
ಮುಂಬೈ(ಜು.11): ಟೀಂ ಇಂಡಿಯಾ ಕೋಚ್ ಯಾರು ಎನ್ನುವ ಕುತೂಹಲ ಇನ್ನೂ ಹಾಗೆ ಉಳಿದುಕೊಂಡಿದೆ. ಬಿಸಿಸಿಐ ಸಲಹಾ ಸಮತಿ ಸದಸ್ಯರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಸಂದರ್ಶನ ನಡೆಸಿದರು. ಗಂಗೂಲಿ-ಲಕ್ಷ್ಮಣ್ ಖುದ್ದು ಹಾಜರಿದ್ದರೆ, ಲಂಡನ್'ನಲ್ಲಿರುವ ಸಚಿನ್ ಸ್ಕೈಪ್ ಮೂಲಕ ಮಾತುಕತೆ ನಡೆಸಿದರು.
ಆದರೆ ಕೋಚ್ ಹೆಸರು ಮಾತ್ರ ಬಹಿರಂಗಪಡಿಸಿಲ್ಲ. ಕಾರಣ ನಾಯಕ ವಿರಾಟ್ ಕೊಹ್ಲಿ, ವಿಂಡೀಸ್ ಟೂರ್ ಮುಗಿಸಿಕೊಂಡು ಭಾರತಕ್ಕೆ ವಾಪಾಸ್ ಬಂದ ನಂತರ ಅವರೊಂದಿಗೆ ಚರ್ಚಿಸಿ ಕೋಚ್ ಹೆಸರನ್ನು ಫೈನಲ್ ಮಾಡಲಾಗುವುದು ಅಂತ ಸೌರವ್ ಗಂಗೂಲಿ ಹೇಳಿದ್ದಾರೆ. ಯಾಕೆಂದರೆ ಎರಡು ವರ್ಷಕ್ಕೆ ಕೋಚ್ ಆಯ್ಕೆ ಮಾಡುವುದು. ಅವರ ಜೊತೆ ಆಡುವುದು ನಾವಲ್ಲ, ನಾಯಕ ಕೊಹ್ಲಿ. ಅವರ ಅಭಿಪ್ರಾಯ ಕೇಳಿ ಮತ್ತೊಮ್ಮೆ ಕೂಲಂಕುಶವಾಗಿ ಚರ್ಚಿಸಿ ಕೋಚ್ ಹೆಸರು ಫೈನಲ್ ಮಾಡಲಾಗುತ್ತದೆ ಅಂತ ದಾದಾ ಹೇಳಿದ್ದಾರೆ.
ಮುಂಬೈನಲ್ಲಿ 10 ಆಕಾಂಕ್ಷಿಗಳಲ್ಲಿ 6 ಮಂದಿಯನ್ನು ಮಾತ್ರ ಸಂದರ್ಶಿಸಲಾಗಿದೆ. ರವಿ ಶಾಸ್ತ್ರಿ, ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ರಿಚರ್ಡ್ ಪೈಬಸ್, ಲಾಲ್'ಚಂದ್ ರಜಪೂತ್, ಫಿಲ್ ಸಿಮ್ಮನ್ಸ್ ಅವರನ್ನು ಸಂದರ್ಶಿಸಲಾಯಿತು. ಅದರಲ್ಲಿ ವೀರೇಂದ್ರ ಸೆಹ್ವಾಗ್ ಸಂದರ್ಶನ ಎರಡು ಗಂಟೆಗೂ ಅಧಿಕ ಕಾಲ ನಡೆದಿರುವುದು ವಿಶೇಷ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.