ಸಚಿನ್ ಪುತ್ರಿಗೆ ಕಾಟ ಕೊಡುತ್ತಿದ್ದವ ಆರೆಸ್ಟ್

Published : Jan 08, 2018, 09:44 AM ISTUpdated : Apr 11, 2018, 12:57 PM IST
ಸಚಿನ್ ಪುತ್ರಿಗೆ ಕಾಟ ಕೊಡುತ್ತಿದ್ದವ ಆರೆಸ್ಟ್

ಸಾರಾಂಶ

‘ತಮ್ಮ ಸಂಬಂಧಿಯೊಬ್ಬರಿಂದ ದೂರವಾಣಿ ಸಂಖ್ಯೆ ಪಡೆದಿದ್ದ ದೇಬ್‌ ಕುಮಾರ್, ಸಾರಾರನ್ನು ಮದುವೆಯಾಗಲು ಇಚ್ಛಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ವಾದಿಸುತ್ತಾನೆ, ಜತೆಗೆ ಸಚಿನ್ ಯಾರೆಂದು ಗೊತ್ತಾ ಎಂದು ಕೇಳಿದರೆ ಅವರು ನನ್ನ ಮಾವ ಎಂದು ನಗುತ್ತಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈ(ಜ.08): ಮದುವೆಯಾಗುವಂತೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಪುತ್ರಿ ಸಾರಾಗೆ ಪದೇ ಪದೇ ದೂರವಾಣಿ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಹಾಗೂ ಅಪಹರಣದ ಬೆದರಿಕೆ ಹಾಕಿದ್ದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ದೇಬ್‌ ಕುಮಾರ್ ಮೈಟಿ (32) ಬಂಧಿತ ಆರೋಪಿ. ಕೆಲ ದಿನಗಳಿಂದ ತೆಂಡುಲ್ಕರ್ ಮನೆಗೆ ಆರೋಪಿ ಕರೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಯ ಪತ್ತೆಗಾಗಿ ಮುಂಬೈ ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸಿತ್ತು.

‘ತಮ್ಮ ಸಂಬಂಧಿಯೊಬ್ಬರಿಂದ ದೂರವಾಣಿ ಸಂಖ್ಯೆ ಪಡೆದಿದ್ದ ದೇಬ್‌ ಕುಮಾರ್, ಸಾರಾರನ್ನು ಮದುವೆಯಾಗಲು ಇಚ್ಛಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ವಾದಿಸುತ್ತಾನೆ, ಜತೆಗೆ ಸಚಿನ್ ಯಾರೆಂದು ಗೊತ್ತಾ ಎಂದು ಕೇಳಿದರೆ ಅವರು ನನ್ನ ಮಾವ ಎಂದು ನಗುತ್ತಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಪೇಂಟಿಂಗ್(ಬಣ್ಣ ಬಳಿಯುವ) ಕೆಲಸ ಕೆಲಸ ಮಾಡುತ್ತಿದ್ದು, ಕೆಲ ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗುತ್ತಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಾಂಪಿಯನ್ಸ್ ಅಷ್ಟೇ ಅಲ್ಲ, ಐಪಿಎಲ್‌ನ ಅತ್ಯಂತ ಶ್ರೀಮಂತ ತಂಡವೂ ನಮ್ಮ ಆರ್‌ಸಿಬಿಯೇ! ಬ್ರ್ಯಾಂಡ್ ವ್ಯಾಲ್ಯೂದಲ್ಲಿ CSKಗೆ ಎಷ್ಟನೇ ಸ್ಥಾನ?
ಐಪಿಎಲ್‌ನಲ್ಲಿ ಈ 10 ಆಟಗಾರರ ಮೇಲೆ ಕಣ್ಣಿಡಿ; ಈ ಪಟ್ಟಿಯಲ್ಲಿದ್ದಾರೆ ಕನ್ನಡಿಗ!