ಸಿದ್ದು ಸಿಎಂ ಆಗಲಿ ಎಂದ ರಾಮುಲು ರಾಜಕೀಯ ಲೆಕ್ಕಾಚಾರವೇ ಬೇರೆ ಇದೆಯಾ?

Published : Aug 17, 2022, 10:43 AM IST
ಸಿದ್ದು ಸಿಎಂ ಆಗಲಿ ಎಂದ ರಾಮುಲು ರಾಜಕೀಯ ಲೆಕ್ಕಾಚಾರವೇ ಬೇರೆ ಇದೆಯಾ?

ಸಾರಾಂಶ

ಸಿದ್ದು ಸಿಎಂ ಆಗಲಿ ಎಂದಿದ್ದ ಶ್ರೀರಾಮುಲು ಹೇಳಿಕೆ ಹಿಂದೆ ಹತ್ತು ಹಲವು ರಾಜಕೀಯ ಲೆಕ್ಕಾಚಾರವೇ ಅಡಗಿದೆ

ಬಳ್ಳಾರಿ(ಆ.17): ಇದ್ದಕ್ಕಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯರನ್ನ ಹೊಗಳಿದ್ದ ಶ್ರೀರಾಮುಲು ರಾಜಕೀಯ ಲೆಕ್ಕಾಚಾರವೇ ಬೇರೆಯಾಗಿದೆ ಅಂತ ಹೇಳಲಾಗುತ್ತಿದೆ. ಹೌದು, ಸಿದ್ದು ಸಿಎಂ ಆಗಲಿ ಎಂದಿದ್ದ ಶ್ರೀರಾಮುಲು ಹೇಳಿಕೆ ಹಿಂದೆ ಹತ್ತು ಹಲವು ರಾಜಕೀಯ ಲೆಕ್ಕಾಚಾರವೇ ಅಡಗಿದೆ. ಇಷ್ಟು ದಿನ ಎಸ್ಟಿ ಸಮುದಾಯದ ಪ್ರಬಲ ನಾಯಕ ಅಂತಾ ರಾಮುಲು ಬಿಂಬಿಸಿಕೊಳ್ತಾ ಇದ್ರು, ಈಗ ಏಕಾ ಏಕಿ ಎಸ್ಟಿಗೆ ಮಾತ್ರ ಅಲ್ಲ, ಅಹಿಂದಾ ವರ್ಗಗಳ ನಾಯಕ ಅಂತಾ ಬಿಂಬಿಸಿಕೊಳ್ಳೋ ಯತ್ನದಲ್ಲಿದ್ದಾರೆ. 

ಹಿಜಾಬ್, ಹಲಾಲ್ ಕಟ್ ವಿಚಾರದಲ್ಲಿ ಮೌನವಗಿದ್ದ ಶ್ರೀರಾಮುಲು, ಈಗ ಹಿಂದುಳಿದ ವರ್ಗಗಳ ಅಭಿವೃದ್ಧಿ ಮಾಡುವ ಹೆಸರಲ್ಲಿ ಹೊಸ ರಾಜಕೀಯ ತಂತ್ರವನ್ನ ಹೆಣೆದಿದ್ದಾರೆ. ಅಹಿಂದ ಹೆಸರಲ್ಲಿ ಸಿದ್ದರಾಮೋತ್ಸವದಲ್ಲಿ ಸಿದ್ದುಗೆ ಸಿಕ್ಕ ಅಹಿಂದ ಪ್ರೀತಿ‌ ನೋಡಿ ರಾಮುಲು ಈ ತಂತ್ರಕ್ಕೆ ಮೊರೆ ಹೋಗಿದ್ದಾರಂತೆ ಅಂತ ಹೇಳಲಾಗುತ್ತಿದೆ.

Sriramulu Vs Nagendra; ನಾಗೇಂದ್ರ ವೈಲೆಂಟ್ ಆಗ್ತಿದ್ದಂತೆ ಶ್ರೀರಾಮುಲು ಸೈಲೆಂಟ್!

ಎಸ್ಟಿ ಸಮುದಾಯದ ಕೋಟಾದಲ್ಲಿ ಹೋದ್ರೇ ಮುಂದೆಯೂ ಡಿಸಿಎಂ‌ ಸಿಗೋದು ಡೌಟ್, ಈಗ ಅಹಿಂದ ಮಂತ್ರದ ಮೂಲಕ ಶ್ರೀರಾಮುಲು ಹೊಸ ಬಗೆಯ ಪ್ರಯತ್ನವನ್ನ ಮಾಡಿದ್ದಾರೆ. ಇನ್ನೊಂದು ಆಯಾಮದಲ್ಲಿ ನೋಡೋದಾದ್ರೇ,  ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಶ್ರೀರಾಮುಲು ಸ್ಪರ್ಧೆ ಮಾಡಲು ಪ್ಲಾನ್ ಮಾಡ್ತಿದ್ದಾರೆ. ಗ್ರಾಮೀಣ ಕ್ಷೇತ್ರದದಲ್ಲಿ ಅಹಿಂದಾ ಮತಗಳೇ ಹೆಚ್ಚಿರುವ ಕಾರಣ ಅಹಿಂದಾ ಮತ ಓಲೈಕೆ ಶ್ರೀರಾಮುಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. 

ಗ್ರಾಮೀಣ ಕ್ಷೇತ್ರದಲ್ಲಿ  

ಎಸ್.ಟಿ :  55 ಸಾವಿರ
ಮುಸ್ಲಿಂ : 40 ಸಾವಿರ ಎಸ್. ಸಿ.. (ಎಲ್ಲ ವರ್ಗ) 
25 ಸಾವಿರ ಕುರುಬ 
20 ಸಾವಿರ ಲಿಂಗಾಯಿತ

ಉಪ್ಪಾರ, ಬಲಿಜ, ಗಂಗಾ ಮತಸ್ಥ ಇತರೆ  30 ಸಾವಿರ ಮತಗಳಿವೆ

ಇದರಲ್ಲಿ ಅಹಿಂದಾ ಮತಗಳೇ ಇಲ್ಲಿ ನಿರ್ಣಾಯಕವಾಗಿರೋ ಹಿನ್ನೆಲೆಯಲ್ಲಿ ಅಹಿಂದ ನಾಯಕ ಸಿದ್ದರಾಮಯ್ಯರನ್ನ ಶ್ರೀರಾಮುಲು ಹೊಗಳಿದ್ದಾರೆ ಎಂದ ಚರ್ಚೆಗಳು ಆರಂಭವಾಗಿವೆ. ಇದಕ್ಕೆಲ್ಲ ಕಾಲವೇ ಉತ್ತರ ನೀಡಬೇಕಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!
Karnataka News Live: ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!