
ನವದೆಹಲಿ: ತರಬೇತುದಾರ ಮೆಮೋಲ್ ರಾಕೀ ಮತ್ತು ಸಹಾಯಕ ಕೋಚ್ ಛೋಬಾ ದೇವಿ ಅವರ ಒಡೆದು ಆಳುವ ನೀತಿಗೆ ಬೇಸತ್ತು ಮಣಿಪುರದ ಏಳು ಮಂದಿ ಮಹಿಳಾ ಆಟಗಾರ್ತಿಯರು ರಾಷ್ಟ್ರೀಯ ತಂಡದಲ್ಲಿ ಆಡಲು ನಿರಾಕರಿಸಿದ್ದಾರೆ.
ಈ ಸಂಬಂಧ ಆಟಗಾರರು ಇದೀಗ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್'ಗೆ ಪತ್ರ ಮುಖೇನ ತಮ್ಮ ಅಹವಾಲು ತಲುಪಿಸಿದ್ದಾರೆ. ಆದರೆ ಈ ಬಗ್ಗೆ ಫುಟ್ಬಾಲ್ ಸಂಸ್ಥೆ ಮಾತ್ರ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕಳೆದ ಐದಾರು ತಿಂಗಳಿಂದ ಕೋಚ್ ಮತ್ತು ಆಟಗಾರರ ನಡುವೆ ಶೀತಲ ಸಮರವೇ ನಡೆದಿದ್ದು, ಇದರಿಂದ ರಾಷ್ಟ್ರೀಯ ತರಬೇತಿ ಶಿಬಿರದ ಮೇಲೆ ಪರಿಣಾಮ ಬೀರುವಂತಾಗಿದೆ. ಬಹಿಷ್ಕಾರ ಹಾಕುವುದಕ್ಕೂ ಮೊದಲೇ ಸಂಸ್ಥೆಯ ಗಮನಕ್ಕೆ ತರಬಹುದಿತ್ತು, ಈಗ ಕೈಮೀರುವ ಹಂತಕ್ಕೆ ತಲುಪಿದೆ ಎಂಬ ಕಾರಣಕ್ಕಾಗಿ ಸಂಸ್ಥೆ ಸ್ವಲ್ಪಮಟ್ಟಿಗೆ ಪ್ರಕರಣದಿಂದ ದೂರವೇ ಉಳಿದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.