ಇಡಿ ಬಳಸಿ ಬಿಜೆಪಿ ದ್ವೇಷ ರಾಜಕಾರಣ: ಸಿದ್ದರಾಮಯ್ಯ

Published : Jun 18, 2022, 04:15 AM IST
ಇಡಿ ಬಳಸಿ ಬಿಜೆಪಿ ದ್ವೇಷ ರಾಜಕಾರಣ: ಸಿದ್ದರಾಮಯ್ಯ

ಸಾರಾಂಶ

*   ಬಿಜೆಪಿ ಹೇಳುವುದು ಸತ್ಯವೂ ಅಲ್ಲ, ಶ್ರೇಷ್ಠವೂ ಅಲ್ಲ *  ಕಾಂಗ್ರೆಸ್‌ನಿಂದ ಅಸೋಸಿಯೇಟೆಡ್‌ ಜರ್ನಲ್‌ ಲಿಮಿಟೆಡ್‌ಗೆ ಸಾಲ *  ಸಾಲ ತೀರಿಸದ ಕಾರಣ, ಆಸ್ತಿಯನ್ನು ಈಕ್ವಿಟಿಯಾಗಿ ಬದಲಾಯಿಸಲಾಗಿದೆ   

ಹುಬ್ಬಳ್ಳಿ(ಜೂ.18):  ಇ.ಡಿ. ಬಳಸಿಕೊಂಡು ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್‌ ವರಿಷ್ಠರಾದ ಸೋನಿಯಾ ಗಾಂಧಿ-ರಾಹುಲ್‌ ಗಾಂಧಿ ಅವರ ವರ್ಚಸ್ಸಿಗೆ ಧಕ್ಕೆ ತರಲು ದುರುದ್ದೇಶದಿಂದ ಷಡ್ಯಂತ್ರ ಮಾಡಲಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನಿಂದ ಅಸೋಸಿಯೇಟೆಡ್‌ ಜರ್ನಲ್‌ ಲಿಮಿಟೆಡ್‌ಗೆ ಸಾಲ ನೀಡಲಾಗಿದೆ. ಸಾಲ ತೀರಿಸದ ಕಾರಣ, ಆಸ್ತಿಯನ್ನು ಈಕ್ವಿಟಿಯಾಗಿ ಬದಲಾಯಿಸಲಾಗಿದ್ದು, ಅದು ಯಂಗ್‌ ಇಂಡಿಯಾ ಕಂಪನಿ ಮೂಲಕ ನಡೆದಿದೆ. ಪ್ರಕರಣದಲ್ಲಿ ಎಲ್ಲಿ ಅಪರಾಧ ಆಗಿದೆ ಎಂಬುದನ್ನು ಹೇಳುತ್ತಿಲ್ಲ. ಸುಳ್ಳು ಕೇಸ್‌ ಹಾಕಿ, ಕಿರುಕುಳ ನೀಡಲು, ಕಾಂಗ್ರೆಸ್‌ ನಾಯಕರ ವರ್ಚಸ್ಸು ಕಡಿಮೆ ಮಾಡಲು ಹುನ್ನಾರ ನಡೆಸಲಾಗಿದೆ. ಅದಕ್ಕೆ ನಮ್ಮ ವಿರೋಧವಿದೆ ಎಂದರು.

ಸಿದ್ದರಾಮಯ್ಯ ವಿರುದ್ಧ ಅಟ್ರಾಸಿಟಿ ಕೇಸ್, ಬಂಧಿಸಿ ನ್ಯಾಯ ಒದಗಿಸುವಂತೆ ಒತ್ತಾಯ

ಬಿಜೆಪಿ ಹೇಳುವುದು ಸತ್ಯವೂ ಅಲ್ಲ, ಶ್ರೇಷ್ಠವೂ ಅಲ್ಲ. 1937ರಲ್ಲಿ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಆರಂಭವಾಯಿತು. ಸ್ವಾತಂತ್ರ್ಯದ ಜನಜಾಗೃತಿಗಾಗಿ ಪತ್ರಿಕೆ ಕೆಲಸ ಮಾಡಿತ್ತು. ನಂತರ ಅದು ನಷ್ಟದಲ್ಲಿತ್ತು. ಅದಕ್ಕೆ ಕಾಂಗ್ರೆಸ್‌ನವರು .90 ಕೋಟಿ ಸಾಲ ನೀಡಿದ್ದರು. ಆ ಸಾಲವನ್ನು ಯಂಗ್‌ ಇಂಡಿಯಾ ಕಂಪನಿಗೆ ಷೇರ್‌ ಆಗಿ ಬದಲಾಯಿಸಲಾಗಿದೆ ಎಂದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌
ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ