ರಮೇಶ್‌ ಜಾರಕಿಹೊಳಿ ಮತ್ತೆ ದೆಹಲಿಗೆ, ಇಂದು ಅಮಿತ್‌ ಶಾ ಭೇಟಿ ಸಂಭ​ವ

By Kannadaprabha NewsFirst Published Feb 9, 2023, 1:39 PM IST
Highlights

ತಮ್ಮ ಆಪ್ತ ಕಿರಣ್‌ ಜಾಧವ್‌ ಹಾಗೂ ಹಿಂಡಲಗಾ ಗ್ರಾಪಂ ಅಧ್ಯಕ್ಷ ನಾಗೇಶ್‌ ಮನ್ನೋಳಕರ್‌ರೊಂದಿಗೆ ಬುಧವಾರ ದೆಹಲಿಗೆ ಪ್ರಯಾಣ ಬೆಳೆಸಿರುವ ರಮೇಶ್‌ ಜಾರಕಿಹೊಳಿ, ಸಾಧ್ಯವಾದರೆ ಗುರುವಾರ ಮತ್ತೆ ಕೇಂದ್ರ ಸಚಿವ ಅಮಿತ್‌ ಶಾರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ: ಸಿಡಿ ಕೇಸ್‌ ಅನ್ನು ಸಿಬಿಐ ತನಿ​ಖೆ​ಗೊ​ಪ್ಪಿಸುವಂತೆ ಕೋರಿ ಇತ್ತೀ​ಚೆ​ಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್‌ ಶಾರನ್ನು ಭೇಟಿ​ಯಾಗಿ ಬಂದಿದ್ದ ಮಾಜಿ ಸಚಿವ ರಮೇಶ್‌ ಜಾರ​ಕಿ​ಹೊಳಿ ಇದೀಗ ಮತ್ತೆ ದೆಹ​ಲಿಯತ್ತ ಮುಖ​ಮಾ​ಡಿ​ದ್ದಾ​ರೆ. ಈ ವೇಳೆ ಸೀಡಿ ವಿಚಾ​ರ​ವಾಗಿ ಮತ್ತೆ ಅಮಿತ್‌ ಶಾರನ್ನು ಭೇಟಿಯಾಗಿ ಮನವಿ ಸಲ್ಲಿ​ಸ​ಲಿ​ರುವ ಅವರು, ಬೆಳ​ಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾ​ಳ​ಕರ್‌ ವಿರುದ್ಧ ತಮ್ಮ ಆಪ್ತ​ನಿಗೆ ಟಿಕೆಟ್‌ ನೀಡು​ವಂತೆ ವರಿ​ಷ್ಠರ ಮನ​ವೊ​ಲಿ​ಸುವ ಪ್ರಯ​ತ್ನ​ವನ್ನೂ ನಡೆ​ಸ​ಲಿ​ದ್ದಾ​ರೆಂದು ಮೂಲ​ಗಳು ತಿಳಿ​ಸಿ​ವೆ.

ತಮ್ಮ ಆಪ್ತ ಕಿರಣ್‌ ಜಾಧವ್‌ ಹಾಗೂ ಹಿಂಡಲಗಾ ಗ್ರಾಪಂ ಅಧ್ಯಕ್ಷ ನಾಗೇಶ್‌ ಮನ್ನೋಳಕರ್‌ರೊಂದಿಗೆ ಬುಧವಾರ ದೆಹಲಿಗೆ ಪ್ರಯಾಣ ಬೆಳೆಸಿರುವ ರಮೇಶ್‌ ಜಾರಕಿಹೊಳಿ, ಸಾಧ್ಯವಾದರೆ ಗುರುವಾರ ಮತ್ತೆ ಕೇಂದ್ರ ಸಚಿವ ಅಮಿತ್‌ ಶಾರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. ಕಳೆದ ವಾರ ಸಿಡಿ ವಿಚಾರ ಮುಂದಿ​ಟ್ಟು​ಕೊಂಡು ರಮೇಶ್‌ ಜಾರ​ಕಿ​ಹೊಳಿ ಅವರು ಅಮಿತ್‌ ಶಾರನ್ನು ಭೇಟಿ​ಯಾ​ಗಿ​ದ್ದರು. ಆಗ ರಮೇಶ್‌ ಜಾರ​ಕಿ​ಹೊಳಿ ಅವ​ರನ್ನು ಮತ್ತೊಮ್ಮೆ ಕರೆಸಿ ಮಾತ​ನಾ​ಡುವ ಭರ​ವ​ಸೆ​ಯನ್ನು ಅಮಿತ್‌ ಶಾ ನೀಡಿ​ದ್ದ​ರು.

ಇದನ್ನು ಓದಿ: India Gate: ಅಮಿತ್‌ ಶಾಗೆ ರಮೇಶ್‌ ಸಿಡಿ ತೋರಿಸಿದರೋ ಅಥವಾ ಆಡಿಯೋ ಕೇಳಿಸಿದರೋ?

ಆಪ್ತನ ಕಣ​ಕ್ಕಿ​ಳಿ​ಸಲು ತಯಾ​ರಿ: ರಾಜಕೀಯ ಬದ್ಧವೈರಿ ಲಕ್ಷ್ಮೀ ಹೆಬ್ಬಾಳಕರ್‌ರನ್ನು ಹೇಗಾ​ದರೂ ಮಾಡಿ ಮಣಿ​ಸುವ ಶಪಥ ಮಾಡಿ​ರುವ ರಮೇಶ್‌ ಜಾರ​ಕಿ​ಹೊಳಿ ಈ ಬಾರಿ ಅವರ ವಿರುದ್ಧ ತಮ್ಮ ಆಪ್ತ ನಾಗೇಶ್‌ ಮನ್ನೋಳಕರ್‌ರನ್ನು ಕಣಕ್ಕಿಳಿಸಲು ತಯಾರಿ ನಡೆಸಿದ್ದಾರೆ. ಇದೇ ಕಾರ​ಣಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಮನ್ನೋಳಕರ್‌ರನ್ನು ದೆಹ​ಲಿಗೆ ಕರೆದೊಯ್ದಿದ್ದಾರೆ. ಹೈಕಮಾಂಡ್‌ ಅನ್ನು ಭೇಟಿಯಾಗಿ ತಮ್ಮ ಆಪ್ತನಿಗೇ ಟಿಕೆಟ್‌ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಮರಾಠಿಗರ ಪ್ರಾಬಲ್ಯವಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅದೇ ಸಮುದಾಯಕ್ಕೆ ಸೇರಿ​ದ​ವ​ರಿಗೆ ಟಿಕೆಟ್‌ ನೀಡಿದರೆ ಒಳಿತು ಎಂಬುದನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊ​ಡಲೂ ರಮೇಶ್‌ ಜಾರಕಿಹೊಳಿ ಮುಂದಾಗಿದ್ದಾರೆ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ: ಅಮಿತ್‌ ಶಾಗೆ ಸಿಡಿ ಷಡ್ಯಂತ್ರ ದಾಖಲೆ ನೀಡಿದೆ: ರಮೇಶ್‌ ಜಾರಕಿಹೊಳಿ

click me!