ದುಲೀಪ್‌ ಟ್ರೋಫಿ ಫೈನಲ್: ಭಾರ​ತ ರೆಡ್‌ಗೆ ಇನ್ನಿಂಗ್ಸ್‌ ಮುನ್ನ​ಡೆ

Published : Sep 07, 2019, 12:19 PM IST
ದುಲೀಪ್‌ ಟ್ರೋಫಿ ಫೈನಲ್: ಭಾರ​ತ ರೆಡ್‌ಗೆ ಇನ್ನಿಂಗ್ಸ್‌ ಮುನ್ನ​ಡೆ

ಸಾರಾಂಶ

ಇಂಡಿಯಾ ರೆಡ್ ಹಾಗೂ ಇಂಡಿಯಾ ಗ್ರೀನ್ ನಡುವಿನ ದುಲಿಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಇಂಡಿಯಾ ರೆಡ್ ತಂಡ ಮೇಲುಗೈ ಸಾಧಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಬೆಂಗ​ಳೂ​ರು[ಸೆ.07]​: ಬಂಗಾ​ಳದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿ​ಮನ್ಯು ಈಶ್ವ​ರನ್‌ನ ಅಮೋಘ 153 ರನ್‌ಗಳ ನೆರ​ವಿ​ನಿಂದ ದುಲೀಪ್‌ ಟ್ರೋಫಿ ಫೈನಲ್‌ನಲ್ಲಿ ಭಾರತ ರೆಡ್‌ ತಂಡ, ಭಾರತ ಗ್ರೀನ್‌ ವಿರು​ದ್ಧ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿ​ಸಿದ್ದು, ಪ್ರಶ​ಸ್ತಿ​ಯತ್ತ ಹೆಜ್ಜೆ ಹಾಕಿದೆ. 

ದುಲೀಪ್‌ ಟ್ರೋಫಿ: ರೆಡ್‌-ಗ್ರೀನ್‌ ಫೈನ​ಲ್‌

ಪಂದ್ಯದ 3ನೇ ದಿನ​ವಾದ ಶುಕ್ರ​ವಾರ 2 ವಿಕೆಟ್‌ ನಷ್ಟಕ್ಕೆ 175 ರನ್‌ ಗಳಿ​ಸಿದ್ದ ಭಾರತ ರೆಡ್‌, ಮೂರನೇ  ದಿನ​ದಂತ್ಯಕ್ಕೆ 6 ವಿಕೆಟ್‌ಗೆ 345 ರನ್‌ ಕಲೆಹಾಕಿ, 114 ರನ್‌ಗಳ ಮುನ್ನಡೆ ಪಡೆ​ದಿತ್ತು. ಇದೀಗ ನಾಲ್ಕನೇ ದಿನದ ಮೊದಲ ಸೆಷನ್ ವೇಳೆಗೆ 388 ರನ್’ಗಳಿಸಿ ಆಲೌಟ್ ಆಯಿತು. ಈ ಮೂಲಕ ಇಂಡಿಯಾ ರೆಡ್ ತಂಡ 157 ರನ್’ಗಳ ಮುನ್ನಡೆ ಪಡೆದಿದೆ. ಅಂಕಿತ್ ರಜಪೂತ್ ಹಾಗೂ ಧರ್ಮೇಂದರ್ ಸಿಂಗ್ ಜಡೇಜಾ ತಲಾ 3 ವಿಕೆಟ್ ಪಡೆದರೆ, ತನ್ವೀರ್ ಉಲ್ ಹಕ್ 2 ಹಾಗೂ ಧೃವ ಶೋರೆ ಮತ್ತು ಮಯಾಂಕ್ ಮಾರ್ಕಂಡೆ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಮೊದಲ ಇನ್ನಿಂಗ್ಸ್‌ನಲ್ಲಿ ಮಯಾಂಕ್ ಮಾರ್ಕಂಡೆ ಅಜೇಯ 76 ರನ್’ಗಳ ನೆರವಿನಿಂದ ಭಾರತ ಗ್ರೀನ್‌  231 ರನ್‌ಗಳಿಗೆ ಆಲೌಟ್‌ ಆಗಿತ್ತು. ಜಯದೇವ್ ಉನಾದ್ಕತ್ 4 ವಿಕೆಟ್ ಪಡೆದು ಮಿಂಚಿದ್ದರು.

ಸ್ಕೋರ್‌:

ಭಾರತ ಗ್ರೀನ್‌ 231/10

ಭಾರತ ರೆಡ್‌ 388/10
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೆಸ್ಸಿ ಭೇಟಿ ವೇಳೆ ಕೋಲ್ಕತಾದಲ್ಲಿ ರಾದ್ಧಾಂತ: ಆಟಗಾರನ ಕಣ್ತುಂಬಿಕೊಳ್ಳಲು ಆಗದ್ದಕ್ಕೆ ಅಭಿಮಾನಿಗಳ ಆಕ್ರೋಶ
ಆರ್‌ಸಿಬಿ ಕಾಲ್ತುಳಿತದ ದುರ್ಘಟನೆ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿ.24ಕ್ಕೆ ಮೊದಲ ಕ್ರಿಕೆಟ್‌ ಪಂದ್ಯ? ಕೊಹ್ಲಿ ಭಾಗಿ