ಶಾಸಕ ಸ್ಥಾನಕ್ಕಿಂದು ವಲಸಿಗ ಶಾಸಕರಲ್ಲೋರ್ವರ ರಾಜೀನಾಮೆ?

By Kannadaprabha NewsFirst Published Aug 15, 2021, 7:11 AM IST
Highlights
  • ಶಾಸಕ ಸ್ಥಾನಕ್ಕಿಮದು ವಲಸಿಗ ಶಾಸಕರಲ್ಲೊರ್ವರ ರಾಜೀನಾಮೆ
  • ರಾಜೀನಾಮೆ ನೀಡುವ ಬಗ್ಗೆ ಶುರುವಾಗಿದೆ ವದಂತಿ
  • ಸಚಿವ ಸ್ಥಾನಕ್ಕಾಗಿ ಅಸಮಾಧಾನ ಗೊಂಡ ಮುಖಂಡ

ಹೊಸಪೇಟೆ (ಆ.15): ಪ್ರಬಲ ಖಾತೆ ಮೇಲೆ ಕಣ್ಣಿಟ್ಟಿರುವ ಸಚಿವ ಆನಂದ್‌ ಸಿಂಗ್‌ ಅವರ ಮುನಿಸು ಇನ್ನೂ ತಣ್ಣಗಾದಂತೆ ಕಾಣಿಸುತ್ತಿಲ್ಲ. 

ನಗರದಲ್ಲಿ 75ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಬೆಂಗಳೂರಿಗೆ ತೆರಳಿ ಸ್ಪೀಕರ್‌ ಅವರನ್ನು ಭೇಟಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. 

'ನಾನು ದೆಹಲಿಗೆ ಹೋಗ್ತೀನಿ ಎಂದಿಲ್ಲ. ಹೋಗೋದು ಇಲ್ಲ. ಯಾರಿಗೆ ಹೇಳಬೇಕು, ಹೇಳಿದ್ದಾಗಿದೆ'

ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದರೂ ಮುಖ್ಯಮಂತ್ರಿಗಳು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಾಗಿ ಶಾಸಕ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸುವ ನಿರ್ಧಾರಕ್ಕೆ ಆನಂದ್‌ ಸಿಂಗ್‌ ಬಂದಿದ್ದಾರೆ ಎಂದು ಅವರ ಆಪ್ತಮೂಲಗಳು ಹೇಳುತ್ತಿವೆ.

click me!