ಯಡಿಯೂರಪ್ಪ ಬರ್ತಡೇ ನೆಪದಲ್ಲಿ ಶಿರಾ ಶಾಸಕ ರಾಜೇಶ್ ಗೌಡ ಭರ್ಜರಿ ಪ್ರಚಾರ ಕಾರ್ಯ!

Published : Feb 28, 2023, 01:18 AM IST
ಯಡಿಯೂರಪ್ಪ ಬರ್ತಡೇ ನೆಪದಲ್ಲಿ ಶಿರಾ ಶಾಸಕ ರಾಜೇಶ್ ಗೌಡ ಭರ್ಜರಿ ಪ್ರಚಾರ ಕಾರ್ಯ!

ಸಾರಾಂಶ

ಯಡಿಯೂರಪ್ಪ‌ನವರ ಯಾವ ಜನ್ಮದಿನವನ್ನು ಕೂಡ  ಆಚರಣೆ ಮಾಡದ ಶಾಸಕರುಗಳು, ಮುಖಂಡರು, ಟಿಕೆಟ್ ಆಕಾಂಕ್ಷಿಗಳು, ಈ ಭಾರಿ ಮುಗಿ ಬಿದ್ದು ಯಡಿಯೂರಪ್ಪಗೆ ತಮ್ಮ ತಮ್ಮ ಕ್ಷೇತ್ರದಲ್ಲೇ ಬರ್ತ್ ಡೇ ಪಂಕ್ಷನ್ ಮಾಡಿದ್ದಾರೆ. ಸಿಕ್ಕ ಅವಕಾಶವನ್ನು ಶಿರಾ ಶಾಸಕ ರಾಜೇಶ್ ಗೌಡ ಭರ್ಜರಿಯಾಗಿ ಬಳಕೆ ಮಾಡಿಕೊಂಡಿದ್ದಾರೆ. 

ತುಮಕೂರು ಫೆ.27 : 2023ರ ವಿಧಾನಸಭೆ ಚುನವಣೆಯ ಅಬ್ಬರದ ಪ್ರಚಾರ ಕಾವೇರಿದೆ.  ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸುತ್ತಾಟವೂ ಕೂಡ ಜೋರಾಗಿದೆ. 

ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರ ಮನೆಯಲ್ಲಿ ಜರುಗುವ ಸಣ್ಣ ಸಣ್ಣ ಸಮಾರಂಭಗಳಿಗೆ ಟಿಕೆಟ್ ಆಕಾಂಕ್ಷಿಗಳು ಎಡತಾಕುತ್ತಿದ್ದಾರೆ. ಈ ಮಧ್ಯೆ ಇಂದು ನಡೆದ ಮಾಜಿ ಸಿಎಂ ಯಡಿಯೂರಪ್ಪ ನವರ ಜನ್ಮುಮದಿನದವನ್ನು ಬಿಜೆಪಿ ಮುಖಂಡರು ಸಂಭ್ರಮದಿಂದ ಆಚರಿಸುವ ಮೂಲಕ ಬರ್ತ್ ಡೇ ನೆಪದಲ್ಲಿ ಮತಗಳಿಗೆ ಮುಂದಾಗಿದ್ದಾರೆ. 

ಸವಲತ್ತುಗಳಿಂದ ಆರ್ಥಿಕವಾಗಿ ಸಬಲರಾಗಬೇಕು : ಸಚಿವ ಎಸ್ ಅಂಗಾರ

ಯಡಿಯೂರಪ್ಪ‌ನವರ ಯಾವ ಜನ್ಮದಿನವನ್ನು ಕೂಡ  ಆಚರಣೆ ಮಾಡದ ಶಾಸಕರುಗಳು, ಮುಖಂಡರು, ಟಿಕೆಟ್ ಆಕಾಂಕ್ಷಿಗಳು, ಈ ಭಾರಿ ಮುಗಿ ಬಿದ್ದು ಯಡಿಯೂರಪ್ಪಗೆ ತಮ್ಮ ತಮ್ಮ ಕ್ಷೇತ್ರದಲ್ಲೇ ಬರ್ತ್ ಡೇ ಪಂಕ್ಷನ್ ಮಾಡಿದ್ದಾರೆ. ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಕೆ ಮಾಡಿಕೊಂಡಿದ್ದಾರೆ. 

ಯಡಿಯೂರಪ್ಪ ಅವರ ಬರ್ತಡೇ  ಶಿರಾದಲ್ಲಿ ಅದ್ದೂರಿಯಾಗಿ ಆಚರಿಸಲಾಯ್ತು. ಮಾಜಿ ಸಿಎಂ ಯಡಿಯೂರಪ್ಪ(BS Yadiyurappa) ಬರ್ತ್ ಡೇ(Birthday)ಗೆ ಹಳ್ಳಿ ಸೊಗಡಿನ ಟಚ್ ಕೊಟ್ಟ ಶಿರಾ ಕ್ಷೇತ್ರದ ಬಿಜೆಪಿ ಶಾಸಕ ರಾಜೇಶ್ ಗೌಡ(MLA Rajesh gowda) ಭರ್ಜರಿ ಎತ್ತಿನಗಾಡಿ ಸವಾರಿ ನಡೆಸಿದ್ದಾರೆ. ಬಲೂನ್, ಬಾಳೇ ಕಂದಿನ ಸಿಂಗಾರದ ಎತ್ತಿನಗಾಡಿಯಲ್ಲಿ, ಕೊಂಬು ಕಹಳೆ, ಅರೆ ವಾದ್ಯ ಮೇಳೈಸಿದ ಶೃಂಗಾರದಲ್ಲಿ ರೋಡ್ ಶೋ ನಡೆಸಿ ಮತಭೇಟಿಯಾಡಿದ್ದಾರೆ. 

ಶಿಗ್ಗಾವಿ ಜನರು ದೈವಭಕ್ತರು, ಸಜ್ಜನರು: ಸಿಎಂ ಬಸವರಾಜ ಬೊಮ್ಮಾಯಿ

ತುಮಕೂರು(Tumakuru) ಜಿಲ್ಲೆ ಶಿರಾ ತಾಲ್ಲೂಕಿನ ಮದ್ದಾಕ್ನಹಳ್ಳಿ ಗೊಲ್ಲರಹಟ್ಟಿಯಲ್ಲಿ ಬರ್ತ್ ಡೇ  ಮಾಡಲಾಗಿದೆ. ಯಡಿಯೂರಪ್ಪ ಹುಟ್ಟು ಹಬ್ಬ ಆಚರಿಸುತ್ತಲೇ ಮತ ಪ್ರಚಾರ ನಡೆಸಿದ ರಾಜೇಶ್ ಗೌಡ ಬಿ.ಎಸ್.ವೈ.ಫೋಟೊಗೆ ಪುಷ್ಪನಮನ ಸಲ್ಲಿಸಿ, ಕಾರ್ಯಕರ್ತರ ಜೊತೆಗೆ ಸೇರಿ ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!