ಬಿಜೆಪಿಗೆ ಸಡ್ಡು ಹೊಡೆಯಲು ಸಜ್ಜಾಯ್ತು ಪಡೆ : ಮತ್ತೊಂದು ಮೈತ್ರಿ

Kannadaprabha News   | Asianet News
Published : Mar 05, 2021, 10:22 AM IST
ಬಿಜೆಪಿಗೆ ಸಡ್ಡು ಹೊಡೆಯಲು ಸಜ್ಜಾಯ್ತು ಪಡೆ : ಮತ್ತೊಂದು ಮೈತ್ರಿ

ಸಾರಾಂಶ

ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಸಡ್ಡು ಹೊಡೆಯಲು ನಾಯಕರು ಸಜ್ಜಾಗಿದ್ದು, ಮತ್ತೊಂದು ಮೈತ್ರಿ ನಡೆಯುವುದು ಖಚಿತವಾಗಿದೆ. ಬೆಂಬಲ ನೀಡುವ ಘೊಷಣೆಯೂ ಆಗಿದೆ. 

 ಕೋಲ್ಕತ್ತ (ಮಾ.05): ಆರ್‌ಜೆಡಿ, ಸಮಾಜವಾದಿ ಪಕ್ಷದ ಬಳಿಕ ಇದೀಗ ಶಿವಸೇನೆ ಸಹ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದೆ, ತೃಣಮೂಲಕ ಕಾಂಗ್ರೆಸ್‌ ಪರಮೋಚ್ಚ ನಾಯಕಿ ಮಮತಾ ಬ್ಯಾನರ್ಜಿಗೆ ಬೆಂಬಲ ನೀಡುವುದಾಗಿ ಘೋಷಿಸಿದೆ. 

ಈ ಮೂಲಕ ಪಶ್ಚಿಮ ಬಂಗಾಳದಲ್ಲೂ ಶಿವಸೇನೆ ಬಿಜೆಪಿಗೆ ಸೆಡ್ಡು ಹೊಡೆದಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಶಿವಸೇನೆ ಸಂಸದ ಸಂಜಯ್‌ ರಾವುತ್‌, ‘ಶಿವಸೇನೆ ಬಂಗಾಳದಲ್ಲಿ ಸ್ಪರ್ಧಿಸುತ್ತಾ ಅಥವಾ ಇಲ್ಲವೇ ಎಂಬ ಬಗ್ಗೆ ಹಲವರಿಗೆ ಕುತೂಹಲ ಇತ್ತು. 

 

ಸದ್ಯ ಬಂಗಾಳಲ್ಲಿ ಹಣ, ತೋಳ್ಬಲ, ಮಾಧ್ಯಮ ಎಲ್ಲವೂ ಮಮತಾ ದೀದಿಯ ವಿರುದ್ಧವಾಗಿವೆ. ಆದರೆ ಶಿವಸೇನೆ ಬಂಗಾಳದಲ್ಲಿ ಸ್ಪರ್ಧಿಸದೆ ಟಿಎಂಸಿಗೆ ತನ್ನ ಬೆಂಬಲ ನೀಡಲು ನಿರ್ಧರಿಸಿದೆ. ಮಮತಾ ದೀದಿಗೆ ಘರ್ಜಿಸುವ ಜಯ ಸಿಗಲಿ ಎಂಬುದು ನಮ್ಮ ಆಶಯ. ಏಕೆಂದರೆ ದೀದಿ ಬಂಗಾಳ ನಿಜವಾದ ಹೆಣ್ಣು ಹುಲಿ ಎಂದು ನಾವು ಭಾವಿಸಿದ್ದೇವೆ’ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಮಾಜಿ ಗರ್ಲ್‌ಫ್ರೆಂಡ್ ಬಾಂಬ್
ಜನರೊಂದಿಗೆ ಸಂಪರ್ಕ ಸಾಧಿಸಿ, ಸೋಶಿಯಲ್ ಮೀಡಿಯಾ ಬಳಸಿ: ಸಂಸದರಿಗೆ ಮೋದಿ ಕರೆ