
ನವದೆಹಲಿ(ಆ.02]: ಮೊದಲ ಬಾರಿಗೆ ರಣಜಿ ಟ್ರೋಫಿಯಲ್ಲಿ ಈಶಾನ್ಯ ರಾಜ್ಯಗಳು ಆಡಲಿದ್ದು, ತಂಡಗಳ ಖರ್ಚು ವೆಚ್ಚವನ್ನು ಸ್ವತಃ ಬಿಸಿಸಿಐ ಭರಿಸುವುದಾಗಿ ತಿಳಿಸಿದೆ.
ತಂಡಕ್ಕೆ ಮಾನ್ಯತೆ ಹೊಂದಿರುವ ಎನ್ಸಿಎ ಕೋಚ್ಗಳು, ಫಿಸಿಯೋ, ಟ್ರೈನರ್’ಗಳನ್ನು ಒದಗಿಸುವುದಾಗಿ ಬಿಸಿಸಿಐ ಸ್ಪಷ್ಟಪಡಿಸಿದೆ. ಸಾಮಾನ್ಯವಾಗಿ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಸಹಾಯಕ ಸಿಬ್ಬಂದಿಗೆ ವೇತನ ಪಾವತಿಸಲಿವೆ. ಆದರೆ ಈಶಾನ್ಯ ರಾಜ್ಯ ತಂಡಗಳ ಪರವಾಗಿ ವೇತನವನ್ನು ಬಿಸಿಸಿಐ ಪಾವತಿಸಲಿದೆ.
ಇದನ್ನು ಓದಿ: ಈ ಬಾರಿಯ ರಣಜಿ ಟೂರ್ನಿಗೆ ಹೊಸ 9 ತಂಡಗಳು ಸೇರ್ಪಡೆ
ಜತೆಗೆ ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶ ತಂಡಗಳಿಗೆ ತವರಿನಲ್ಲಿ ಆಡಲು ಸೂಕ್ತ ಕ್ರೀಡಾಂಗಣಗಳು ಇಲ್ಲದ ಕಾರಣ, ಪಕ್ಕದ ರಾಜ್ಯಗಳ ಕ್ರೀಡಾಂಗಣಗಳನ್ನು ಬಳಕೆ ಮಾಡಿಕೊಳ್ಳಲು ಬಿಸಿಸಿಐ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.