GT20 ಲೀಗ್: ಯುವರಾಜ್ ಸಿಂಗ್ vs ಕ್ರಿಸ್ ಗೇಲ್ ಹೋರಾಟಕ್ಕೆ ವೇದಿಕೆ ರೆಡಿ !

Published : Jul 24, 2019, 10:49 PM IST
GT20 ಲೀಗ್: ಯುವರಾಜ್ ಸಿಂಗ್ vs ಕ್ರಿಸ್ ಗೇಲ್ ಹೋರಾಟಕ್ಕೆ ವೇದಿಕೆ ರೆಡಿ !

ಸಾರಾಂಶ

ಗ್ಲೋಬಲ್ ಕೆನಡಾ ಟಿ20 ಲೀಗ್ ಟೂರ್ನಿ ನಾಳೆಯಿಂದ(ಜು.25) ಆರಂಭಗೊಳ್ಳುತ್ತಿದೆ. ಉದ್ಘಟಾನಾ ಪಂದ್ಯದಲ್ಲಿ ಯುವರಾಜ್ ಸಿಂಗ್ ಹಾಗೂ ಕ್ರಿಸ್ ಗೇಲ್ ಮುಖಾಮುಖಿಯಾಗುತ್ತಿದೆ. ಈ ರೋಚಕ ಹೋರಾಟಕ್ಕೆ ಅಭಿಮಾನಿಗಳು ಕಾತರಗೊಂಡಿದ್ದಾರೆ.

ಕೆನಡಾ(ಜು.24): ಕ್ರಿಕೆಟ್ ದಿಗ್ಗಜರು, ಸ್ಫೋಟಕ ಬ್ಯಾಟ್ಸ್‌ಮನ್, ಅಭಿಮಾನಿಗಳ ನೆಚ್ಚಿನ ಕ್ರಿಕೆಟಿಗರಾಗಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಮುಖಾಮುಖಿಯಾಗುತ್ತಿದ್ದಾರೆ. ಕೆನಡಾ ಗ್ಲೋಬಲ್ ಟಿ20 ಲೀಗ್ ಟೂರ್ನಿಯಲ್ಲಿ ಈ ಚುಟುಕು ಸ್ಪೆಷಲಿಸ್ಟ್‌ಗಳು ಕಣಕ್ಕಿಳಿಯುತ್ತಿದ್ದಾರೆ. 

ಇದನ್ನೂ ಓದಿ: ಕೆನಾಡ ಟಿ20 ಲೀಗ್‌ಗಿಂತಲೂ ಜನಪ್ರೀಯವಾಯಿತು ಕ್ರಿಸ್ ಗೇಲ್ ಕ್ಯಾಚ್!

2019ರ ಕೆನಡಾ ಗ್ಲೋಬಲ್ ಟಿ20 ಟೂರ್ನಿ ಜುಲೈ 25 ರಂದು ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲಿ ಟೊರಂಟೊ ನ್ಯಾಶನಲ್ಸ್ ವ್ಯಾನ್‌ಕವರ್ ನೈಟ್ಸ್ ಹೋರಾಟ ನಡೆಸಲಿದೆ. ವಿಶೇಷ ಅಂದರೆ ಟೊರಂಟೊ ತಂಡಕ್ಕೆ ಯುವರಾಜ್ ಸಿಂಗ್ ನಾಯಕನಾಗಿದ್ದರೆ, ವ್ಯಾನ್‌ಕವರ್ ತಂಡಕ್ಕೆ ಕ್ರಿಸ್ ಗೇಲ್ ನಾಯರಾಗಿದ್ದಾರೆ. 

ಯುವರಾಜ್ ಸಿಂಗ್ ತಂಡದಲ್ಲಿ ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಡಿಗ ಬ್ರೆಂಡನ್ ಮೆಕ್ಕಲಂ, ವೆಸ್ಟ್ ಇಂಡೀಸ್ ಆಲ್ರೌಂಡರ್ ಕೀರನ್ ಪೊಲಾರ್ಡ್, ನ್ಯೂಜಿಲೆಂಡ್ ತಂಡದ ಮಿಚೆಲ್ ಮೆಕ್ಲೆನಾಘನ್ ಸೇರಿದಂತೆ ಸ್ಟಾರ್ ಆಟಗಾರರಿದ್ದಾರೆ. ಇತ್ತ ಕ್ರಿಸ್ ಗೇಲ್ ತಂಡದಲ್ಲಿ ಪಾಕಿಸ್ತಾನದ ಶೋಯಿಬ್ ಮಲ್ಲಿಕ್, ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಸೇರಿದಂತೆ ಬಲಿಷ್ಠ ಆಟಗಾರರಿದ್ದಾರೆ.

ಜುಲೈ 25 ರಿಂದ ಆಗಸ್ಟ್ 11ರ ವರೆಗೆ ಕೆನಡಾ ಗ್ಲೋಬಲ್ ಟಿ20 ಟೂರ್ನಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 6 ತಂಡಗಳು ಪಾಲ್ಗೊಳ್ಳುತ್ತಿವೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ಸೌತ್ ಆಫ್ರಿಕಾ ನಾಯಕ ಫಾಫ್ ಡುಪ್ಲೆಸಿಸ್, ಜೆಪಿ ಡುಮಿನಿ, ವೆಸ್ಟ್ ಇಂಡೀಸ್ ಸ್ಪಿನ್ನರ್ ಸುನಿಲ್ ನರೈನ್, ಡ್ಪೇನ್ ಬ್ರಾವೋ, ಡರೆನ್ ಸಮಿ, ಶ್ರೀಲಂಕಾದ ತಿಸರಾ ಪರೇರಾ, ಪಾಕಿಸ್ತಾನದ ಮೊಹಮ್ಮ ಹಫೀಜ್,  ಶಾಹಿದ್ ಅಫ್ರಿದಿ ಸೇರಿದಂತೆ ಸ್ಟಾರ್ ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಳುತ್ತಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಂದ್ಯಕ್ಕೂ ಮೊದಲು ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಗೌರವ ನಮನ ಸೂಚಿಸಿದ ಆರ್‌ಸಿಬಿ
IPL 2026: ಮುಂಬೈ ಎದುರಿನ ಪಂದ್ಯಕ್ಕೆ ಆರ್‌ಸಿಬಿ ತಂಡದಲ್ಲಿ ಒಂದು ಮೇಜರ್ ಚೇಂಜ್; ಪಾಂಡ್ಯ ಪಡೆಯಲ್ಲಿ ಎರಡು ಬದಲಾವಣೆ?