ಎದುರಿಗೆ ಡಿಕೆಶಿ ಸಂಬಂಧಿ ಎಂದ್ರೆ ಸಾಕಾಗೋಲ್ಲ: ಸಿಡಿದೆದ್ದ ಮುದ್ದಹನುಮೇಗೌಡ

Published : May 30, 2022, 04:33 PM ISTUpdated : May 30, 2022, 04:42 PM IST
ಎದುರಿಗೆ ಡಿಕೆಶಿ ಸಂಬಂಧಿ ಎಂದ್ರೆ ಸಾಕಾಗೋಲ್ಲ: ಸಿಡಿದೆದ್ದ ಮುದ್ದಹನುಮೇಗೌಡ

ಸಾರಾಂಶ

* ಕೈ ತಪ್ಪಿದ ರಾಜ್ಯಸಭಾ ಕಾಂಗ್ರೆಸ್ ಟಿಕೆಟ್   * ಕಾಂಗ್ರೆಸ್ ಮಾಜಿ ಸಂಸದ ಮುದ್ದಹನುಮೇಗೌಡ ಅಸಮಧಾನ. * ಕುಣಿಗಲ್ ವಿಧಾನಸಭೆಗೆ ಸ್ಪರ್ಧೆ ಮಾಡಿಯೇ ಮಾಡ್ತೀನಿ ಎಂದ ಮುದ್ದಹನುಮೇಗೌಡ

ತುಮಕೂರು, (ಮೇ.30): ರಾಜ್ಯಸಭಾ ಸ್ಥಾನ ಕೈ ತಪ್ಪಿರುವುದಕ್ಕೆ ಕಾಂಗ್ರೆಸ್‌ ಮಾಜಿ ಸಂಸದ ಮುದ್ದಹನುಮೇಗೌಡ ಅಸಮಧಾನ ವ್ಯಕ್ತಪಡಿಸಿದ್ದಾರೆ. ತುಮಕೂರಿನ ಹೆಬ್ಬೂರು ನಿವಾಸದಲ್ಲಿ ಮಾತನಾಡಿದ ಅವರು,  ನನಗೆ ಉದ್ದೇಶ ಪೂರ್ವಕವಾಗಿಯೇ  ಲೋಕಸಭೆ ಟಿಕೆಟ್‌ ತಪ್ಪಿದ್ರು, ಈ ವಿಚಾರವನ್ನು ಸ್ವತಂ ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಮುದ್ದಹನುಮೇಗೌಡರನ್ನು ಮುಗಿಸುವ ಸಲುವಾಗಿ ನನ್ನ ಇಲ್ಲಿಗೆ ಕರೆ ತಂದು ಸ್ಪರ್ಥಿಸುವಂತೆ ಮಾಡಿದರು ಎಂದು ತುಮಕೂರಿನಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾಜಿ ‌ಪ್ರಧಾನಿ ದೇವೇಗೌಡ ಹೇಳಿದ್ದಾರೆ. ಕಾಂಗ್ರೆಸ್ ನಾಯಕರೇ ಮುದ್ದಹನುಮೇಗೌಡರನ್ನು ಟಾರ್ಗೆಟ್ ಮಾಡಿದರು ಅಂತ ಹೇಳಿದರು, ಇದಕ್ಕೆ ಯಾವೊಬ್ಬ ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡಲಿಲ್ಲ, ದೇವೇಗೌಡರು ಹೇಳಿದ್ದು ಸುಳ್ಳು ಅಂತ ಹೇಳಲಿಲ್ಲ, ವಿನಾಶಕಾರಿ ರಾಜಕಾರಣದ ಸೂತ್ರಧಾರರು ನನಗೆ ಟಿಕೆಟ್‌ ತಪ್ಪಿಸುವ ಕೆಲಸ ಮಾಡಿದ್ದಾರೆ ಕಿಡಿಕಾರಿದರು.

ಪಕ್ಷದ ಮುಖಂಡರು ಸೌಜನ್ಯಕಾದ್ರೂ ನನಗೆ ಕರೆ ಮಾಡಲಿಲ್ಲ. ಲೋಕಸಭೆ ಟಿಕೆಟ್ ಕೈ ತಪ್ಪಿದ ವೇಳೆ ರಾಹುಲ್‌ಗಾಂಧಿ ಮತ್ತು ಆಗಿನ ಜನರಲ್‌ ಸೆಕ್ರೆಟರಿಯಾದ ವೇಣುಗೋಪಾಲ್‌ ಅವರು ರಾಜಸಭೆ ಟಿಕೆಟ್ ನೀಡುವ  ಭರವಸೆ ನೀಡಿದ್ದರು, 2020 ರಾಜಸಭೆಯಲ್ಲಿ ಬೇರೆಯವರಿಗೆ ಅವಕಾಶ ನೀಡಿದರು. ಈಗಿನ ರಾಜ್ಯಸಭೆಯಲ್ಲೂ ನನಗೆ ಅವಕಾಶ ನೀಡಲಿಲ್ಲ, ಕನಿಷ್ಟ ಸೌಜನ್ಯಕ್ಕಾದ್ರೂ ಕರೆ ಮಾಡಲಿಲ್ಲ, ಈ ಕಾರಣಗಳಿಗಾಗಿಯೇ ರಾಜ್ಯಸಭೆ ಟಿಕೆಟ್‌ ನೀಡಲಿಲ್ಲ ಅಂತ ಹೇಳಲಿಲ್ಲ ಎಂದು ಅಸಮಧಾನ ಹೊರಹಾಕಿದರು.

ಮತ್ತೆ ಕೈ ತಪ್ಪಿದ ಟಿಕೆಟ್​: ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ

ಸೌಜನ್ಯಕ್ಕಾದ್ರೂ ನನ್ನ ಜೊತೆಗೆ ಮಾತನಾಡುತ್ತಾರೆ ಎಂಬ ನಿರೀಕ್ಷೆಯಿ.ತ್ತು ಅದು ಕೂಡು ಹುಸಿಯಾಯ್ತು.‌ ನಾನು ರಾಜ್ಯಸಭೆ ಟಿಕೆಟ್‌ ಕೊಡಿ ಅಂತ ಯಾರ ಮನೆ ಬಾಗಿಲಿಗೆ ಹೋಗಲಿಲ್ಲ, ಅರ್ಜಿಯನ್ನು ಸಲ್ಲಿಸಲಿಲ್ಲ,  ಕೊಟ್ಟ ಮಾತನ್ನು ಪಕ್ಷದ ಮುಖಂಡರು ಉಳಿಸಿಕೊಳ್ಳಲಿಲ್ಲ, ಒಂದು ರಾಷ್ಟ್ರೀಯ ಪಕ್ಷ ಕೊಟ್ಟ ಮಾತು ಉಳಿಸಿಕೊಳ್ಳದಿದ್ದಾಗ, ಕಾರ್ಯಕರ್ತರ ನಂಬಿಕೆಯನ್ನು ಕಾಂಗ್ರೆಸ್ ಹೇಗೆ ಉಳಿಸಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.

ವಿನಾಶಕಾರಿ ರಾಜಕಾರಣ ಮಾಡುವವರು ಬಹಳ ಕುಬ್ಜರು. ಕಳೆದ 20-30ವರ್ಷಗಳಿಂದ ಬಿ, ಫಾರಂ, ಸಿ ಫಾರಂ ಅಂತ ಆಟವಾಡಿಸಿದ್ದಾರೆ. ಕುಣಿಗಲ್ ನಾನು ಸ್ಪರ್ಧಿಸುವುದು ಖಚಿತ, ಡಿಕೆ ಶಿವಕುಮಾರ್ ಸಂಬಂಧಿ ಕುಣಿಗಲ್‌ನಲ್ಲಿ ಶಾಸಕರಿರಬಹುದು, ನಾನು ಎದುರಿಗೆ ಸ್ಪರ್ಧಿಸುತ್ತೇನೆ ಅನ್ನೋದು ಸಂಬಂಧವಿಲ್ಲ, ಅಲ್ಲಿ ನಿಲ್ಲುವ ಹಕ್ಕು ನನಗಿದೆ, ಕುಣಿಗಲ್  ತಾಲ್ಲೂಕಿನ ಜನ ನನ್ನ ಸ್ಪರ್ಧೆಯನ್ನು ಇಷ್ಟ ಪಟ್ಟಿದ್ದಾರೆ.ಹೀಗಾಗಿ  ನಾನು ಕುಣಿಗಲ್‌ ನಿಂದ ಸ್ಪರ್ಧಿಸುತ್ತೇನೆ. ನಾನು ಯಾವ ಪಕ್ಷದಿಂದ ಸ್ಪರ್ಧಿಸಬೇಕೆಂದು‌ ಮುಂದಿನ ನಡೆಯನ್ನು ನನ್ನ ಬೆಂಬಲಿಗರ ಜೊತೆಗೆ ಸಭೆ ನಡೆಸಿ ತೀರ್ಮಾನ ಮಾಡ್ತೇನೆ ಎಂದು ಸ್ಪಷ್ಟಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ