
ನವದೆಹಲಿ(ಜು.19): ರಾಜಸ್ಥಾನದ ಬಂಡಾಯ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಅವರ ಬೆಂಬಲಿಗ ಶಾಸಕರು ಹರ್ಯಾಣದಿಂದ ಬಿಜೆಪಿ ಆಡಳಿತದ ಬೆಂಗಳೂರಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪೈಲಟ್ ಪದಚ್ಯುತಿಗೂ ಮುನ್ನ ನಡೆದಿತ್ತು ಈ ಬೆಳವಣಿಗೆ!
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ‘ಸರ್ಕಾರ ಬೀಳಿಸುವ ಸಂಚಿನ ಸಂಭಾಷಣೆಯುಳ್ಳ ಆಡಿಯೋ ಟೇಪ್ ಕುರಿತ ವಿಚಾರಣೆಗೆ ರಾಜಸ್ಥಾನ ಪೊಲೀಸರು, ಪೈಲಟ್ ಬಣದ ಶಾಸಕರು ಬೀಡು ಬಿಟ್ಟಿದ್ದ ಹರ್ಯಾಣದ ಮಾನೇಸರ್ಗೆ ತೆರಳಿದ್ದರು. ಆದರೆ ಶಾಸಕರು ಪೊಲೀಸರ ಕೈಗೆ ಸಿಗದೇ ಪಲಾಯನಗೈದಿದ್ದಾರೆ’ ಎಂದು ಆರೋಪಿಸಿದರು.
ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋಸ್ತಾರಾ ಮಾತನಾಡಿ, ‘ಪೊಲೀಸರು ಮಾನೇಸರ್ ರೆಸಾರ್ಟ್ಗೆ ಹೋದಾಗ ಅವರನ್ನು ಗೇಟ್ನಲ್ಲೇ ತಡೆಯಲಾಗಿದೆ. ಶಾಸಕರನ್ನು ಅಲ್ಲಿಂದ ಬೇರೆ ಗೇಟ್ನಿಂದ ಕಳಿಸಿಕೊಟ್ಟನಂತರ ಪೊಲೀಸರಿಗೆ ರೆಸಾರ್ಟ್ ಪ್ರವೇಶ ನೀಡಲಾಗಿದೆ’ ಎಂದು ಆರೋಪಿಸಿದರು.
ರಾಜಸ್ಥಾನ ರಾಜಕೀಯ ಡ್ರಾಮಾ ಕ್ಲೈಮಾಕ್ಸ್ಗೆ ದಿನಾಂಕ ಫಿಕ್ಸ್! ಪೈಲಟ್ ಕಿರುನಗೆ
ಈ ನಡುವೆ, ಬಂಡಾಯ ಶಾಸಕರು ಬೆಂಗಳೂರಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಸಚಿನ್ ಪೈಲಟ್ ಸೇರಿದಂತೆ ಬಂಡಾಯ ಬಣದಲ್ಲಿ 19 ಶಾಸಕರಿದ್ದಾರೆ. ತಮ್ಮನ್ನು ಮುಖ್ಯಮಂತ್ರಿ ಮಾಡದ ಕಾರಣಕ್ಕೆ ಗೆಹ್ಲೋಟ್ ಸರ್ಕಾರದಿಂದ ಪೈಲಟ್ ಬಂಡಾಯ ಎದ್ದಿದ್ದು, ಇತ್ತೀಚೆಗಷ್ಟೇ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಹುದ್ದೆಯಿಂದ ವಜಾಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.