ಎಚ್‌ಡಿಕೆ ಸಂಪುಟದಲ್ಲಿದ್ದ 8 ಮಂತ್ರಿಗಳ ಭದ್ರತೆ ರದ್ದು

Kannadaprabha News   | Asianet News
Published : Jan 31, 2020, 09:27 AM IST
ಎಚ್‌ಡಿಕೆ ಸಂಪುಟದಲ್ಲಿದ್ದ 8 ಮಂತ್ರಿಗಳ ಭದ್ರತೆ ರದ್ದು

ಸಾರಾಂಶ

ವರ್ಗೀಕೃತ ಭದ್ರತಾ ಶ್ರೇಣಿಗೊಳಪಟ್ಟಿರುವ ‘ಎ’ ಪಟ್ಟಿಯಲ್ಲಿನ ಗಣ್ಯರನ್ನು ಹೊರತುಪಡಿಸಿ ‘ಬಿ’ ಗಣ್ಯರಿಗೆ ಒದಗಿಸಲಾಗಿದ್ದ ಅಂಗರಕ್ಷಕ ಮತ್ತು ನಿವಾಸದ ಭದ್ರತೆಯನ್ನು ಹಿಂಪಡೆಯಲಾಗಿದೆ ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

ಬೆಂಗಳೂರು [ಜ.31]:  ಅಧಿಕಾರದಿಂದ ಕೆಳಗಿಳಿದ ಏಳು ತಿಂಗಳ ಬಳಿಕ ಹಿಂದಿನ ಮೈತ್ರಿ ಸರ್ಕಾರದ ಎಂಟು ಮಾಜಿ ಸಚಿವರಿಗೆ ಕಲ್ಪಿಸಲಾಗಿದ್ದ ವಿಶೇಷ ಭದ್ರತೆಯನ್ನು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಹಿಂಪಡೆದಿದ್ದಾರೆ. ವರ್ಗೀಕೃತ ಭದ್ರತಾ ಶ್ರೇಣಿಗೊಳಪಟ್ಟಿರುವ ‘ಎ’ ಪಟ್ಟಿಯಲ್ಲಿನ ಗಣ್ಯರನ್ನು ಹೊರತುಪಡಿಸಿ ‘ಬಿ’ ಗಣ್ಯರಿಗೆ ಒದಗಿಸಲಾಗಿದ್ದ ಅಂಗರಕ್ಷಕ ಮತ್ತು ನಿವಾಸದ ಭದ್ರತೆಯನ್ನು ಹಿಂಪಡೆಯಲಾಗಿದೆ ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

ಕೆಲವು ಭದ್ರತಾ ಕಾರಣಗಳಿಗೆ ಮಾಜಿ ಸಚಿವರಾದ ಪಿ.ಟಿ.ಪರಮೇಶ್ವರ್‌ ನಾಯ್ಕ್ ಅವರಿಗೆ ಓರ್ವ ಅಂಗರಕ್ಷಕ ಹಾಗೂ ಜಮೀರ್‌ ಅಹಮ್ಮದ್‌ ಖಾನ್‌ ಅವರಿಗೆ ಮೂವರು ಅಂಗರಕ್ಷಕರು ಮತ್ತು ಬೆಂಗಾವಲು ವಾಹನಗಳನ್ನು ಮುಂದುವರೆಸಲಾಗಿದೆ. ಆದರೆ ಅವರಿಗೆ ಇನ್ನುಳಿದ ವಿಶೇಷ ರಕ್ಷಣಾ ಸೌಲಭ್ಯಗಳು ರದ್ದಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

3 ಲಕ್ಷ ಬಾಂಗ್ಲಾದೇಶಿಗಳು ಬೆಂಗಳೂರಿನಲ್ಲಿದ್ದಾರೆ; ಸಾಕ್ಷ್ಯ ಕೊಟ್ಟ ಭಾಸ್ಕರ್ ರಾವ್...

‘ಬಿ’ ಪಟ್ಟಿಗಣ್ಯರು:  ಮಾಜಿ ಸಚಿವರಾದ ಆರ್‌.ವಿ.ದೇಶಪಾಂಡೆ, ಬಂಡೆಪ್ಪ ಕಾಶೆಂಪೂರ್‌, ಆರ್‌.ಬಿ.ತಿಮ್ಮಾಪುರ್‌, ತುಕಾರಾಂ, ರಹೀಂಖಾನ್‌, ಸತೀಶ್‌ ಜಾರಕಿಹೊಳಿ, ಪಿ.ಟಿ.ಪರಮೇಶ್ವರ್‌ ನಾಯ್ಕ್ ಹಾಗೂ ಜಮೀರ್‌ ಅಹಮ್ಮದ್‌ ಖಾನ್‌ ಅವರಿಗೆ ಸರ್ಕಾರದಿಂದ ನೀಡಲಾಗಿದ್ದ ವಿಶೇಷ ಭದ್ರತೆಯನ್ನು ಹಿಂಪಡೆಯಲಾಗಿದೆ.

‘ಎ’ ಪಟ್ಟಿಯ ಗಣ್ಯರು:  ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರಿಗೆ ಝಡ್‌ ಪ್ಲಸ್‌ ರಕ್ಷಣೆ ಮತ್ತು ಪೈಲಟ್‌ ವಾಹನ ಒದಗಿಸಲಾಗಿದೆ. ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್‌ ಮತ್ತು ಎಚ್‌.ಡಿ.ರೇವಣ್ಣ ಅವರಿಗೆ ಝಡ್‌ ಶ್ರೇಣಿ ಭದ್ರತೆ ಮತ್ತು ಡಿ.ಕೆ.ಶಿವಕುಮಾರ್‌ ಹಾಗೂ ಕೆ.ಜೆ.ಜಾರ್ಜ್ ಅವರಿಗೆ ವೈ ಶ್ರೇಣಿ ಭದ್ರತೆ ಮುಂದುವರೆಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಿಎಂ ಫಸಲ್ ಬಿಮಾ ಯೋಜನೆ ದೊಡ್ಡ ಗೋಲ್‌ಮಾಲ್‌: ಸಚಿವ ಈಶ್ವರ್ ಖಂಡ್ರೆ ಗಂಭೀರ ಆರೋಪ
ಶಕ್ತಿ ಯೋಜನೆಯಡಿ 600 ಕೋಟಿಗೂ ಹೆಚ್ಚು ಮಹಿಳೆಯರ ಬಸ್ ಪ್ರಯಾಣ: ಸಚಿವ ರಾಮಲಿಂಗಾರೆಡ್ಡಿ