
ಕಾನ್ಪರ(ಸೆ.26): ಕಾನ್ಪುರದಲ್ಲಿ ಐತಿಹಾಸಿಕ 500ನೇ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಮಾಜಿ ನಾಯಕರನ್ನು ಸನ್ಮಾನಿಸಲಾಗಿತ್ತು.
ಟೀಂ ಇಂಡಿಯಾದ ನಾಯಕನಾಗಿ ಕಾರ್ಯ ನಿರ್ವಹಿಸಿದ್ದ ಕನ್ನಡಿಗ ಅನಿಲ್ ಕುಂಬ್ಳೆಯವರನ್ನೂ ಸನ್ಮಾಯಿಸಲಾಯಿತು. ಅದೇ ಸಮಾರಂಭಲ್ಲಿ ಕೋಚ್ ಅನಿಲ್ ಕುಂಬ್ಳೆ ಅವರ ಕನ್ನಡಕ ಹಾಗೂ ಟೋಪಿ ಕಳುವಾಗಿತ್ತೆಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ!
ಸನ್ಮಾನಗೊಳ್ಳುವವರಿಗಾಗಿ ಮೀಸಲಿರಿಸಿದ್ದ ಆಸನಗಳಲ್ಲಿ ಕುಳಿತಿದ್ದ ಕುಂಬ್ಳೆ, ತಮ್ಮ ಹೆಸರು ಕರೆದಾಗ ತಮ್ಮ ಕನ್ನಡಕ, ಟೋಪಿಯನ್ನು ಕುರ್ಚಿಯ ಮೇಲೆ ಬಿಟ್ಟು ವೇದಿಕೆಯೇರಿದ್ದರು. ಆದರೆ, ಸನ್ಮಾನ ಸ್ವೀಕರಿಸಿ ಹಿಂದಿರುಗಿ ಬರುವಷ್ಟರಲ್ಲಿ ಅವು ಮಂಗಮಾಯವಾಗಿದ್ದನ್ನು ಕಂಡು ಕುಂಬ್ಳೆ ಕಕ್ಕಾಬಿಕ್ಕಿಯಾದರಂತೆ!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.