
ಜಕಾರ್ತ[ಆ.19]: ಕುಸ್ತಿಯಲ್ಲಿ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಾಳು ಎಂದು ಗುರುತಿಸಿಕೊಂಡಿದ್ದ ಭಾರತದ ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಆರ್ಹತಾ ಸುತ್ತಿನಲ್ಲೇ ಹೊರಬಿದ್ದು ನಿರಾಸೆ ಅನುಭವಿಸಿದ್ದಾರೆ.
ಪುರುಷರ 74 ಕೆ.ಜಿ ಪ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಬಹ್ರೇನ್’ನ ಆ್ಯಡಂ ಬೆಟಿರ್ವ್ ವಿರುದ್ಧ 5-3 ಅಂಕಗಳ ಆಘಾತಕಾರಿ ಸೋಲು ಅನುಭವಿಸಿದ್ದಾರೆ. ಆರಂಭದಲ್ಲಿ 2-1 ಅಂಕಗಳ ಮುನ್ನಡೆ ಕಾಯ್ದುಕೊಂಡಿದ್ದ ಸುಶೀಲ್ ದ್ವಿತಿಯಾರ್ಧದಲ್ಲಿ ಅದೇ ಪ್ರದರ್ಶನ ಕಾಯ್ದುಕೊಳ್ಳಲು ವಿಫಲರಾದರು. ಆಕ್ರಮಣ ಹಾಗೂ ತಾಂತ್ರಿಕ ಕೌಶಲ್ಯ ಮೆರೆದ ಬಹ್ರೇನ್’ನ ಕುಸ್ತಿಪಟು 5-3 ಅಂಕಗಳ ಅಂತರದಲ್ಲಿ ಸುಶೀಲ್’ಗೆ ಸೋಲಿನ ರುಚಿ ತೋರಿಸಿದರು.
ಇನ್ನು 57 ಕೆ.ಜಿ ವಿಭಾಗದ ಕ್ವಾಲಿಫೈಯರ್ ಹಂತದ ಕುಸ್ತಿಯಲ್ಲಿ ಸಂದೀಪ್ ತೋಮರ್ ತುರ್ಕಮೇನಿಸ್ತಾನ್ ತಂಡದ ರುಸ್ತೀಮ್ ನಜರೋವ್ ವಿರುದ್ಧ 12-8 ಅಂಕಗಳ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಲಗ್ಗೆಯಿಟ್ಟಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.