17 ವರ್ಷಗಳ ಬಳಿಕ ಕಾರ್ಟೋಸ್ಯಾಟ್‌ ಉಪಗ್ರಹ ಭೂಮಿಯ ವಾತವರಣಕ್ಕೆ ತರುವಲ್ಲಿ ಇಸ್ರೋ ಯಶಸ್ವಿ!

By Suvarna NewsFirst Published Feb 17, 2024, 11:08 AM IST
Highlights

2007ರಲ್ಲಿ ಉಡಾವಣೆ ಮಾಡಿದ್ದ ಕಾರ್ಟೋಸ್ಯಾಟ್‌ 2 ಉಪಗ್ರಹ ಹಲವು ವರ್ಷಗಳಿಂದ ನಿಷ್ಕ್ರೀಯವಾಗಿತ್ತು. ಆದರೆ ಇಸ್ರೋ ಸತತ ಪ್ರಯತ್ನಗಳ ಮೂಲಕ ಇದೀಗ ಬರೋಬ್ಬರಿ 17 ವರ್ಷಗಳ ಬಳಿಕ ಈ ಉಪಗ್ರಹವನ್ನು ಭೂಮಿಯ ವಾತಾವರಣಕ್ಕೆ ತರುವಲ್ಲಿ ಯಶಸ್ವಿಯಾಗಿದೆ.
 

ಬೆಂಗಳೂರು(ಫೆ.17) ಭಾರತದ ಬಾಹ್ಯಾಕಾಶ ಕೇಂದ್ರ ಇಸ್ರೋ ಪ್ರತಿ ದಿನ ಸಾಧನೆಯ ಮೆಟ್ಟಿಲು ಹತ್ತುತ್ತಿದೆ. ಅತೀ ಕಡಿಮೆ ಖರ್ಚಿನಲ್ಲಿ ಚಂದ್ರನ ಮೇಲೆ ಉಪಗ್ರಹ ಇಳಿಸಿದ ಇಸ್ರೋ, ಬಳಿಕ ಸೂರ್ಯನ ಅಧ್ಯಯನಕ್ಕೆ ಉಪಗ್ರಹ ಉಡಾವಣೆ ಮಾಡಿ ಯಶಸ್ವಿಯಾಗಿದೆ. ಅಮೆರಿಕ, ಚೀನಾ ಸೇರಿದಂತೆ ಬಾಹ್ಯಕಾಶದಲ್ಲಿ ದಿಗ್ಗಜರೆನಿಸಿರುವ ದೇಶಗಳೇ ಇದೀಗ ಇಸ್ರೋ ಮಾಡೆಲ್ ಅನುಸರಿಸಲು ಮುಂದಾಗುತ್ತಿದೆ. ಈ ಬೆಳವಣಿಗೆ ನಡುವೆ ಇಸ್ರೋ ಸಾಧನೆ ಮತ್ತೆ ವಿಶ್ವವನ್ನೇ ಬೆರುಗುಗೊಳಿಸಿದೆ. ಬರೋಬ್ಬರಿ 17 ವರ್ಷಗಳ ಹಿಂದೆ ಉಡಾವಣೆ ಮಾಡಿದ ಕಾರ್ಟೋಸ್ಯಾಟ್‌ 2 ಉಪಗ್ರಹವನ್ನು ಮತ್ತೆ ಸಕ್ರಿಯ ಮಾಡಿ, ಭೂಮಿ ವಾತಾವರಣಕ್ಕೆ ತರುವುಲ್ಲಿ ಇಸ್ರೋ ಯಶಸ್ವಿಯಾಗಿದೆ.

ಹೈ ರೆಸಲ್ಯೂಶನ್‌ ಫೋಟೋಗಳನ್ನು ತೆಗೆಯಬಲ್ಲ 2ನೇ ತಲೆಮಾರಿನ ಉಪಗ್ರಹವಾದ ಕಾರ್ಟೋಸ್ಯಾಟ್-2 ಉಪಗ್ರಹವನ್ನು ಮತ್ತೆ ಭೂಮಿಯ ವಾತಾವರಣಕ್ಕೆ ತರಲಾಗಿದೆ.  ಈ ಉಪಗ್ರಹ ಭೂಮಿಯ ವಾತಾವರಣ ಪ್ರವೇಶಿಸುತ್ತಿದ್ದಂತೆ ಉರಿದು ಬೂದಿಯಾಗಲಿದೆ. ಅವಶೇಷಗಳು ಸಮುದ್ರದಲ್ಲಿ ಬೀಳಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೈಫಲ್ಯ ಭೀತಿಯೇ ಯಶಸ್ಸಿಗೆ ಕಾರಣ: ಇಸ್ರೋ ಅಧ್ಯಕ್ಷ ಸೋಮನಾಥ್‌ ಮುಕ್ತ ಮಾತು

ಈ ಉಪಗ್ರಹವನ್ನು 17 ವರ್ಷಗಳ ಹಿಂದೆ, 2007ರ ಜ.10ರಂದು ಉಡಾವಣೆ ಮಾಡಲಾಗಿತ್ತು. 2019ರವರೆಗೆ 635 ಕಿ.ಮೀ. ಎತ್ತರದಿಂದ ಕಾರ್ಯ ನಿರ್ವಹಿಸಿದ ಈ ಉಪಗ್ರಹ, ನಗರ ಪ್ರದೇಶಗಳ ಪ್ಲಾನಿಂಗ್‌ಗಾಗಿ ಉತ್ತಮ ಚಿತ್ರಗಳನ್ನು ಒದಗಿಸಿತ್ತು. 2019ರ ನಂತರ ಕೆಲಸ ನಿಲ್ಲಿಸಿತ್ತು.

 

Cartosat-2: Atmospheric re-entry
🛰️ Cartosat-2, ISRO's high-resolution imaging satellite, bid adieu with a descent into Earth's atmosphere on February 14, 2024, as predicted.

ISRO had lowered its orbit from 635 km to 380 km by early 2020.

This strategic move minimized space… pic.twitter.com/HJCWONymS9

— ISRO (@isro)

 

ಪ್ರತಿ ದೇಶಗಳು ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ. ಇದರಿಂದ ಬಾಹ್ಯಾಕಾಶದಲ್ಲಿ ಇದೀಗ ನಿಷ್ಕ್ರೀಯಗೊಂಡಿರುವ ಉಪಗ್ರಹಗಳ ಸಂಖ್ಯೆ ಹೆಚ್ಚಿದೆ. ಪ್ರಯೋಗ, ಪ್ರಯತ್ನಗಳಿಂದ ಬಾಹ್ಯಾಕಾಶದಲ್ಲಿನ ಅವಶೇಷಗಳಿಂದ ಮುಂದೊಂದು ದಿನ ಆಪತ್ತು ಸಂಭವಿಸು ಸಾಧ್ಯತೆ ಇದೆ. ಹೀಗಾಗಿ ಇಸ್ರೋ, ನಾಸಾ ಸೇರಿದಂತೆ ಪ್ರಮುಖ ಬಾಹ್ಯಾಕಾಶ ಕೇಂದ್ರಗಳು ಬಾಹ್ಯಾಕಾಶದಲ್ಲಿನ ಅವಶೇಷಗಳನ್ನು ಕಡಿಮೆ ಮಾಡಲು ಮಹತ್ವದ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ಇಸ್ರೋ ನಿರಂತರವಾಗಿ ಪ್ರಯತ್ನ ಮಾಡುತ್ತಿದೆ. 

ಸರಿಯಾದ ಸ್ಥಳದಲ್ಲಿ ಆದಿತ್ಯ ನಿಂತಿದ್ದಾನೆ, ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಹರ್ಷ!

ಬಾಹ್ಯಾಕಾಶದಲ್ಲಿ ಅವಶೇಷಗಳನ್ನು ಕಡಿಮೆ ಮಾಡಬೇಕು ಎಂಬ ನಿಯಮದಂತೆ, ಕಾರ್ಯಸ್ಥಗಿತಗೊಂಡಿರುವ ಈ ಉಪಗ್ರಹವನ್ನು ಇಸ್ರೋ ಭೂವಾತಾವರಣಕ್ಕೆ ತಂದು ಪತನಗೊಳಿಸಿದೆ. ಕಾರ್ಯಾಚರಣೆ ನಿಲ್ಲಿಸಿರುವ ಉಪಗ್ರಹಗಳನ್ನು ಭೂಮಿಯ ವಾತಾವರಣಕ್ಕೆ ತಂದರೆ, ಸೂರ್ಯನ ಶಾಕ ಹಾಗೂ ಭೂಮಿಯ ವಾತಾವರಣದಿಂದ ಈ ಉಪಗ್ರಹಗಳು ಉರಿದು ಬೂದಿಯಾಗಲಿದೆ. ಸಮುದ್ರದ ಮೇಲಿನ ಭೂಮಿಯ ವಾತಾವರಣಕ್ಕೆ ಈ ಉಪಗ್ರಹಗಳನ್ನು ತರಲಾಗುತ್ತದೆ. ಭೂಮಿ ವಾತಾವರಣ ಪ್ರವೇಶಿಸುತ್ತಿದ್ದಂತೆ ಈ ಅವಶೇಷಗಳು ಬೂದಿಯಾಗಲಿದೆ. ಈ ಬೂದಿ ಸಮುದ್ರಕ್ಕೆ ಬೀಳಲಿದೆ. 
 

click me!