
ಪಾಟ್ನಾ(ಮೇ.22): ಕೊರೋನಾ ಕಾಲದಲ್ಲೇ ಅಕ್ಟೋಬರ್ನಲ್ಲಿ ಬಿಹಾರದ ಚುನಾವಣೆ ನಡೆಯಲಿದ್ದು, ಮೋದಿ ಸಾಹೇಬರು ಕೊರೋನಾ ಹೇಗೆ ನಿಭಾಯಿಸಿದರು ಎನ್ನುವ ಜನಾಭಿಪ್ರಾಯದ ಉತ್ತರ ಬಿಹಾರದಿಂದ ಸಿಗಲಿದೆ.
ನಿತೀಶ್ ಕುಮಾರ್ 2015ರಲ್ಲಿ ಇದ್ದಷ್ಟುಈಗ ಜನಪ್ರಿಯರಲ್ಲ. ಆದರೆ ಲಾಲು ಜೈಲಿನಲ್ಲಿದ್ದಾರೆ, ತೇಜಸ್ವಿ ಯಾದವ್ಗೆ ಯಾದವರು, ಮುಸ್ಲಿಂ ಬಿಟ್ಟರೆ ಹೊರಗಡೆ ಜನಪ್ರಿಯತೆ ಇಲ್ಲ. ಇನ್ನು ಲಾಲು ಮನೆಯೊಳಗಡೆ ಯಾದವೀ ಕಲಹ ನಡೆಯುತ್ತಿದೆ. ಈಗಾಗಲೇ ಬಿಹಾರ ಚುನಾವಣೆಗೆ ಬಿಜೆಪಿ ತಯಾರಿ ಶುರುಮಾಡಿದ್ದು, ಮೋದಿ ಮತ್ತು ಅಮಿತ್ ಶಾ ಒಂದು ಸುತ್ತು ಸ್ಥಳೀಯ ನಾಯಕರ ಜೊತೆ ವಿಡಿಯೋ ಚರ್ಚೆ ಕೂಡ ನಡೆಸಿದ್ದಾರೆ.
ಬಿಹಾರದ ಚುನಾವಣೆ ನಿತೀಶ್ ಕುಮಾರ್ ಬಗೆಗಿನ ಜನಮತಗಣನೆ ಹೌದಾದರೂ ಇವತ್ತಿನ ಪರಿಸ್ಥಿತಿಯಲ್ಲಿ ಮೋದಿ ಬಗೆಗಿನ ಅಭಿಪ್ರಾಯ ಕೂಡ ಹೌದು.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.