ಆರ್‌ಸಿಬಿ ವಿರುದ್ಧ ಚೆನ್ನೈ ಸೋಲಲು ಅಶ್ವಿನ್‌ ಕಾರಣ?

Published : Apr 23, 2019, 09:40 AM IST
ಆರ್‌ಸಿಬಿ ವಿರುದ್ಧ ಚೆನ್ನೈ ಸೋಲಲು ಅಶ್ವಿನ್‌ ಕಾರಣ?

ಸಾರಾಂಶ

ಆರ್‌ಸಿಬಿ ವಿರುದ್ಧ ಚೆನ್ನೈ ಸೋಲಲು ಅಶ್ವಿನ್‌ ಕಾರಣ?| ಮಂಕಡಿಂಗ್‌ ಎಫೆಕ್ಟ್!| ಬೌಲ್‌ ಮಾಡುವ ಕ್ರೀಸ್‌ ಬಿಡದ ಶಾರ್ದೂಲ್‌

ಬೆಂಗಳೂರು[ಏ.23]: ಆರ್‌ಸಿಬಿ ವಿರುದ್ಧ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೋಲಲು ಆರ್‌.ಅಶ್ವಿನ್‌ ಕಾರಣವೇ?. ಹೀಗೊಂದು ಚರ್ಚೆ ಸಾಮಾಜಿಕ ತಾಣಗಳಲ್ಲಿ ಶುರುವಾಗಿದೆ.

ಈ ಆವೃತ್ತಿಯ ಆರಂಭದಲ್ಲೇ ರಾಜಸ್ಥಾನ ರಾಯಲ್ಸ್‌ನ ಜೋಸ್‌ ಬಟ್ಲರ್‌ರನ್ನು ಮಂಕಡಿಂಗ್‌ ಮೂಲಕ ರನೌಟ್‌ ಮಾಡಿ ವಿವಾದ ಸೃಷ್ಟಿಸಿದ್ದ ಅಶ್ವಿನ್‌, ‘ಬೌಲರ್‌ ಚೆಂಡನ್ನು ಎಸೆಯುವ ಮೊದಲೇ ನಾನ್‌ ಸ್ಟೆ್ರೖಕರ್‌ ಬದಿಯಲ್ಲಿರುವ ಬ್ಯಾಟ್ಸ್‌ಮನ್‌ ಕ್ರೀಸ್‌ ಬಿಟ್ಟು ಲಾಭ ಪಡೆಯುತ್ತಾರೆ. ಅದಕ್ಕೇಕೆ ಅವಕಾಶ ಕೊಡಬೇಕು’ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಮಂಕಡಿಂಗ್‌ ಘಟನೆ ಬಳಿಕ, ನಾನ್‌ ಸ್ಟೆ್ರೖಕರ್‌ ಬದಲಿರುವ ಬ್ಯಾಟ್ಸ್‌ಮನ್‌ಗಳು ಮುಂಚಿತವಾಗಿಯೇ ಕ್ರೀಸ್‌ ಬಿಡಲು ಹಿಂಜರಿಯುತ್ತಿದ್ದಾರೆ.

ಭಾನುವಾರದ ಪಂದ್ಯದಲ್ಲೂ ಆಗಿದ್ದು ಇದೆ. ಕೊನೆ ಎಸೆತದಲ್ಲಿ 2 ರನ್‌ ಬೇಕಿದ್ದಾಗ, ಧೋನಿ ಚೆಂಡಿಗೆ ಬ್ಯಾಟ್‌ ತಗುಲಿಸಲು ವಿಫಲರಾದರು. ಆದರೂ ಒಂದು ಬೈ ರನ್‌ ಕದಿಯುವ ಯತ್ನ ನಡೆಸಿದರು. ಉಮೇಶ್‌ ಯಾದವ್‌ ಚೆಂಡನ್ನು ಎಸೆಯುವ ಮೊದಲು ಶಾರ್ದೂಲ್‌ ಕ್ರೀಸ್‌ ಬಿಟ್ಟಿರಲಿಲ್ಲ. ಹೀಗಾಗಿ ಕೇವಲ 12 ಸೆಂಟಿ ಮೀಟರ್‌ ಅಂತರದಲ್ಲಿ ಶಾರ್ದೂಲ್‌ ರನೌಟ್‌ ಆದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?