ಅನೈ​ತಿ​ಕ ಸಂಬಂಧ: ಗಂಡನನ್ನೇ ಕೊಂದ ಹೆಂಡ್ತಿ , ಪ್ರಿಯ​ಕರನ ಬಂಧ​ನ

By Kannadaprabha NewsFirst Published Oct 15, 2019, 12:59 PM IST
Highlights

ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ್ದ ಹೆಂಡತಿ ಹಾಗೂ ಪ್ರಿಯಕರ ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. 

ರಾಮನಗರ [ಅ.15]:  ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ್ದ ಪ್ರಕರಣವನ್ನು ರಾಮನಗರ ಟೌನ್‌ ಪೊಲೀಸರು ಬೇಧಿ​ಸು​ವಲ್ಲಿ ಯಶ​ಸ್ವಿ​ಯಾ​ಗಿ​ದ್ದಾರೆ.

ನಗ​ರದ ಗೌಸಿಯಾನಗರ ಬಡಾ​ವಣೆ ವಾಸಿ ಸಾಧಿಕ್‌ ಪಾಷ ( 32) ಕೊಲೆ​ಗೀ​ಡಾ​ಗಿದ ವ್ಯಕ್ತಿ. ಆರೋಪಿಗಳಾದ ಮಹಮ್ಮದ್‌ ರಂಜಾನ್‌(20), ಅಸ್ಮಾ ಬಾನು(27) ಬಂಧಿತ ಅರೋಪಿಗಳು.

ಮೃತ ಸಾಧಿಕ್‌ ಪಾಷ ಸೇರಿದಂತೆ ಆರೋಪಿಗಳಾದ ಆತನ ಪತ್ನಿ ಅಸ್ಮಾ ಬಾನು, ಆಕೆಯ ಪ್ರಿಯಕರ ರಂಜಾನ್‌ ಫಿಲೇ​ಚ​ರಿ​ಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಆಸ್ಮಾಬಾನು ಮತ್ತು ರಂಜಾನ್‌ ನಡುವೆ ಪ್ರೇಮಾಂಕುರವಾಗಿದೆ. ಇವರಿಬ್ಬರು ಸೇರಿ ಭಾನುವಾರ ಮನೆಯಲ್ಲಿದ್ದ ಸಾಧಿಕ್‌ ಪಾಷನÜನ್ನು ​ಕೊಲೆ ಮಾಡಿದ್ದಾರೆ.

ಲಟ್ಟಣಿಗೆ ಇಂದ ತಲೆ ಮೇಲೆ ಹೊಡೆದಿದ್ದ​ರಿಂದ ನೆಲಕ್ಕೆ ಬಿದ್ದ ಸಾಧಿಕ್‌ ಪಾಷನ ಮುಖದ ಮೇಲೆ ತಲೆದಿಂಬಿಟ್ಟು ಪತ್ನಿಯೇ ಉಸಿರುಗಟ್ಟುವಂತೆ ಮಾಡಿ​ದರೆ, ಅಲ್ಲೇ ಇದ್ದ ಪ್ರಿಯಕರ ರಂಜಾನ್‌ ಕುತ್ತಿಗೆ ಮೇಲೆ ಕಾಲಿಟ್ಟು ಕೊಲೆ ಮಾಡಿದ್ದಾನೆ. ಘಟನೆ ಬಳಿಕ ತಮಗೇನು ತಿಳಿದೇ ಇಲ್ಲ ಎಂಬಂತೆ ತನ್ನು ಪತಿ ಏಕಾಏಕಿ ಮೃತ ಪಟ್ಟಿದ್ದಾನೆ ಎಂದು ಅಸ್ಮಾ​ಬಾನು ರಾಮನಗರ ಟೌನ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಳು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸ್ಥಳ ಪರಿಶೀಲನೆಗೆ ತೆರೆಳಿದ ಪೊಲೀಸರು, ಮೃತನ ಮೈಮೇಲಿದ್ದ ಗಾಯದ ಗುರುತುಗಳನ್ನು ಕಂಡು ಅನುಮಾನಗೊಂಡಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪೋ​ಪ್ಪಿ​ಕೊಂಡಿ​ದ್ದಾರೆ. ಇಬ್ಬ​ರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾ​ಗಿ​ದೆ. ಆರೋಪಿಗಳಾದ ರಂಜಾನ್‌ ಪಶ್ಚಿಮ ಬಂಗಾಳದವನಾಗಿದ್ದರೆ, ಆಸ್ಮಾ ಭಾನು ಮುಂಬೈ ಮೂಲದವಳು. ಕೊಲೆ ಮಾಡಿದ ಬಳಿಕ ರಂಜಾನ್‌ ಪರಾರಿಯಾಗಲು ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ. ಈ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನೂಪ್‌ ಎ.ಶೆಟ್ಟಿಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಪುರುಷೋತ್ತಮ…, ವೃತ ನಿರೀಕ್ಷಕ ನರಸಿಂಹಮೂರ್ತಿ, ಪಿಎಸ್‌ಐ ಅನಂತ್‌ ರಾಮ್, ಎಎಸ್‌ ಐ ದೇವಕುಮಾರ್‌, ಮುಖ್ಯ ಪೇದೆ ಶರತ್‌ ಕುಮಾರ್‌ ಮತ್ತಿ​ತ​ರರು ಕಾರ್ಯಾ​ಚ​ರ​ಣೆ​ಯಲ್ಲಿ ಪಾಲ್ಗೊಂಡಿ​ದ್ದರು.

click me!