ಜೀವನಕ್ಕಾಗಿ ಕುಲ್ಫಿ ಮಾರುತ್ತಿರುವ ಅರ್ಜುನ ಪ್ರಶಸ್ತಿ ವಿಜೇತ ಬಾಕ್ಸರ್..!

Published : Oct 30, 2018, 09:26 AM IST
ಜೀವನಕ್ಕಾಗಿ ಕುಲ್ಫಿ ಮಾರುತ್ತಿರುವ ಅರ್ಜುನ ಪ್ರಶಸ್ತಿ ವಿಜೇತ ಬಾಕ್ಸರ್..!

ಸಾರಾಂಶ

ದಿನೇಶ್ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳಲು ಅವರ ತಂದೆ ಸಾಲ ಮಾಡಿದ್ದರು. ಕೆಲ ವರ್ಷಗಳ ಹಿಂದೆ ರಸ್ತೆ ಅಪಘಾತಕ್ಕೊಳಗಾದ ದಿನೇಶ್ ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚಾಯಿತು. ಸರ್ಕಾರದಿಂದ ಯಾವುದೇ ನೆರವು ಸಿಗದಿದ್ದಾಗ, ಮಾಡಿದ ಸಾಲವನ್ನು ತೀರಿಸಲು ದಿನೇಶ್ ಹರ್ಯಾಣದ ಭಿವಾನಿಯ ರಸ್ತೆಗಳಲ್ಲಿ ಗಾಡಿ ತಳ್ಳುತ್ತಾ ಕುಲ್ಫಿ ಮಾರಾಟ ಮಾಡುವ ಪರಿಸ್ಥಿತಿಗೆ ಸಿಲುಕಿದರು.

ನವದೆಹಲಿ(ಅ.30]: ಕ್ರೀಡಾಪಟುಗಳಿಗೆ ಎಂತೆಂತಾ ಪರಿಸ್ಥಿತಿ ಎದುರಾಗುತ್ತದೆ ಎನ್ನುವುದಕ್ಕೆ ಹರ್ಯಾಣ ಮೂಲದ ರಾಷ್ಟ್ರೀಯ ಬಾಕ್ಸರ್ ದಿನೇಶ್ ಕುಮಾರ್'ರ ಕಥೆಯೇ ಉದಾಹರಣೆ. ದೇಶದ ಅತ್ಯುತ್ತಮ ಬಾಕ್ಸರ್ ಆಗಿ ಗುರುತಿಸಿಕೊಂಡು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ 17 ಚಿನ್ನ, 1 ಬೆಳ್ಳಿ ಹಾಗೂ 5 ಕಂಚಿನ ಪದಕಗಳನ್ನು ಗೆದ್ದಿರುವ ದಿನೇಶ್, ಈಗ ಜೀವನಕ್ಕಾಗಿ ಕುಲ್ಫಿ ಮಾರಾಟ ಮಾಡುತ್ತಿದ್ದಾರೆ.

ಆರ್ಥಿಕ ಸಂಕಷ್ಟ: ದಿನೇಶ್ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳಲು ಅವರ ತಂದೆ ಸಾಲ ಮಾಡಿದ್ದರು. ಕೆಲ ವರ್ಷಗಳ ಹಿಂದೆ ರಸ್ತೆ ಅಪಘಾತಕ್ಕೊಳಗಾದ ದಿನೇಶ್ ಚಿಕಿತ್ಸೆಗೆ ಸಾಕಷ್ಟು
ಹಣ ಖರ್ಚಾಯಿತು. ಸರ್ಕಾರದಿಂದ ಯಾವುದೇ ನೆರವು ಸಿಗದಿದ್ದಾಗ, ಮಾಡಿದ ಸಾಲವನ್ನು ತೀರಿಸಲು ದಿನೇಶ್ ಹರ್ಯಾಣದ ಭಿವಾನಿಯ ರಸ್ತೆಗಳಲ್ಲಿ ಗಾಡಿ ತಳ್ಳುತ್ತಾ ಕುಲ್ಫಿ ಮಾರಾಟ
ಮಾಡುವ ಪರಿಸ್ಥಿತಿಗೆ ಸಿಲುಕಿದರು.

ಎಷ್ಟೇ ಗೋಗರೆದರೂ ಈ ಹಿಂದಿನ ಹಾಗೂ ಹಾಲಿ ಸರ್ಕಾರದಿಂದ ಆರ್ಥಿಕ ನೆರವು ದೊರೆತಿಲ್ಲ. ದಿನದಿಂದ ದಿನಕ್ಕೆ ಸಾಲಗಾರರ ಒತ್ತಡ ಹೆಚ್ಚಾದ ಕಾರಣ, ತಳ್ಳುವ ಗಾಡಿಯಲ್ಲಿ ಕುಲ್ಫಿ ಮಾರಾಟ
ಮಾಡುವುದುನ್ನು ಬಿಟ್ಟು ಬೇರೆ ದಾರಿ ತೋಚಲಿಲ್ಲ’ ಎಂದು ದಿನೇಶ್ ತಮ್ಮ ಅಳಲು ತೋಡಿಕೊಂಡಿದ್ದಾರೆ. ‘ನಾನೊಬ್ಬ ಉತ್ತಮ ಬಾಕ್ಸರ್. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪದಕಗಳನ್ನು ಗೆದ್ದಿದ್ದೇನೆ. ಆದರೆ ಯಾರೂ ಸಹ ನನ್ನ ಪ್ರತಿಭೆಯನ್ನು ಗುರುತಿಸುತ್ತಿಲ್ಲ. ಬಾಕ್ಸಿಂಗ್ ತರಬೇತಿ ನೀಡಲು ಸಹ ನಾನು ಸಿದ್ಧನಿದ್ದೇನೆ. ಆದರೆ ಅದಕ್ಕೂ ಅವಕಾಶಗಳು ಸಿಗುತ್ತಿಲ್ಲ. ಸಾಲ ತೀರಿಸಲು ಬೇರೆ ದಾರಿ ಸಿಗದಿದ್ದಾಗ ಕುಲ್ಫಿ ಮಾರಾಟಕ್ಕಿಳಿದಿದ್ದೇನೆ. ಕ್ರೀಡಾಪಟುವಿನ ನೋವು ಸರ್ಕಾರಗಳಿಗೆ ಅರ್ಥವಾಗುವುದೇ ಇಲ್ಲ’ ಎಂದು ದಿನೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ಎಲ್ಐಸಿ ಕಚೇರಿಯಲ್ಲಿ ಬೆಂಕಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ - ಸಹೋದ್ಯೋಗಿಯಿಂದಲೇ ಎಲ್‌ಐಸಿ ಮಹಿಳಾ ಅಧಿಕಾರಿಯ ಕೊಲೆ
WPL 2026: ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಈ 5 ಬ್ಯಾಟರ್‌ಗಳು ಮುಂಚೂಣಿಯಲ್ಲಿದ್ದಾರೆ!