಧಿತ ಅವಧಿ ಕಳೆದರೂ ಹೊಸಮನಿ ರೂಂ ಬಿಟ್ಟು ಕೊಡದ(ಚೆಕ್ ಔಟ್) ಕಾರಣ, ಸಿಬ್ಬಂಧಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಆತ್ಮಹತ್ಯೆ ಕೊಠಡಿಯಿಂದ ಡೆತ್ ನೋಟ್ ಬರೆದಿಟ್ಟಿದ್ದಾರೆ. ಪತ್ನಿ ಹಾಗೂ ಮಗನ ಬಳಿ ಕ್ಷಮೆಯಾಚಿಸಿದ್ದಾರೆ.  ನನಗೆ ತುಂಬಾ ನೋವಾಗಿದೆ. ನಾನು ನಿಮದೆ ತೊಂದರೆ ಕೊಟ್ಟೆ, ಕೊನೇ ಕ್ಷಣದಲ್ಲಿ ನಿಮ್ಮನ್ನ ನೋಡೋಣ ಅಂದ್ರೂ ಪರ್ಸ್‌ನಲ್ಲಿ ಫೋಟೋ ಇರಲಿಲ್ಲ ಎಂದು ಡೆತ್ ನೋಟ್‌ನಲ್ಲಿ ಬರೆದಿದ್ದಾರೆ.

 

click me!