ತವರಿನಲ್ಲಿ ಚೆನ್ನೈಯಿನ್'ಗೆ ಜಯದ ಸಿಹಿ

Published : Oct 13, 2016, 04:20 PM ISTUpdated : Apr 11, 2018, 12:36 PM IST
ತವರಿನಲ್ಲಿ ಚೆನ್ನೈಯಿನ್'ಗೆ ಜಯದ ಸಿಹಿ

ಸಾರಾಂಶ

ಹಾಲೆಂಡ್‌ ಮೂಲದ ಮಿಡ್‌ಫೀಲ್ಡರ್‌ ಹಾನ್ಸ್‌ ಮುಲ್ಡರ್‌ ಹಾಗೂ ಡಿಫೆಂಡರ್‌ ಮೆಹ್ರಾ​ಜು​ದ್ದೀನ್‌ ವಾಡೂ ದಾಖ​ಲಿ​ಸಿದ ತಲಾ ಒಂದೊಂದು ಗೋಲಿನ ನೆರವಿನಿಂದ ಕ್ರಿಕೆ​ಟಿ​ಗ ಮಹೇಂದ್ರ ಸಿಂಗ್‌ ಧೋನಿ ಮಾಲೀ​ಕ​ತ್ವದ ಚೆನ್ನೈ​ಯಿನ್‌ ಎಫ್‌ಸಿ ತಂಡ, ಇಂದು ನಡೆದ ಇಂಡಿ​ಯನ್‌ ಸೂಪರ್‌ ಲೀಗ್‌ ಪಂದ್ಯ​ದಲ್ಲಿ ಗೋವಾ ಎಫ್‌ಸಿ ವಿರುದ್ಧ 2-0 ಗೋಲು​ಗಳ ಅಂತ​ರ​ದಲ್ಲಿ ಜಯ ಸಾಧಿ​ಸಿತು.

ಚೆನ್ನೈ(ಅ.13): ಹಾಲೆಂಡ್‌ ಮೂಲದ ಮಿಡ್‌ಫೀಲ್ಡರ್‌ ಹಾನ್ಸ್‌ ಮುಲ್ಡರ್‌ ಹಾಗೂ ಡಿಫೆಂಡರ್‌ ಮೆಹ್ರಾ​ಜು​ದ್ದೀನ್‌ ವಾಡೂ ದಾಖ​ಲಿ​ಸಿದ ತಲಾ ಒಂದೊಂದು ಗೋಲಿನ ನೆರವಿನಿಂದ ಕ್ರಿಕೆ​ಟಿ​ಗ ಮಹೇಂದ್ರ ಸಿಂಗ್‌ ಧೋನಿ ಮಾಲೀ​ಕ​ತ್ವದ ಚೆನ್ನೈ​ಯಿನ್‌ ಎಫ್‌ಸಿ ತಂಡ, ಇಂದು ನಡೆದ ಇಂಡಿ​ಯನ್‌ ಸೂಪರ್‌ ಲೀಗ್‌ ಪಂದ್ಯ​ದಲ್ಲಿ ಗೋವಾ ಎಫ್‌ಸಿ ವಿರುದ್ಧ 2-0 ಗೋಲು​ಗಳ ಅಂತ​ರ​ದಲ್ಲಿ ಜಯ ಸಾಧಿ​ಸಿತು.

ಇಲ್ಲಿನ ಜವಾ​ಹ​ರ​ಲಾಲ್‌ ಕ್ರೀಡಾಂಗ​ಣ​ದಲ್ಲಿ ನಡೆದ ಪಂದ್ಯ​ದಲ್ಲಿ ಉತ್ತಮ ಪ್ರದರ್ಶನ ನೀಡಿದ ಚೆನ್ನೈ​ಯಿನ್‌ ಪಡೆ ಎದು​ರಾ​ಳಿ​ಗಳ ಎಲ್ಲಾ ತಂತ್ರ​ಗಾ​ರಿ​ಕೆಗ​ಳನ್ನೂ ಸಮ​ರ್ಥ​ವಾಗಿ ಹತ್ತಿ​ಕ್ಕು​ವಲ್ಲಿ ಯಶ​ಸ್ವಿ​ಯಾ​ಯಿತು. ಹನ್ಸ್‌ ಮುಲ್ಡರ್‌ ಅವರು ಪಂದ್ಯದ 15ನೇ ನಿಮಿ​ಷ​ದಲ್ಲಿ ಗೋಲು ದಾಖ​ಲಿಸಿ ತಮ್ಮ ತಂಡಕ್ಕೆ 1-0 ಗೋಲಿನ ಮುನ್ನಡೆ ಒದ​ಗಿ​ಸಿ​ಕೊ​ಟ್ಟರು. ಇನ್ನು, ಪಂದ್ಯದ ಪ್ರಥ​ಮಾ​ರ್ಧ ಮುಗಿ​ಯಲು ಇನ್ನು ಕೆಲವೇ ನಿಮಿ​ಷ​ಗಳು ಬಾಕಿ​ಯಿ​ದ್ದಾಗ (26ನೇ ನಿಮಿ​ಷ) ಮೆಹ್ರಾ​ಜು​ದ್ದೀನ್‌ ಅವರು, ಎದು​ರಾ​ಳಿ​ಗಳ ರಕ್ಷಣಾ ಪಡೆ ಬೇಧಿಸಿ ಚೆನ್ನೈಯಿನ್‌ ಪಡೆಗೆ ಎರ​ಡನೇ ಗೋಲು ತಂದು​ಕೊ​ಟ್ಟರು.

ಕಳೆದ ಪಂದ್ಯ​ದಲ್ಲಿ ಡೆಲ್ಲಿ ಡೈನ​ಮೋಸ್‌ ತಂಡದ ವಿರುದ್ಧ 1-3 ಗೋಲು​ಗಳ ಅಂತ​ರ​ದ​ಲ್ಲಿ ಸೋತಿದ್ದ ಚೆನ್ನೈ​ಯಿನ್‌ ತಂಡವು, ಗೋವಾ ವಿರು​ದ್ಧದ ಪಂದ್ಯ​ಕ್ಕಾಗಿ ತನ್ನಲ್ಲಿ ಐದು ಬದ​ಲಾ​ವ​ಣೆ​ಗ​ಳನ್ನು ಮಾಡಿ​ಕೊಂಡಿತ್ತು. ಡುವಾಯ್ನೆ ಕೆರ್‌, ಡುಡು ಒಮಾ​ಗ್ಬೆಮಿ, ಜೆಜೆ ಲಾಲ್‌​ಪೆ​ಕ್ಲುವಾ, ಬರ್ನಾರ್ಡ್‌ ಮೆಂಡಿ ಹಾಗೂ ನಲ್ಲ​ಪ್ಪಾನ್‌ ಮೋಹ​ನ್‌​ರಾಜ್‌ ಅವರ ಬದ​ಲಿಗೆ ಕಾರಂಜೀತ್‌ ಸಿಂಗ್‌, ಮ್ಯನು​ಯೆಲೆ ಬ್ಲಾಸಿ, ಡೇವಿಡ್‌ ಸುಕ್ಕಿ, ಎಲಿ ಸಬಿಯಾ ಹಾಗೂ ಜೆರ್ರಿ ಲಾಲ್ರಿಂಜು​ವೆಲಾ ಅವ​ರಿಗೆ ಅವ​ಕಾಶ ಕಲ್ಪಿ​ಸ​ಲಾ​ಗಿತ್ತು. ಈ ಪ್ರಯೋಗ ಫಲ ನೀಡಿ ಚೆನ್ನೈ​ಯಿ​ನ್‌ಗೆ ಜಯ ಒಲಿದು ಬಂದಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?