ಮಹಾರಾಷ್ಟ್ರ ವಿಧಾನಸಭೆ ‌ಎಲೆಕ್ಷನ್‌ ಅಖಾಡಕ್ಕೆ ‌ಚುನಾವಣೆ‌‌ ಚಾಣಕ್ಯ ಅಮಿತ್ ಶಾ‌ ಎಂಟ್ರಿ..!

Published : Sep 26, 2024, 09:45 AM IST
ಮಹಾರಾಷ್ಟ್ರ ವಿಧಾನಸಭೆ ‌ಎಲೆಕ್ಷನ್‌ ಅಖಾಡಕ್ಕೆ ‌ಚುನಾವಣೆ‌‌ ಚಾಣಕ್ಯ ಅಮಿತ್ ಶಾ‌ ಎಂಟ್ರಿ..!

ಸಾರಾಂಶ

ಮಹಾರಾಷ್ಟ್ರದ‌ ಕೊಲ್ಲಾಪುರದಲ್ಲಿರುವ ಮಹಾಲಕ್ಷ್ಮಿ ‌ದೇವಾಲಯಕ್ಕೆ ಭೇಟಿ ನೀಡಿದ ಅಮಿತ್‌ ಶಾ ತಾಯಿ ಮಹಾಲಕ್ಷ್ಮಿ ‌ದೇವಿಯ ದರ್ಶನವನ್ನ ಪಡೆದುಕೊಂಡಿದ್ದಾರೆ. ಕೇಂದ್ರ ಗೃಹ ‌ಸಚಿವ ಅಮಿತ್ ಶಾಗೆ‌ ಮಹಾರಾಷ್ಟ್ರ ‌ಡಿಸಿಎಂ ದೇವೇಂದ್ರ ‌ಫಡ್ನವೀಸ್‌ ಸೇರಿ ಹಲವರು‌ ಸಾಥ್ ಕೊಟ್ಟಿದ್ದಾರೆ. 

ಬೆಳಗಾವಿ(ಸೆ.26): ಮಹಾರಾಷ್ಟ್ರ ವಿಧಾನಸಭೆ ‌ಚುನಾವಣೆ ಅಖಾಡಕ್ಕೆ ‌ಚುನಾವಣೆ‌‌ ಚಾಣಕ್ಯ ಅಮಿತ್ ಶಾ‌ ಎಂಟ್ರಿ ಕೊಟ್ಟಿದ್ದಾರೆ. ಹೌದು, ಮಹಾರಾಷ್ಟ್ರ ಚುನಾವಣೆ ಘೋಷಣೆಗೂ‌ ಮುನ್ನವೇ ಅಮಿತ್ ಶಾ‌ ಮಹಾರಾಷ್ಟ್ರಕ್ಕೆ ಭೇಟಿ ನೀಡಿದ್ದಾರೆ. 

ಕೇಂದ್ರ ಸಚಿವ ಅಮಿತ್‌ ಶಾ ಅವರು ಮಹಾರಾಷ್ಟ್ರದ‌ ಶಕ್ತಿ ದೇವತೆ‌ ಮಹಾಲಕ್ಷ್ಮಿ ‌ದೇವಿಯ ಆಶೀರ್ವಾದ ಪಡೆದಿದ್ದಾರೆ.  ಮಹಾರಾಷ್ಟ್ರದ‌ ಕೊಲ್ಲಾಪುರದಲ್ಲಿರುವ ಮಹಾಲಕ್ಷ್ಮಿ ‌ದೇವಾಲಯಕ್ಕೆ ಭೇಟಿ ನೀಡಿದ ಅಮಿತ್‌ ಶಾ ತಾಯಿ ಮಹಾಲಕ್ಷ್ಮಿ ‌ದೇವಿಯ ದರ್ಶನವನ್ನ ಪಡೆದುಕೊಂಡಿದ್ದಾರೆ. 

ಮಹತ್ವದ ನಿರ್ಧಾರ ಘೋಷಿಸಿದ ಅಮಿತ್ ಶಾ, ಪೋರ್ಟ್ ಬ್ಲೇರ್ ಸಿಟಿ ಮರುನಾಮಕರಣ, ಹೊಸ ಹೆಸರೇನು?

ಕೇಂದ್ರ ಗೃಹ ‌ಸಚಿವ ಅಮಿತ್ ಶಾಗೆ‌ ಮಹಾರಾಷ್ಟ್ರ ‌ಡಿಸಿಎಂ ದೇವೇಂದ್ರ ‌ಫಡ್ನವೀಸ್‌ ಸೇರಿ ಹಲವರು‌ ಸಾಥ್ ಕೊಟ್ಟಿದ್ದಾರೆ. ಇದೇ ವೇಳೆ ದೇವಾಲಯ ಟ್ರಸ್ಟ್‌ನಿಂದ ಅಮಿತ್ ಶಾ ಹಾಗೂ ಡಿಸಿಎಂ‌ ಫಡ್ನವಿಸ್‌ಗೆ ಸನ್ಮಾನಿಸಿದ್ದಾರೆ. 

ಯಾವುದೇ ಕ್ಷಣದಲ್ಲೂ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿ ರಾಜ್ಯ ಘಟಕ‌ ನಾಯಕರು, ಚು‌ನಾವಣೆ ಉಸ್ತುವಾರಿಗಳು, ಪದಾಧಿಕಾರಿಗಳ ಜೊತೆ ಅಮಿತ್‌ ಶಾ ಸಭೆ ನಡೆಸಲಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ‌ಸರ್ಕಾರ ಮತ್ತೊಮ್ಮೆ ತರುವ ನಿಟ್ಟಿನಲ್ಲಿ ಅಮಿತ್‌ ಶಾ ರಣತಂತ್ರ ಹೆಣೆಯಲಿದ್ದಾರೆ. ಕರ್ನಾಟಕ ಸಿಎಂ ಸಿದ್ದರಾಮಯ್ಯ ವಿರುದ್ಧದ ‌ಎಫ್ಐಆರ್ ಪ್ರಕರಣದ‌ ಲಾಭ ಪಡೆಯುವ ಬಗ್ಗೆಯೂ ‌ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ