ರಮೇಶ್‌ ಜಾರಕಿಹೊಳಿ ಮತ್ತೆ ದೆಹಲಿಗೆ, ಇಂದು ಅಮಿತ್‌ ಶಾ ಭೇಟಿ ಸಂಭ​ವ

Published : Feb 09, 2023, 01:39 PM IST
ರಮೇಶ್‌ ಜಾರಕಿಹೊಳಿ ಮತ್ತೆ ದೆಹಲಿಗೆ, ಇಂದು ಅಮಿತ್‌ ಶಾ ಭೇಟಿ ಸಂಭ​ವ

ಸಾರಾಂಶ

ತಮ್ಮ ಆಪ್ತ ಕಿರಣ್‌ ಜಾಧವ್‌ ಹಾಗೂ ಹಿಂಡಲಗಾ ಗ್ರಾಪಂ ಅಧ್ಯಕ್ಷ ನಾಗೇಶ್‌ ಮನ್ನೋಳಕರ್‌ರೊಂದಿಗೆ ಬುಧವಾರ ದೆಹಲಿಗೆ ಪ್ರಯಾಣ ಬೆಳೆಸಿರುವ ರಮೇಶ್‌ ಜಾರಕಿಹೊಳಿ, ಸಾಧ್ಯವಾದರೆ ಗುರುವಾರ ಮತ್ತೆ ಕೇಂದ್ರ ಸಚಿವ ಅಮಿತ್‌ ಶಾರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ: ಸಿಡಿ ಕೇಸ್‌ ಅನ್ನು ಸಿಬಿಐ ತನಿ​ಖೆ​ಗೊ​ಪ್ಪಿಸುವಂತೆ ಕೋರಿ ಇತ್ತೀ​ಚೆ​ಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್‌ ಶಾರನ್ನು ಭೇಟಿ​ಯಾಗಿ ಬಂದಿದ್ದ ಮಾಜಿ ಸಚಿವ ರಮೇಶ್‌ ಜಾರ​ಕಿ​ಹೊಳಿ ಇದೀಗ ಮತ್ತೆ ದೆಹ​ಲಿಯತ್ತ ಮುಖ​ಮಾ​ಡಿ​ದ್ದಾ​ರೆ. ಈ ವೇಳೆ ಸೀಡಿ ವಿಚಾ​ರ​ವಾಗಿ ಮತ್ತೆ ಅಮಿತ್‌ ಶಾರನ್ನು ಭೇಟಿಯಾಗಿ ಮನವಿ ಸಲ್ಲಿ​ಸ​ಲಿ​ರುವ ಅವರು, ಬೆಳ​ಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾ​ಳ​ಕರ್‌ ವಿರುದ್ಧ ತಮ್ಮ ಆಪ್ತ​ನಿಗೆ ಟಿಕೆಟ್‌ ನೀಡು​ವಂತೆ ವರಿ​ಷ್ಠರ ಮನ​ವೊ​ಲಿ​ಸುವ ಪ್ರಯ​ತ್ನ​ವನ್ನೂ ನಡೆ​ಸ​ಲಿ​ದ್ದಾ​ರೆಂದು ಮೂಲ​ಗಳು ತಿಳಿ​ಸಿ​ವೆ.

ತಮ್ಮ ಆಪ್ತ ಕಿರಣ್‌ ಜಾಧವ್‌ ಹಾಗೂ ಹಿಂಡಲಗಾ ಗ್ರಾಪಂ ಅಧ್ಯಕ್ಷ ನಾಗೇಶ್‌ ಮನ್ನೋಳಕರ್‌ರೊಂದಿಗೆ ಬುಧವಾರ ದೆಹಲಿಗೆ ಪ್ರಯಾಣ ಬೆಳೆಸಿರುವ ರಮೇಶ್‌ ಜಾರಕಿಹೊಳಿ, ಸಾಧ್ಯವಾದರೆ ಗುರುವಾರ ಮತ್ತೆ ಕೇಂದ್ರ ಸಚಿವ ಅಮಿತ್‌ ಶಾರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. ಕಳೆದ ವಾರ ಸಿಡಿ ವಿಚಾರ ಮುಂದಿ​ಟ್ಟು​ಕೊಂಡು ರಮೇಶ್‌ ಜಾರ​ಕಿ​ಹೊಳಿ ಅವರು ಅಮಿತ್‌ ಶಾರನ್ನು ಭೇಟಿ​ಯಾ​ಗಿ​ದ್ದರು. ಆಗ ರಮೇಶ್‌ ಜಾರ​ಕಿ​ಹೊಳಿ ಅವ​ರನ್ನು ಮತ್ತೊಮ್ಮೆ ಕರೆಸಿ ಮಾತ​ನಾ​ಡುವ ಭರ​ವ​ಸೆ​ಯನ್ನು ಅಮಿತ್‌ ಶಾ ನೀಡಿ​ದ್ದ​ರು.

ಇದನ್ನು ಓದಿ: India Gate: ಅಮಿತ್‌ ಶಾಗೆ ರಮೇಶ್‌ ಸಿಡಿ ತೋರಿಸಿದರೋ ಅಥವಾ ಆಡಿಯೋ ಕೇಳಿಸಿದರೋ?

ಆಪ್ತನ ಕಣ​ಕ್ಕಿ​ಳಿ​ಸಲು ತಯಾ​ರಿ: ರಾಜಕೀಯ ಬದ್ಧವೈರಿ ಲಕ್ಷ್ಮೀ ಹೆಬ್ಬಾಳಕರ್‌ರನ್ನು ಹೇಗಾ​ದರೂ ಮಾಡಿ ಮಣಿ​ಸುವ ಶಪಥ ಮಾಡಿ​ರುವ ರಮೇಶ್‌ ಜಾರ​ಕಿ​ಹೊಳಿ ಈ ಬಾರಿ ಅವರ ವಿರುದ್ಧ ತಮ್ಮ ಆಪ್ತ ನಾಗೇಶ್‌ ಮನ್ನೋಳಕರ್‌ರನ್ನು ಕಣಕ್ಕಿಳಿಸಲು ತಯಾರಿ ನಡೆಸಿದ್ದಾರೆ. ಇದೇ ಕಾರ​ಣಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಮನ್ನೋಳಕರ್‌ರನ್ನು ದೆಹ​ಲಿಗೆ ಕರೆದೊಯ್ದಿದ್ದಾರೆ. ಹೈಕಮಾಂಡ್‌ ಅನ್ನು ಭೇಟಿಯಾಗಿ ತಮ್ಮ ಆಪ್ತನಿಗೇ ಟಿಕೆಟ್‌ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಮರಾಠಿಗರ ಪ್ರಾಬಲ್ಯವಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅದೇ ಸಮುದಾಯಕ್ಕೆ ಸೇರಿ​ದ​ವ​ರಿಗೆ ಟಿಕೆಟ್‌ ನೀಡಿದರೆ ಒಳಿತು ಎಂಬುದನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊ​ಡಲೂ ರಮೇಶ್‌ ಜಾರಕಿಹೊಳಿ ಮುಂದಾಗಿದ್ದಾರೆ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ: ಅಮಿತ್‌ ಶಾಗೆ ಸಿಡಿ ಷಡ್ಯಂತ್ರ ದಾಖಲೆ ನೀಡಿದೆ: ರಮೇಶ್‌ ಜಾರಕಿಹೊಳಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌