ಹಿರಿಯ ಕಲಾವಿದರಿಗೆ ಚಿತ್ರರಂಗದಲ್ಲಿ ಅವಕಾಶವಿಲ್ಲವೆಂದು ಕಾಮಿಡಿ ಸ್ಟಾರ್ ಬೇಸರ!

Published : Nov 12, 2019, 02:17 PM ISTUpdated : Nov 12, 2019, 02:59 PM IST
ಹಿರಿಯ ಕಲಾವಿದರಿಗೆ ಚಿತ್ರರಂಗದಲ್ಲಿ ಅವಕಾಶವಿಲ್ಲವೆಂದು ಕಾಮಿಡಿ ಸ್ಟಾರ್ ಬೇಸರ!

ಸಾರಾಂಶ

ಒಂದು ಕಾಲದಲ್ಲಿ ಪ್ರೇಕ್ಷಕರನ್ನು ನಕ್ಕು-ನಗಿಸುತ್ತಿದ್ದ ಕಾಮಿಡಿ ಸ್ಟಾರ್ ಕನ್ನಡ ಚಿತ್ರರಂಗದಲ್ಲಿ ಅವಕಾಶ ಸಿಗದೆ ಇರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಂದಿನ ಕಾಲದ ಸೂಪರ್ ಕಾಮಿಡಿ ಸ್ಟಾರ್ ಈಗ ನೇಪಥ್ಯಕ್ಕೆ ಸರಿದಿದ್ದಾರೆ.

ವಾಹ್! ಕಾಮಿಡಿ ಅಂದ್ರೆ ಇವರು ಹೊಟ್ಟೆ ನೋವು ಬರಿಸುವಷ್ಟು ನಕ್ಕು-ನಗಿಸುತ್ತಾರೆ. ಇವರು ಅಭಿನಯಿಸಿರುವ ಚಿತ್ರವನ್ನು ಒಂದು ಕಾಲದಲ್ಲಿ ಜನರು ಮಿಸ್‌ ಇಲ್ಲದೇ ನೋಡುತ್ತಿದ್ದರು. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

1.3 ಕೋಟಿ ಮೌಲ್ಯದ ರೇಂಜ್ ರೋವರ್ ಕಾರು ಖರೀದಿಸಿದ ನಟಿ ದಿಶಾ ಪಟಾನಿ!

ಹೌದು! ಆ ಹಾಸ್ಯ ಕಲಾವಿದ ಬೇರಾರು ಅಲ್ಲ ಒನ್ ಆ್ಯಂಡ್ ಒನ್ಲಿ ಟೆನ್ನಿಸ್ ಕೃಷ್ಣ. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಜನರನ್ನು ಮನರಂಜಿಸಿರುವ ಟೆನ್ನಿಸ್ ಕೃಷ್ಣ ಕೆಲ ದಿನಗಳ ಹಿಂದೆ 'ರಾಜಲಕ್ಷ್ಮೀ' ಪ್ರೆಸ್ ಮೀಟ್‌ನಲ್ಲಿ ಹಿರಿಯ ಕಲಾವಿದರಿಗೆ ಅವಕಾಶ ಸಿಗದ ವಿಚಾರದ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.

'ಎಲ್ಲೇ ಹೋದರೂ ಅಭಿಮಾನಿಗಳು ಯಾವ ಸಿನಿಮಾದಲ್ಲಿ ಮಾಡುತ್ತಿದ್ದೀರಿ? ಯಾಕೆ ಇಷ್ಟು ದಿನ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿಲ್ಲ? ಎಂದು ಕೇಳಿದಾಗ ನಾವೇನು ಪ್ರತಿಕ್ರಿಯಿಸಬೇಕು' ಎಂದು ಹೇಳುವ ಮೂಲಕ ಮಾತನ್ನು ಶುರು ಮಾಡಿದರು.

ತೆಲುಗು ಸಿನಿಮಾ 'ಭೀಷ್ಮ'ದಲ್ಲಿ ಅನಂತ್‌ನಾಗ್‌ ಟೈಟಲ್ ರೋಲ್!

 

'ಬೇರೆ ಭಾಷೆಗಳಲ್ಲಿ ಒಬ್ಬ ಕಲಾವಿದನಿಗೆ ಸಾಯುವವರೆಗೂ ಅವಕಾಶ ನೀಡುತ್ತಾರೆ. ಹಿರಿಯ ನಟ ಬ್ರಹ್ಮಾನಂದರಿಗೆ ಅನಾರೋಗ್ಯ ಆಗಿದ್ದಾಗಲೂ ಕಾಲ್‌ ಶೀಟ್‌ಗಾಗಿ ನಿರ್ದೇಶಕರು ಕಾಯುತ್ತಿದ್ದರು. ನಮ್ಮಲ್ಲಿ ಈ ರೀತಿ ಇಲ್ಲ ನಮ್ಮಂತ ಹಿರಿಯ ಕಲಾವಿದರಿಗೆ ಅವಕಾಶ ನೀಡುವುದಿಲ್ಲ. ಸಿನಿಮಾವಿಲ್ಲದೆ ನಾವು ಬೇರೆ ಕಾರ್ಯಕ್ರಮಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದೀವೆ. ಅದರೆ ಅಭಿಮಾನಿಗಳು ಈ ರೀತಿ ಪ್ರಶ್ನೆಗಳು ಕೇಳಿದಾಗ ಏನು ಉತ್ತರ ಕೋಡುವುದು ಅಂತಾನೆ ಗೊತ್ತಾಗಲ್ಲ' ಎಂದು ಹೇಳುವ ಮೂಲಕ ಬೇಸರವನ್ನು ಹೊರ ಹಾಕಿದ್ದಾರೆ.

'ನನಗೆ ಸಿನಿಮಾದಲ್ಲಿ ಅವಕಾಶ ನೀಡಿ ಎಂದು ನಾನು ಕೇಳುತ್ತಿಲ್ಲ. ಒಂದು ಸಿನಿಮಾಗೆ ನನ್ನನ್ನು ಹಾಕಿಕೊಳ್ಳಿ, ಮತ್ತೊಂದರಲ್ಲಿ ಸಿನಿಮಾಗೆ ಬ್ಯಾಂಕ್‌ ಜನಾರ್ಧನ್‌ ಹಾಕಿಕೊಳ್ಳಿ. ಇನ್ನೊಂದರಲ್ಲಿ ಸಿನಿಮಾಗೆ ಹೊನ್ನವಳ್ಳಿ ಕೃಷ್ಣರನ್ನು, ಬಿರಾದರ್‌ರನ್ನು ಹಾಕಿಕೊಳ್ಳಿ. ಚಿತ್ರರಂಗದಲ್ಲಿ ಹಿರಿಯ ಕಲಾವಿದರೂ ಇರಬೇಕು ಎನ್ನುವುದು ನನ್ನ ಮಾತು' ಎಂದು ಮಾತನಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!