ಪಾಕ್ ಸಂಭ್ರಮಾಚರಣೆಗೆ ಅಮಾಯಕ ಬಾಲಕ ಬಲಿ

By Suvarna Web DeskFirst Published Jun 20, 2017, 6:40 PM IST
Highlights

ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಪಾಕ್ ಗೆಲುವು ಸಾಧಿಸುತ್ತಿದ್ದಂತೆ ಭಾನುವಾರ ಪಾಕಿಸ್ತಾನದಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.

ಕರಾಚಿ(ಜೂ.20): ಚಾಂಪಿಯನ್ಸ್ ಟ್ರೋಫಿ ಗೆಲುವಿನ ಉನ್ಮಾದದ ಸಂಭ್ರಮಾಚರಣೆ ಮಾಡುತ್ತಿದ್ದ ವೇಳೆ ಗುಂಡು ಹಾರಿಸಿ ಕುಣಿಯುತ್ತಿದ್ದಾಗ  15 ವರ್ಷದ ಅಮಾಯಕ ಬಾಲಕ ಬಲಿಯಾಗಿರುವ ಘಟನೆ ಕರಾಚಿಯಲ್ಲಿ ನಡೆದಿದೆ.

ಅತ್ತ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಪಾಕ್ ಗೆಲುವು ಸಾಧಿಸುತ್ತಿದ್ದಂತೆ ಭಾನುವಾರ ಪಾಕಿಸ್ತಾನದಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಈ ವೇಳೆ ಕೆಲವರು ಗುಂಡು ಹಾರಿಸಿ ಸಂಭ್ರಮಾಚರಣೆ ನಡೆಸುತ್ತಿದ್ದರು.

ಈ ವೇಳೆ ಸಯ್ಯದ್ ಹುಸೇನ್ ರಾಜಾ ಎಂಬ ಬಾಲಕನಿಗೆ ಗುಂಡು ತಗುಲಿ, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಬಾಲಕ, ಕೊನೆಗೆ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಮೃತಪಟ್ಟಿದ್ದಾನೆ.

ಸಾಯುವ ಮುನ್ನಾ ‘ಪಪ್ಪಾ, ನನಗೆ ಗುಂಡು ತಗುಲಿತು’ ಎನ್ನುತ್ತಾ ಕೊನೆಯುಸಿರೆಳೆದಿದ್ದಾನೆ.

 

click me!