ತುರುಸಿನ ಸ್ಪರ್ಧೆ ನೀಡಿ ಗಮನ ಸೆಳೆದ ರಾಜೀವ್ ಚಂದ್ರಶೇಖರ್

Published : Jun 05, 2024, 07:53 AM IST
ತುರುಸಿನ ಸ್ಪರ್ಧೆ ನೀಡಿ ಗಮನ ಸೆಳೆದ ರಾಜೀವ್ ಚಂದ್ರಶೇಖರ್

ಸಾರಾಂಶ

ಮತ ಎಣಿಕೆಯ ಅಂತ್ಯಕ್ಕೆ ತರೂರ್ 3,53,679 ಮತ ಪಡೆದರೆ, ರಾಜೀವ್‌ 3,37,920 ಮತ ಹಾಗೂ ರವೀಂದ್ರನ್‌ 2,44,433 ಮತ ಪಡೆದರು. ಈ ಮೂಲಕ ರಾಜೀವ್‌ರಿಂದ ಸಾಕಷ್ಟು ಆತಂಕದ ಕ್ಷಣ ಎದುರಿಸಿ 4ನೇ ಬಾರಿಗೆ ತರೂರ್‌ ಆಯ್ಕೆಯಾದರು.

ತಿರುವನಂತಪುರಂ(ಜೂ.05):  ಕೇರಳದ ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಕಾಂಗ್ರೆಸ್‌ನ ಶಶಿ ತರೂರ್ ವಿರುದ್ಧ 16 ಸಾವಿರ ಮತಗಳಿಂದ ಸೋತಿದ್ದಾರೆ. ಆದರೆ ಸೋಲುವ ಮುನ್ನ ಹಲವು ಸುತ್ತುಗಳಲ್ಲಿ ರಾಜೀವ್‌ ಅವರು ಮುನ್ನಡೆ ಸಾಧಿಸಿ ತುರುಸಿನ ಸ್ಪರ್ಧೆ ನೀಡಿ ಗಮನ ಸೆಳೆದಿದ್ದಾರೆ.

ಮತ ಎಣಿಕೆಯ ಆರಂಭಿಕ ಗಂಟೆಗಳಲ್ಲಿ ಚಂದ್ರಶೇಖರ್ ಮತ್ತು ತರೂರ್ ನಡುವಿನ ಹಣಾಹಣಿ ಪರಸ್ಪರ ಜಿದ್ದಾಜಿದ್ದಿನಿಂದ ಕೂಡಿತ್ತು. ಪರಸ್ಪರ ಕೆಲವು ಸಾವಿರ ಮತಗಳ ಮುನ್ನಡೆಯನ್ನು ಇಬ್ಬರೂ ಸಾಧಿಸುತ್ತಿದ್ದರು. ಆದಾಗ್ಯೂ, ಮಧ್ಯಾಹ್ನದ ವೇಳೆಗೆ, ಚಂದ್ರಶೇಖರ್ 1,77,269 ಮತ್ತು ತರೂರ್ 1,54,309 ಮತಗಳನ್ನು ಪಡೆದಿದ್ದರು. ಸಿಪಿಐನ ಪನ್ನಿಯನ್ ರವೀಂದ್ರನ್ 1,22,258 ಮತಗಳನ್ನು ಪಡೆದು 3ನೇ ಸ್ಥಾನದಲ್ಲಿದ್ದರು. ಆಗ ರಾಜೀವ್‌ 22,000 ಮತಗಳಿಂದ ಮುನ್ನಡೆ ಸಾಧಿಸಿದ್ದರು.

ಲೋಕಸಭೆ ಚುನಾವಣೆ ಫಲಿತಾಂಶ 2024: ಕಾಂಗ್ರೆಸ್‌ ಪುಟಿದೇಳುವಂತೆ ಮಾಡಿದ ಖರ್ಗೆ

ಆದರೆ ಮತ ಎಣಿಕೆಯ ಅಂತ್ಯಕ್ಕೆ ತರೂರ್ 3,53,679 ಮತ ಪಡೆದರೆ, ರಾಜೀವ್‌ 3,37,920 ಮತ ಹಾಗೂ ರವೀಂದ್ರನ್‌ 2,44,433 ಮತ ಪಡೆದರು. ಈ ಮೂಲಕ ರಾಜೀವ್‌ರಿಂದ ಸಾಕಷ್ಟು ಆತಂಕದ ಕ್ಷಣ ಎದುರಿಸಿ 4ನೇ ಬಾರಿಗೆ ತರೂರ್‌ ಆಯ್ಕೆಯಾದರು.

ಈ ಬಗ್ಗೆ ಮಾತನಾಡಿದ ರಾಜೀವ್‌, ‘ನಾನು ಸೋತಿರಬಹುದು. ಆದರೆ ಬಿಜೆಪಿಗೆ ಮತ ನೀಡುವ ಮತದಾರರ ಸಂಖ್ಯೆ ವೃದ್ಧಿ ಆಗಿರುವುದು ಖುಷಿಯ ವಿಚಾರ’ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಮಾಜಿ ಗರ್ಲ್‌ಫ್ರೆಂಡ್ ಬಾಂಬ್
ಜನರೊಂದಿಗೆ ಸಂಪರ್ಕ ಸಾಧಿಸಿ, ಸೋಶಿಯಲ್ ಮೀಡಿಯಾ ಬಳಸಿ: ಸಂಸದರಿಗೆ ಮೋದಿ ಕರೆ