ಪುತ್ರಿ ಶರ್ಮಿಳಾಗಾಗಿ ಪುತ್ರ ಜಗನ್‌ ಪಕ್ಷಕ್ಕೆ ಗುಡ್‌ಬೈ ಹೇಳಿದ ತಾಯಿ

Published : Jul 09, 2022, 10:55 AM IST
ಪುತ್ರಿ ಶರ್ಮಿಳಾಗಾಗಿ ಪುತ್ರ ಜಗನ್‌ ಪಕ್ಷಕ್ಕೆ  ಗುಡ್‌ಬೈ ಹೇಳಿದ ತಾಯಿ

ಸಾರಾಂಶ

ಆಂಧ್ರ ಸಿಎಂ ಜಗನ್‌ ಮೋಹನ್‌ ರೆಡ್ಡಿ ಅಧ್ಯಕ್ಷರಾಗಿರುವ ವೈಎಸ್‌ಆರ್‌ ಕಾಂಗ್ರೆಸ್‌ನ ಗೌರವಾಧ್ಯಕ್ಷೆ ಸ್ಥಾನಕ್ಕೆ ತಾಯಿ ವಿಜಯಮ್ಮ ರಾಜೀನಾಮೆ ನೀಡಿದ್ದಾರೆ. ವೈಎಸ್ಸಾರ್‌ ತೆಲಂಗಾಣ ಪಕ್ಷ ಕಟ್ಟಿರುವ ಪುತ್ರಿಗೆ ನೆರವಾಗುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ  ತಿಳಿಸಿದ್ದಾರೆ.

ಅಮರಾವತಿ (ಜು.9): ಪುತ್ರ ಜಗನ್‌ ಮೋಹನ್‌ ರೆಡ್ಡಿ (YS jagan mohan reddy ) ಅಧ್ಯಕ್ಷರಾಗಿರುವ ವೈಎಸ್‌ಆರ್‌  ಕಾಂಗ್ರೆಸ್‌ ( YSRCongress) ಪಕ್ಷದ ಗೌರವಾಧ್ಯಕ್ಷೆ ಸ್ಥಾನಕ್ಕೆ ಅವರ ತಾಯಿ ವಿಜಯಮ್ಮ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ವಿಜಯಮ್ಮ, ನನ್ನ ಪುತ್ರಿ ಶರ್ಮಿಳಾ ತಮ್ಮ ತಂದೆ ವೈ.ಎಸ್‌.ರಾಜಶೇಖರ ರೆಡ್ಡಿ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ತೆಲಂಗಾಣದಲ್ಲಿ ವೈಎಸ್‌ಆರ್‌ ತೆಲಂಗಾಣ ಪಕ್ಷ ಕಟ್ಟಿಕೊಂಡು ಏಕಾಂಗಿ ಹೋರಾಟ ಮಾಡುತ್ತಿದ್ದಾರೆ. ಈ ಹಂತದಲ್ಲಿ ಅವಳಿಗೆ ನೆರವಾಗುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಓರ್ವ ತಾಯಿಯಾಗಿ ನಾನು ಎಂದೆಂದಿಗೂ ಜಗನ್‌ ಜೊತೆಗಿರುತ್ತೇನೆ. ಆದರೆ ನಾನು ಒಂದೇ ಸಮಯದಲ್ಲಿ ಎರಡು ಪಕ್ಷದ ಕಾರ್ಯಕರ್ತೆಯಾಗಿರುವುದು ಹೇಗೆ ಎಂಬ ಗೊಂದಲ ಮೂಡಿತ್ತು. ಜೊತೆಗೆ ಇದು ಮುಂದಿನ ದಿನಗಳಲ್ಲಿ ವಿವಾದಕ್ಕೂ ಕಾರಣವಾಗುವ ಸಾಧ್ಯತೆ ಇತ್ತು.

ಮೋದಿ ದೂರ ಇಟ್ಟ ಗುಜರಾತ್‌ ಗೆಲ್ಲಲು ಕಾಂಗ್ರೆಸ್‌ ರಣತಂತ್ರ!

ಹೀಗಾಗಿ ಏಕಾಂಗಿಯಾಗಿ ಹೋರಾಡುತ್ತಿರುವ ಮಗಳ ಜೊತೆಗಿರುವ ಅನಿವಾರ್ಯತೆ ಹೆಚ್ಚು ಕಂಡುಬಂದ ಹಿನ್ನೆಲೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌್ನ ಗೌರವಾಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದರು.

ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಜಗನ್‌ ಮತ್ತು ಅವರ ಸೋದರಿ ಶರ್ಮಿಳಾ ನಡುವೆ ಹಲವು ದಿನಗಳಿಂದ ತಿಕ್ಕಾಟ ನಡೆಯುತ್ತಿದೆ ಎನ್ನಲಾಗಿದೆ. ಅದರ ಬೆನ್ನಲ್ಲೇ ವಿಜಯಮ್ಮ ಕೂಡಾ ಕೆಲ ದಿನಗಳಿಂದ ಜಗನ್‌ರಿಂದ ದೂರವಾಗಿದ್ದರು.

Karnataka Assembly Election 2023; ಬೊಮ್ಮಾಯಿಗೆ ಬ್ರಾಂಡ್ ಸೆಟ್ ಮಾಡಲು ರಾಜ್ಯ ಬಿಜೆಪಿ ತಂತ್ರ!

ತಮ್ಮ ಕುಟುಂಬಕ್ಕೆ ಬೆಂಬಲ ನೀಡಿದ ವೈಎಸ್ಆರ್ ಅನುಯಾಯಿಗಳಿಗೆ ಅವರು ಧನ್ಯವಾದ ಅರ್ಪಿಸಿದರು. ವೈಎಸ್‌ಆರ್ ಅವರು ತಮ್ಮ ಎಲ್ಲ ಅನುಯಾಯಿಗಳನ್ನು ತಮ್ಮ ಕುಟುಂಬದವರಂತೆ ನೋಡಿಕೊಂಡರು. ಅವರು ಇಂದಿಗೂ ಜನಮನದಲ್ಲಿ ಜೀವಂತವಾಗಿದ್ದಾರೆ. ನಾನು ನಿಮ್ಮನ್ನು ಆಶೀರ್ವದಿಸಲು ಇಲ್ಲಿಗೆ ಬಂದಿದ್ದೇನೆ ಮತ್ತು ನನ್ನ ಕುಟುಂಬದೊಂದಿಗೆ ನಿಂತಿದ್ದಕ್ಕಾಗಿ ಮತ್ತು ಜನರ ಸೇವೆಗೆ ನಮಗೆ ಸಹಾಯ ಮಾಡಿದ್ದಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೇನೆ ಎಂದು ವಿಜಯಮ್ಮ  ಹೇಳಿದ್ದಾರೆ.

ಜನರ ಆಶೀರ್ವಾದದಿಂದ ವೈಎಸ್‌ಆರ್‌ಸಿಪಿ ಆರಂಭಿಸಲಾಗಿದ್ದು, ರಾಜ್ಯದ ಅಭಿವೃದ್ಧಿಯ ಏಕೈಕ ಉದ್ದೇಶದಿಂದ ತಮ್ಮ ಮಗ ಮುನ್ನಡೆಯುತ್ತಿದ್ದಾರೆ ಎಂದು ವಿಜಯಮ್ಮ ಹೇಳಿದರು. ''ಜಗನ್‌ಗೆ ಅಷ್ಟು ಸುಲಭವಾಗಿ ಯಶಸ್ಸು ಸಿಕ್ಕಿಲ್ಲ. ಅವರು ಸಾಕಷ್ಟು ಹೋರಾಟ ಮಾಡಿದರು.  ತನ್ನ ಮಗ ಯುವಕರಿಗೆ ಮಾದರಿ. ಬಡವರ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಜನಸಾಮಾನ್ಯ ಎಂದು ಈ ವೇಳೆ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ