ಮುಗಿದುಹೋಗಿದೆ ಈಗ ಪ್ರಯೋಜನವಿಲ್ಲ, ರಶ್ಮಿಕಾ ಬಗ್ಗೆ ಕಾಮೆಂಟ್ ಬೇಡ: ರಕ್ಷಿತ್ ಶೆಟ್ಟಿ

Suvarna News   | Asianet News
Published : Jun 08, 2021, 12:10 PM IST
ಮುಗಿದುಹೋಗಿದೆ ಈಗ ಪ್ರಯೋಜನವಿಲ್ಲ, ರಶ್ಮಿಕಾ ಬಗ್ಗೆ ಕಾಮೆಂಟ್ ಬೇಡ: ರಕ್ಷಿತ್ ಶೆಟ್ಟಿ

ಸಾರಾಂಶ

ಹುಟ್ಟು ಹಬ್ಬದ ದಿನ ಲೈವ್ ಚಾಟ್‌ಗೆ ಬಂದ ರಕ್ಷಿತ್ ಶೆಟ್ಟಿಗೆ ಒಬ್ಬ ವ್ಯಕ್ತಿಯಿಂದ ಬರುತ್ತಿದ್ದ ನಾನ್ ಸ್ಟಾಪ್ ಕಾಮೆಂಟ್ ನೋಡಿ ಬೇಸರ ವ್ಯಕ್ತ ಪಡಿಸಿದ್ದಾರೆ. 

38ರ ಸಂಭ್ರಮಕ್ಕೆ ಕಾಲಿಟ್ಟ ನಟ ರಕ್ಷಿತ್ ಶೆಟ್ಟಿ ಈ ಸಲ ಸರಳವಾಗಿ ಲಾಕ್‌ಡೌನ್‌ ಬರ್ತಡೇ ಮಾಡಿಕೊಂಡಿದ್ದಾರೆ. '777 ಚಾರ್ಲಿ' ಚಿತ್ರದ ಟೀಸರ್ ಹಾಗೂ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಇದೇ ಸಂತೋಷದಲ್ಲಿ ರಕ್ಷಿತ್ ಇನ್‌ಸ್ಟಾಗ್ರಾಂ ಲೈವ್‌ ಬರುವ ಮೂಲಕ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. 

ರಕ್ಷಿತ್ ಆರೋಗ್ಯ, ಸಿನಿಮಾ ಬಗ್ಗೆ ವಿಚಾರಿಸಿದ ನೆಟ್ಟಿಗರು ವೈಯಕ್ತಿಕ ಜೀವನದ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ. ರಕ್ಷಿತ್ ಮದುವೆ ಯಾವಾಗ ಎಂದು ಸದಾ ಚಿಂತಿಸುತ್ತಿರುವ ಅಭಿಮಾನಿಗಳಿಗೆ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಸಿಂಪಲ್ ಸ್ಟಾರ್ ಉತ್ತರ ಕೊಟ್ಟಿದ್ದಾರೆ. ಆದರೆ ಪದೇ ಪದೇ ರಶ್ಮಿಕಾ ಬಗ್ಗೆ ಕಾಮೆಂಟ್ ಬರುತ್ತಿರುವುದನ್ನು ನೋಡಿ ಅಭಿಮಾನಿಗಳಲ್ಲೊಂದು ಮನವಿ ಮಾಡಿಕೊಂಡಿದ್ದಾರೆ.

ಚಾರ್ಲಿ ಜೊತೆ ಬಂದ ರಕ್ಷಿತ್‌ ಶೆಟ್ಟಿಗೆ ಪರಭಾಷಾ ಸ್ಟಾರ್‌ಗಳಿಂದಲೂ ಸಾಥ್! 

'ಇಲ್ಲಿ ಬರುತ್ತಿರುವ ಕೆಲವು ಕಾಮೆಂಟ್ ನೋಡುವುದಕ್ಕೆ ಬೇಜಾರಾಗುತ್ತಿದೆ. ಕಾಮೆಂಟ್‌ಗಳು ನನ್ನ ಬಗ್ಗೆ ಅಲ್ಲ ಬೇರೊಬ್ಬರ ಬಗ್ಗೆ. ನನ್ನ ಮನವಿ ಏನೆಂದರೆ ಹಳೆಯದನ್ನು ಬಿಟ್ಟು ಬಿಡೋಣ. ಮುಗಿದಿದ್ದೆಲ್ಲ ಮುಗಿದು ಹೋಯಿತು. ಅದರ ಬಗ್ಗೆ ಇದೀಗ ಮಾತನಾಡಿ ಪ್ರಯೋಜನವಿಲ್ಲ.ಯಾವ ವ್ಯಕ್ತಿಗೂ ಅಗೌರವ ಮಾಡುವುದು ಬೇಡ. ಅಸಹ್ಯ ಪಟ್ಟುಕೊಳ್ಳುವಂಥ ಕಮೆಂಟ್ ಬೇರೆಯವರ ಬಗ್ಗೆ ಸಹ ಮಾಡಬಾರದು. ಇದು ನನ್ನ ಮನವಿ, ನಾವು ಮೊದಲು ಮಾನವರಾಗೋಣ. ಎಲ್ಲರಿಗೂ ಗೌರವ ಕೊಡೋಣ. ನನ್ನ ಕಾಮೆಂಟ್ ಸೆಕ್ಷನ್‌ನಲ್ಲಿ ಒಳ್ಳೆಯ ಕಾಮೆಂಟ್ಸ್ ನೋಡಲು ಇಷ್ಟ ಪಡುತ್ತೀನಿ,' ಎಂದು ರಕ್ಷಿತ್ ಮಾತನಾಡಿದ್ದಾರೆ. 

ಕಾಮೆಂಟ್‌ನಲ್ಲಿ ಆ ವ್ಯಕ್ತಿ ಯಾರೆಂದು ಎಲ್ಲರಿಗೂ ತಿಳಿದಿದ್ದರೂ, ರಕ್ಷಿತ್ ನೋಡಿದ್ದರೂ ಆ ವ್ಯಕ್ತಿಯ ಹೆಸರು (ಹೇಳುವುದೇ ಬೇಡ ಅಲ್ವಾ? ಅವರು ಬೇರೆ ಯಾರೂ ಅಲ್ಲ ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ) ತೆಗೆಯದೇ ಮಾತನಾಡಿರುವ ರೀತಿಗೆ ಜನರು ನೀವು ಜೆಂಟಲ್‌ಮ್ಯಾನ್‌ ಎಂದು ಮೀಮ್ಸ್ ಮಾಡುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!