ಒಡಿಶಾದಲ್ಲಿ ಬ್ರಿಟನ್‌ ರೀತಿ ‘ವಿಪಕ್ಷದ ಸಚಿವ ಸಂಪುಟ’! ಏನಿದು ಶಾಡೋ ಕ್ಯಾಬಿನೆಟ್?

Published : Jul 21, 2024, 05:41 AM ISTUpdated : Jul 22, 2024, 12:46 PM IST
ಒಡಿಶಾದಲ್ಲಿ ಬ್ರಿಟನ್‌ ರೀತಿ ‘ವಿಪಕ್ಷದ ಸಚಿವ ಸಂಪುಟ’! ಏನಿದು ಶಾಡೋ ಕ್ಯಾಬಿನೆಟ್?

ಸಾರಾಂಶ

ಒಡಿಶಾದಲ್ಲಿ ಸತತ 24 ವರ್ಷ ಅಧಿಕಾರ ನಡೆಸಿದ ಬಳಿಕ ಇದೇ ಮೊದಲ ಬಾರಿ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜು ಜನತಾದಳ (ಬಿಜೆಡಿ) ಪಕ್ಷವು ಆಡಳಿತಾರೂಢ ಬಿಜೆಪಿ ಸಚಿವರ ಮೇಲೆ ಕಣ್ಣಿಡಲು ‘ವಿಪಕ್ಷದ ಸಚಿವ ಸಂಪುಟ’ವನ್ನು ನೇಮಿಸಿದೆ.

ಭುವನೇಶ್ವರ (ಜು.2): ಒಡಿಶಾದಲ್ಲಿ ಸತತ 24 ವರ್ಷ ಅಧಿಕಾರ ನಡೆಸಿದ ಬಳಿಕ ಇದೇ ಮೊದಲ ಬಾರಿ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜು ಜನತಾದಳ (ಬಿಜೆಡಿ) ಪಕ್ಷವು ಆಡಳಿತಾರೂಢ ಬಿಜೆಪಿ ಸಚಿವರ ಮೇಲೆ ಕಣ್ಣಿಡಲು ‘ವಿಪಕ್ಷದ ಸಚಿವ ಸಂಪುಟ’ವನ್ನು ನೇಮಿಸಿದೆ.

ಇದು ಬ್ರಿಟನ್ನಿನಲ್ಲಿ ಪ್ರತಿಪಕ್ಷಗಳು ಆಡಳಿತ ಪಕ್ಷದ ವೈಫಲ್ಯಗಳನ್ನು ತಿದ್ದಲು ಆಂತರಿಕವಾಗಿ ನೇಮಿಸಿಕೊಳ್ಳುವ ‘ಶಾಡೋ ಕ್ಯಾಬಿನೆಟ್‌(Shadow Cabinet)’ ಮಾದರಿಯಲ್ಲಿದೆ. ಒಡಿಶಾಕ್ಕೆ ಮರಳಿ ಮುಖ್ಯಮಂತ್ರಿಯಾಗುವುದಕ್ಕೂ ಮುನ್ನ ನವೀನ್‌ ಪಟ್ನಾಯಕ್‌(Naveen Patnaik) ಬ್ರಿಟನ್ನಿನಲ್ಲಿದ್ದರು. ಆಗ ಗಮನಿಸಿದ ಅಲ್ಲಿನ ವಿಪಕ್ಷಗಳ ಕಾರ್ಯವೈಖರಿಯನ್ನೇ ಅವರು ಒಡಿಶಾದಲ್ಲೂ ಅನುಸರಿಸಲು ಮುಂದಾಗಿದ್ದಾರೆ.

 

4 ದಶಕದ ಬಳಿಕ ತೆರೆಯಲಿದೆ ಪುರಿ ಜಗನ್ನಾಥ ದೇಗುಲದ ರತ್ನಭಂಡಾರ!

ಒಡಿಶಾದ ‘ಶಾಡೋ ಕ್ಯಾಬಿನೆಟ್‌’ನಲ್ಲಿ ಆಡಳಿತಾರೂಢ ಪಕ್ಷದ ಸಚಿವರಿಗೆ ಪ್ರತಿಯಾಗಿ ವಿಪಕ್ಷದಲ್ಲೂ ಒಬ್ಬೊಬ್ಬ ಮಾಜಿ ಸಚಿವರನ್ನು ನೇಮಿಸಲಾಗುತ್ತದೆ. ಇದು ಪಕ್ಷದ ಆಂತರಿಕ ವ್ಯವಸ್ಥೆಯಾಗಿರುತ್ತದೆ. ಇದಕ್ಕೆ ಸರ್ಕಾರದ ಮಾನ್ಯತೆ ಇರುವುದಿಲ್ಲ. ಆದರೂ ಈ ‘ವಿಪಕ್ಷ ಸಚಿವರು’ ಆಡಳಿತಾರೂಢ ಪಕ್ಷದ ಪ್ರತಿ ಸಚಿವರ ಕಾರ್ಯವೈಖರಿಯನ್ನೂ ಸಮೀಪದಿಂದ ಗಮನಿಸಿ, ಅವರು ವಿಫಲಗೊಂಡ ವಿಷಯಗಳಲ್ಲಿ ತಮ್ಮದೇ ಆದ ಪರಿಹಾರವನ್ನು ರೂಪಿಸಿ ಸರ್ಕಾರಕ್ಕೆ ಸಲಹೆ ನೀಡಲಿದ್ದಾರೆ. ವಿಧಾನಸಭೆಯ ಅಧಿವೇಶನದಲ್ಲೂ ಈ ‘ವಿಪಕ್ಷ ಸಚಿವರು’ ತಮಗೆ ಒಪ್ಪಿಸಿದ ಇಲಾಖೆಯ ವೈಫಲ್ಯಗಳ ಬಗ್ಗೆ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

ಈ ಮುಸ್ಲಿಂ ಭಕ್ತನೆಂದರೆ ಪುರಿ ಜಗನ್ನಾಥನಿಗೆ ಅನನ್ಯ ಪ್ರೀತಿ, ಭೇಟಿಗಾಗಿ ರಥವನ್ನೇ ನಿಲ್ಲಿಸಿದ ಕಥೆ ನೀವೂ ಕೇಳಿ!

147 ಸದಸ್ಯಬಲದ ಒಡಿಶಾ ವಿಧಾನಸಭೆ(Odisha Legislative Assembly)ಯಲ್ಲಿ ಕೆಲ ತಿಂಗಳ ಹಿಂದಷ್ಟೇ ಬಿಜೆಪಿ 78 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿದೆ. ಬಿಜೆಡಿ(BJD) 51 ಸ್ಥಾನಗಳನ್ನು ಗೆದ್ದಿದೆ. ಮಾಜಿ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರೇ ವಿಪಕ್ಷದ ನಾಯಕರಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌