Raichur: ಬಿ.ಎಲ್‌.ಸಂತೋಷ್ ಅಂದ್ರೆ ಯಾರು? ನನಗಂತೂ ಗೊತ್ತಿಲ್ಲ: ಎಚ್‌ಡಿಕೆ

By Ravi JanekalFirst Published Jan 24, 2023, 10:53 PM IST
Highlights

ಹಳೆ ಮೈಸೂರು ಭಾಗದಲ್ಲಿ ಬಿಜೆಪಿ 40 ಸೀಟು ಗೆಲ್ಲಲಿದೆ ಎಂಬ ಬಿಎಲ್ ಸಂತೋಷ ವಿಚಾರ ಪ್ರಸ್ತಾಪಿಸಿದ ಎಚ್.ಡಿ. ಕುಮಾರಸ್ವಾಮಿಯವರು, ಈ  ಬಿ.ಎಲ್. ಸಂತೋಷ ಯಾರು? ಅವರು ಯಾರು ಅಂತಾ ನನಗಂತೂ ಗೊತ್ತಿಲ್ಲ. ಅವರು 40 ಸೀಟು ಗೆಲುತ್ತಾರೆ ಅಂದ್ರೆ ನಾವು ಯಾಕೆ ಇರಬೇಕು ಎಂದು ಪ್ರಶ್ನಿಸಿದರು.

ರಾಯಚೂರು (ಜ.24) : ವಿಧಾನಸಭೆ ಚುನಾವಣೆ ಸಮೀಪಿಸಿರುವಂತೆ ಪಕ್ಷಗಳ ಪ್ರಚಾರ ಭರಾಟೆ ಜೋರಾಗಿ ನಡೆಯುತ್ತಿದೆ. ಅದರಲ್ಲೂ ಎಚ್‌ಡಿ ಕುಮಾರಸ್ವಾಮಿಯವರ ಪಂಚರತ್ನ ರಥಯಾತ್ರೆ ರಾಜ್ಯಾದ್ಯಂತ ಅಬ್ಬರಿಸುತ್ತಿದೆ.

ಇಂದು ರಾಯಚೂರು ಜಿಲ್ಲೆಗೆ ಎಂಟ್ರಿ ಕೊಟ್ಟಿರುವ ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ರಥಯಾತ್ರೆ ಬರುತ್ತಿದ್ದಂತೆ ಲಿಂಗಸುಗೂರಿನ ಕಸಬಾ ಗ್ರಾಮಸ್ಥರು ಪುಷ್ಪವೃಷ್ಟಿ ಮಾಡಿದರು. ಈ ವೇಳೆ ಕುಮಾರಸ್ವಾಮಿಯವರಿಗೆ  ಜೋಳದ ರೊಟ್ಟಿಯ ಹಾರ ಹಾಕಿ ಎಚ್‌ಡಿ ಕುಮಾರಸ್ವಾಮಿಯವರಿಗೆ ಸಮ್ಮಾನಿಸಿದರು.

Latest Videos

Raichur: ಪ್ರಧಾನಿ ಮೋದಿ 2040ರವರೆಗೆ ಅಧಿಕಾರ ಕೇಳ್ತಾರೆ; ನನಗೆ 5 ವರ್ಷ ಕೊಡಿ ಸಾಕು: ಎಚ್‌ಡಿಕೆ

ಪಂಚರತ್ನ ರಥಯಾತ್ರೆಗೆ ನೀವೆಲ್ಲ ಬೆಂಬಲಿಸಿದ್ದೀರಿ, ನಿಮಗೆಲ್ಲ ನಾನು ಹೃದಯಪೂರ್ವಕ ವಂದನೆ ಸಲ್ಲಿಸುತ್ತೇನೆ ಎಂದು ಕುಮಾರಸ್ವಾಮಿಯವರು. ಕಾಂಗ್ರೆಸ್, ಬಿಜೆಪಿ ಮೊದಲು ರಥಯಾತ್ರೆ ಬಗ್ಗೆ ವ್ಯಂಗ್ಯ ಮಾಡಿದ್ದರು. ಇದೀಗ ರಾಜ್ಯದ ಜನರು ಪಂಚರತ್ನ ರಥಯಾತ್ರೆಗೆ ಬೆಂಬಲಿಸುತ್ತಿರುವುದದನ್ನ ಭಯಪಡುತ್ತಿದ್ದಾರೆ ಎಂದರು.

ಹಳೆ ಮೈಸೂರು ಭಾಗದಲ್ಲಿ ಬಿಜೆಪಿ 40 ಸೀಟು ಗೆಲ್ಲಲಿದೆ ಎಂಬ ಬಿಎಲ್ ಸಂತೋಷ ವಿಚಾರ ಪ್ರಸ್ತಾಪಿಸಿದ ಎಚ್.ಡಿ. ಕುಮಾರಸ್ವಾಮಿಯವರು, ಈ  ಬಿ.ಎಲ್. ಸಂತೋಷ ಯಾರು? ಅವರು ಯಾರು ಅಂತಾ ನನಗಂತೂ ಗೊತ್ತಿಲ್ಲ. ಅವರು 40 ಸೀಟು ಗೆಲುತ್ತಾರೆ ಅಂದ್ರೆ ನಾವು ಯಾಕೆ ಇರಬೇಕು ಎಂದು ಪ್ರಶ್ನಿಸಿದರು.

ಧಮ್ಮು, ತಾಕತ್ತು ಇದ್ರೆ ರೈತರಿಗೆ 24X7 ಕರೆಂಟ್ ಕೋಡ್ರಿ:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ದಮ್ಮು, ತಾಕತ್ತಿನ ಬಗ್ಗೆ ಮಾತಾಡ್ತಾರೆ. ಅವರಿಗೆ ದಮ್ಮು ತಾಕತ್ತು ಇದ್ರೆ ರೈತರ ಸಾಲಮನ್ನಾ ಮಾಡ್ಲಿ, ರೈತರಿಗೆ ದಿನದ ಇಪ್ಪತ್ತು ನಾಲ್ಕು ಗಂಟೆ ಕರೆಂಟ್ ಕೊಡ್ರಿ ಎಂದು ಮಾಜಿ ಸಚಿವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಆಗ್ರಹಿಸಿದರು. 

ಹಾಲುಮತ ಜನರು ಜಾಸ್ತಿ ಇದ್ದಾರೆ ಸಿದ್ದು ಅಂಜಬೇಡ:

ಈ ಭಾಗದಲ್ಲಿ ನಮ್ಮ ಹಾಲುಮತ ಸಮಾಜದ ಜನರು ಜಾಸ್ತಿ ಇದ್ದಾರೆ. ಅವರು ನಿಮ್ಮ ಪರವಾಗಿ ಇದ್ದಾರೆ ಸಿದ್ದು ಬಂಡಿ ನೀನು ಅಂಜಬೇಡ. ನಿನ್ನೊಂದಿಗೆ ನಾವೆಲ್ಲ ಇದ್ದೇವೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸಿದ್ದು ಬಂಡಿಗೆ ದೈರ್ಯ ತುಂಬಿದರು.

ಸಿದ್ದು ಬಂಡಿ ಮಾತು:

ನಾನು ನಿಮಗೆ ಕೈಮುಗಿತಿನಿ, ಕಾಲು ಬಿಳ್ತೀನಿ ನೀವು ನನ್ನ ಕೈಬಿಡಬೇಡಿ: ಬಿಜೆಪಿ, ಕಾಂಗ್ರೆಸ್ ನವ್ರು ಮತದಾರರನ್ನು ಖರೀದಿ ಮಾಡ್ತಾರೆ. ನಾನು ನಿಮಗೆ ಕೈಮುಗಿತಿನಿ, ಕಾಲು ಬಿಳ್ತಿನಿ ನೀವು ನನ್ನ ಕೈಬಿಡಬೇಡಿ. ನನ್ನನ್ನು ಗೆಲ್ಲಿಸಿ ಎಂದು ಕ್ಷೇತ್ರದ ಮತದಾರರಲ್ಲಿ ಜೆಡಿಎಸ್ ಅಭ್ಯರ್ಥಿ ಸಿದ್ದು ಬಂಡಿ ಮನವಿ ಮಾಡಿದರು.

ಕಾರ್ಯಕ್ರಮ ಕೆಡಿಸಿಲು ವಜ್ಜಲ್ ಪ್ರಯತ್ನಿಸಿದ್ರು:

ನಮ್ಮ ಪಂಚರತ್ನ ರಥಯಾತ್ರೆ ಕಾರ್ಯಕ್ರಮವನ್ನು ತಡೆಯಲು ಸಿದ್ದು ಬಂಡಿ ಬಹಳಷ್ಟು ಶ್ರಮಿಸಿದ್ದಾರೆ. ಅವರು ಅಧಿಕಾರಿಗಳ ಮೇಲೆ ಒತ್ತಡ ತಂದು ನಮ್ಮ ಕಾರ್ಯಕ್ರಮದ ಸ್ಥಳ ರದ್ದು ಪಡಿಸುವ ಪ್ರಯತ್ನ ಮಾಡಿದ್ದಾರೆ. ಅವರಿಗೆ ನಮ್ಮ ಶಕ್ತಿ ಎನು ಎಂದು ನೀವೇ ತೋರಿಸಬೇಕೆಂದು ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಮತದಾರರಿಗೆ ಮನವಿ ಮಾಡಿದರು.

ಬಿಜೆಪಿಯವ್ರೇ ಈ ಬಾರಿ ನಿಮ್ಮ ಆಟ ನಡೆಯಲ್ಲ:

ಬಿಜೆಪಿಯವ್ರೆ ನಿಮ್ಮ ಆಟ ಈ ಸಲ ನಡೆಯಲ್ಲ. ಮತದಾರರು ನಮ್ಮ ಪರವಾಗಿದ್ದಾರೆ  ಎಂದು ಸಿದ್ದು ಬಂಡಿ ವಿಶ್ವಾಸ ವ್ಯಕ್ತಪಡಿಸಿದರು. ಕಲ್ಯಾಣ ಕರ್ನಾಟಕ ಅಂತ ಹೆಸರು ಮಾತ್ರ ಬದಲಾವಣೆ ಮಾಡಿದ್ದಾರೆ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕ ಅಂತ ಹೆಸರು ಮಾತ್ರ ಬದಲಾವಣೆ ಮಾಡಿದ್ದಾರೆ. ಆದ್ರೆ ಅವರು ಈ ಭಾಗದ ಜನರ ಪರಿಸ್ಥಿತಿಯನ್ನು ಬದಲಾವಣೆ ಮಾಡಿಲ್ಲ. ಕಲ್ಯಾಣ ಕರ್ನಾಟಕ ಅಂತ ಹೇಳೋಕೆ ನಾಚಿಕೆ ಪಡುವ ಪರಿಸ್ಥಿತಿ ಈ ಭಾಗದಲ್ಲಿ ಇದೆ. ಈ ಭಾಗದ ರಸ್ತೆ, ಮನೆಗಳನ್ನು ನೋಡ್ರಿದೆ ಈ ಸರ್ಕಾರ ಏನು ಅಭಿವೃದ್ಧಿ ಮಾಡಿದೆ ಎಂಬುದು ಅರ್ಥ ಆಗುತ್ತೆ ಎಂದು ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ರಾಯಚೂರಲ್ಲಿ ಪಂಚರತ್ನ ರಥಯಾತ್ರೆ: ಎಚ್‌ಡಿಕೆಗೆ ಡೊಳ್ಳಿನ ಹಾರ ಹಾಕಿ ಭರ್ಜರಿ ಸ್ವಾಗತ!

ಈ ಭಾಗದಲ್ಲಿನ ಮನೆಗಳನ್ನು ರಸ್ತೆಗಳನ್ನು ಚರಂಡಿಗಳನ್ನು ನೋಡಿದಾಗ ಈ ಭಾಗದ ಸಮಸ್ಯೆಗಳು ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. ಬಿಜೆಪಿಯವ್ರು ಅವರು ಈ ಭಾಗದ ಅಭಿವೃದ್ಧಿ ಮಾಡಿದ್ದಾರಾ..? ಶಾಲೆಗಳಲ್ಲಿನ ಶೌಚಾಲಯಗಳು ಸರಿಯಾಗಿಲ್ಲ. ಜನರು ಸಮಸ್ಯೆಗಳಿಂದ ನರಳುತ್ತಿದ್ದಾರೆ. ಈ ಭಾಗದ ಅಭಿವೃದ್ಧಿ ಆಗಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ  ಹೇಳಿದರು. ಮುಂದಿನ ಬಾರಿ ಸ್ಪಷ್ಟ ಬಹುಮತದೊಂದಿಗೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ನಿಮ್ಮ ಎಲ್ಲ ಸಮಸ್ಯೆಗಳಿಗೆ ನಾನು ಪರಿಹಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

click me!