
ಚೆನ್ನೈ(ಡಿ.16): ಕೆಲ ದಿನಗಳ ಹಿಮದಷ್ಟೇ ವಾರ್ಧಾ ಚಂಡಮಾರುತ ಚೆನ್ನೈ ನಗರಕ್ಕೆ ಅಪ್ಪಳಿಸಿತ್ತು. ಎಡೆಬಿಡದೇ ಸುರಿಯುತ್ತಿದ್ದ ಮಳೆಯಿಂದಾಗಿ ಶಾಲಾ-ಕಾಲೇಜು, ಕಚೇರಿಗಳಿಗೇ ರಜೆ ನೀಡಲಾಗಿತ್ತು. ಅಂತಹುದರಲ್ಲಿ ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ ಹೇಗೆ ನಡೆಯುತ್ತೆ ಹೇಳಿ. ಜಿಟ ಜಿಟಿ ಮಳೆಯಿಂದ ಮೈದಾನವೆಲ್ಲ ೊದ್ದೆಯಾಗಿತ್ತು. ಪಿಚ್ ಕೆಸರು ಗದ್ದೆಯಾಗಿತ್ತು. ಆದರೆ, ಎರಡೇ ದಿನದ ಸಮಯದಲ್ಲಿ ಮೈದಾನದ ಸಿಬ್ಬಂದಿ ಪಿಚ್ ರೆಡಿ ಮಾಡಿದ್ದಾರೆ.
ಅತ್ಯಾಧುನಿಕ ಮೆಶಿನರಿ, ಹೆಲಿಕಾಪ್ಟರ್ ಏನೆಲ್ಲ ಬಳಸಿದರೂ ಒದ್ದೆ ಕಡಿಮೆಯಾಗದಾಗ ಪಿಚ್ ಮೇಲೆ ಬೆಂಕಿ ಹಚ್ಚಿ ಬಿಸಿ ಶಾಖ ನೀಡಿ ಪಿಚ್ ರೆಡಿ ಮಾಡಿದ್ಧಾರೆ. ಭಾರತ ವೆಸ್ಟ್ ಇಂಡೀಸ್ ಸೇರಿದಂತೆ ಕೆಲ ರಾಷ್ಟ್ರಗಳಲ್ಲಷ್ಟೇ ಇಂತಹ ತಾಂತ್ರಿಕತೆಯನ್ನ ಬಳಸಲಾಗುತ್ತೆ.
ಇತ್ತ, ಪಿಚ್ ಒದ್ದೆಯಾಗಿದ್ದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ತಂಡದ ಆಟಗಾರ ಜೋ ರೂಟ್ ಕ್ರೀಡಾಂಗಣದ ಸಿಮೆಂಟ್ ರಸ್ತೆ ಮೇಲೇ ಬ್ಯಾಟಿಂಗ್ ಅಭ್ಯಾಸ ನಡೆಸಿ ಗಮನ ಸೆಳೆದಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.