ವರ್ಕ್ ಆಯ್ತು ನಾಯಕ ಕೊಹ್ಲಿ-ಕೋಚ್ ಕುಂಬ್ಳೆ ಲೆಕ್ಕಚಾರ..! ಹಿಟ್ ಆಯ್ತು ಭುವಿ ಸ್ವಿಂಗ್ ಚಮತ್ಕಾರ..!

Published : Oct 02, 2016, 05:02 AM ISTUpdated : Apr 11, 2018, 01:11 PM IST
ವರ್ಕ್ ಆಯ್ತು ನಾಯಕ ಕೊಹ್ಲಿ-ಕೋಚ್ ಕುಂಬ್ಳೆ ಲೆಕ್ಕಚಾರ..! ಹಿಟ್ ಆಯ್ತು ಭುವಿ ಸ್ವಿಂಗ್ ಚಮತ್ಕಾರ..!

ಸಾರಾಂಶ

ಕೊಲ್ಕತ್ತಾ(ಅ.02): ಟೀಮ್ ಇಂಡಿಯಾ 2ನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮುನ್ನಡೆಯತ್ತ ಹೆಜ್ಜೆ ಇಡಲು ಕಾರಣವಾಗಿದ್ದು ಭುವನೇಶ್ವರ್​ ಕುಮಾರ್. ಮೊದಲ ಟೆಸ್ಟ್​ನಿಂದ ಡ್ರಾಪ್ ಆಗಿದ್ದ ಭುವಿ, ಸೆಕೆಂಡ್ ಟೆಸ್ಟ್​ನಲ್ಲಿ ಕಮಾಲ್ ಮಾಡಿದ್ದಾರೆ. ತಮ್ಮ ಸ್ವಿಂಗ್ ಬೌಲಿಂಗ್​ ಮೂಲಕ ಕಿವೀಸ್ ಬ್ಯಾಟ್ಸ್​​ಮನ್​ಗಳನ್ನ ಕಾಡಿದರು. 

ಭಾರತದ ಕ್ರಿಕೆಟ್ ಕಾಶಿ ಪಿಚ್ ಹೊಸದಾಗಿ ತಯಾರಾಗಿತ್ತು. ಹೀಗಾಗಿ ಇಲ್ಲಿ ಸ್ಪಿನ್ ಮ್ಯಾಜಿಕ್ ನಡೆಯೋದು ಕಮ್ಮಿ ಅಂತ ಹೇಳಲಾಗಿತ್ತು. ಫಾಸ್ಟ್ ಬೌಲರ್ಸ್ ಕಮಾಲ್ ಮಾಡ್ಬಹುದು ಅಂತ ಪಿಚ್ ಕ್ಯೂರೇಟರ್​ ಹೇಳಿದ್ದರು. ಅದರಂತೆ ಎರಡು ಟೀಮ್ ಪರ ವೇಗದ ಬೌಲರ್ಸ್ ಕಮಾಲ್ ಮಾಡಿದ್ರು. ಅದರಲ್ಲಿ ಯಶಸ್ವಿಯಾಗಿದ್ದು ಮಾತ್ರ ಭುವನೇಶ್ವರ್ ಕುಮಾರ್.

ಮೊದಲ ಟೆಸ್ಟ್​ನಿಂದ ಹೊರಗುಳಿದಿದ್ದ ಭುವನೇಶ್ವರ್​ಗೆ ಸೆಕೆಂಡ್ ಟೆಸ್ಟ್​​ನಲ್ಲಿ ಚಾನ್ಸ್ ನೀಡಲಾಗಿತ್ತು. ಯಾಕಂದರೆ ಕೋಲ್ಕತ್ತ ಪಿಚ್​ನಲ್ಲಿ ಸ್ವಿಂಗ್ ಮ್ಯಾಜಿಕ್​ ಮಾಡಬಹುದು ಅನ್ನೋದು ಕ್ಯಾಪ್ಟನ್ ಕೊಹ್ಲಿ ಮತ್ತು ಕೋಚ್ ಕುಂಬ್ಳೆ ಲೆಕ್ಕಾಚಾರವಾಗಿತ್ತು. ಅದರಂತೆ ಭುವಿ ಅದ್ಭುತವಾಗಿ ದಾಳಿ ಮಾಡಿದರು. ಕಿವೀಸ್ ಬ್ಯಾಟ್ಸ್​ಮನ್​ಗಳು ಕ್ರೀಸ್ ಕಚ್ಚಿ ನಿಲ್ಲಲು ಭುವನೇಶ್ವರ್ ಬಿಡಲಿಲ್ಲ. ಆರಂಭದಲ್ಲೇ ಎರಡು ವಿಕೆಟ್ ಕಿತ್ತು ಶಾಕ್ ನೀಡಿದ್ರು. ಇಟ್ಟು  5 ವಿಕೆಟ್ ಕಬಳಿಸೋ ಮೂಲಕ ಕಿವೀಸ್ ಕುಸಿತಕ್ಕೆ ಕಾರಣರಾದರು. 

ವಿಂಡೀಸ್​ನಲ್ಲಿ ಸರಣಿ ಗೆಲ್ಲಿಸಿದ್ದ ಭುವಿ, ಕಿವೀಸ್ ಸರಣಿ ಗೆಲ್ಲಿಸಿಕೊಡ್ತಾರಾ..?

ವೆಸ್ಟ್ ಇಂಡೀಸ್ ವಿರುದ್ಧ 3ನೇ ಟೆಸ್ಟ್​​ ಗೆಲುವಿನ ರೂವಾರಿ ಭುವನೇಶ್ವರ್​. ಒಟ್ಟು 6 ವಿಕೆಟ್ ಕಬಳಿಸಿ, ಸರಣಿ ಗೆಲ್ಲಿಸಿಕೊಟ್ಟಿದ್ದರು. ಈಗ ಕೋಲ್ಕತ್ತ ಟೆಸ್ಟ್​ನಲ್ಲೂ  ಸ್ವಿಂಗ್ ಮ್ಯಾಜಿಕ್ ನಡೆಸಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ 250ನೇ ಟೆಸ್ಟ್ ಗೆಲ್ಲಿಸಿಕೊಡ್ತಾರಾ..? ಕೊಹ್ಲಿ ಆಶ್ಚರ್ಯ ರೀತಿಯಲ್ಲಿ ಟೀಮ್​ನಲ್ಲಿ ಸ್ಥಾನ ಕೊಟ್ಟು ಶಾಕ್ ನೀಡ್ತಾರೆ. ಸಿಕ್ಕ ಅವಕಾಶವನ್ನ ಸದ್ಭಳಕೆ ಮಾಡಿಕೊಳ್ತೀನಿ ಅಂತ ಭುವನೇಶ್ವವರ್ ಕುಮಾರ್ ಹೇಳಿಕೊಂಡಿದ್ದಾರೆ.

ಕ್ರಿಕೆಟ್​ನಲ್ಲಿ ಹೆಚ್ಚಾಗಿ ಫಾಸ್ಟ್ ಬೌಲರ್ಸ್​ ಗಾಯಾಳುವಾಗ್ತಾರೆ. ಹೀಗಾಗಿ ಕೋಚ್ ಮತ್ತು ಕ್ಯಾಪ್ಟನ್ ಮಾಸ್ಟರ್ ಪ್ಲಾನ್ ಮಾಡಿ ವೇಗದ ಬೌಲರ್​ಗಳಿಗೆ ರೋಟೆಶನ್ ಪಾಲಿಸಿ ಅನುಸರಿಸ್ತಿದ್ದಾರೆ. ಮೊದಲ ಟೆಸ್ಟ್​​​ನಲ್ಲಿ ಉಮೇಶ್ ಯಾದವ್ ಆಡಿದರು. ಸೆಕೆಂಡ್ ಟೆಸ್ಟ್​​ನಲ್ಲಿ ಯಾದವ್ ಬದಲು ಭುವಿ ಆಡ್ತಿದ್ದಾರೆ. ಇಶಾಂತ್ ಶರ್ಮಾ ಫಿಟ್ ಆದ್ರೆ 3ನೇ ಟೆಸ್ಟ್​​ನಲ್ಲಿ ಶಮಿ ಬದಲಿಗೆ ಆಡಲಿದ್ದಾರೆ. ಸುದೀರ್ಘ ಟೆಸ್ಟ್​ ಸರಣಿ ಇರುವುದರಿಂದ ವೇಗದ ಬೌಲರ್ಸ್ ಗಾಯಾಳುವಾಗಬಾದರು ಅನ್ನೋ ಕಾರಣಕ್ಕೆ ರೋಟೇಶನ್ ಪಾಲಿಸಿಯನ್ನ ಅನುಸರಿಸ್ತಿದ್ದಾರೆ.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡರ್ 19 ಏಷ್ಯಾಕಪ್ ಫೈನಲ್: ಪಾಕ್ ಎದುರು ಮುಗ್ಗರಿಸಿದ ಭಾರತ; ವೈಭವ್ ಸೂರ್ಯವಂಶಿ ಕನಸು ನುಚ್ಚುನೂರು!
2026ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 7 ಬದಲಾವಣೆ!