ಕಾವೇರಿ ಕಿಚ್ಚು : ಐಪಿಎಲ್ ಪಂದ್ಯಗಳಿಗೆ ಪೆಟ್ಟು

Published : Apr 11, 2018, 06:46 PM ISTUpdated : Apr 14, 2018, 01:13 PM IST
ಕಾವೇರಿ ಕಿಚ್ಚು : ಐಪಿಎಲ್ ಪಂದ್ಯಗಳಿಗೆ ಪೆಟ್ಟು

ಸಾರಾಂಶ

ಚೆನ್ನೈನಲ್ಲಿ ನಡೆಯುವ ಪಂದ್ಯಗಳು ವಿಶಾಖಪಟ್ಟಣ, ತಿರುವನಂತಪುರ, ಪುಣೆ ಹಾಗೂ ರಾಜ್'ಕೋಟ್ ಕ್ರೀಡಾಂಗಣಗಳಲ್ಲಿ ಸ್ಥಳಾಂತರಗೊಳ್ಳಲಿವೆ.

ಚೆನ್ನೈ(ಏ.11): ತಮಿಳುನಾಡಿನಲ್ಲಿ ಕಾವೇರಿ ಕಿಚ್ಚು ಹೆಚ್ಚಾಗಿರುವ ಕಾರಣದಿಂದ ಚೆನ್ನೈ'ನಲ್ಲಿ ನಡೆಯುವ ಐಪಿಎಲ್ 11ನೇ ಆವೃತ್ತಿಯ ಪಂದ್ಯಗಳು ಸ್ಥಳಾಂತರಗೊಳ್ಳಲಿವೆ.

ಆಡಳಿತಾಧಿಕಾರಿಗಳ ಮಂಡಳಿ ಸಮಿತಿಯ ಮುಖ್ಯಸ್ಥರಾದ  ವಿನೋದ್ ರಾಯ್ ಈ ಬಗ್ಗೆ ಮಾಹಿತಿ ನೀಡಿದ್ದು, ಚೆನ್ನೈನಲ್ಲಿ ನಡೆಯುವ ಪಂದ್ಯಗಳು ವಿಶಾಖಪಟ್ಟಣ, ತಿರುವನಂತಪುರ, ಪುಣೆ ಹಾಗೂ ರಾಜ್'ಕೋಟ್ ಕ್ರೀಡಾಂಗಣಗಳಲ್ಲಿ ಸ್ಥಳಾಂತರಗೊಳ್ಳಲಿವೆ.

ಹಲವು ಸಂಘಟನೆಗಳು ಪಂದ್ಯಗಳಿಗೆ ತೊಂದರೆ ನೀಡುವ ಬಗ್ಗೆ ಬೆದರಿಕೆ ನೀಡುವ ಕಾರಣದಿಂದ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. ನಿನ್ನೆ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾ ಮೇಲೆ ಪ್ರತಿಭಟನಾಕಾರನೊಬ್ಬ ಶೂ ಎಸೆದಿದ್ದ. ನಂತರ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Ind vs SA 3rd T20I: ಹರಿಣಗಳಿಗೆ ತಿರುಗೇಟು ನೀಡುತ್ತಾ ಟೀಂ ಇಂಡಿಯಾ?
ಲಿಯೋನೆಲ್ ಮೆಸ್ಸಿ ನೋಡಲಾಗದೇ ರೊಚ್ಚಿಗೆದ್ದ ಕೋಲ್ಕತಾ! ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಪೊಲೀಸರಿಂದ ಲಾಠಿಚಾರ್ಜ್