Rahul Gandhi ಕರಾಚಿಯಿಂದ ಭಾರತ್ ಜೋಡೋ ಯಾತ್ರೆ ನಡೆಸಬೇಕಿತ್ತು: ಬಿಜೆಪಿ ನಾಯಕ

Published : Sep 18, 2022, 06:12 PM IST
Rahul Gandhi ಕರಾಚಿಯಿಂದ ಭಾರತ್ ಜೋಡೋ ಯಾತ್ರೆ ನಡೆಸಬೇಕಿತ್ತು: ಬಿಜೆಪಿ ನಾಯಕ

ಸಾರಾಂಶ

ರಾಹುಲ್ ಗಾಂಧಿಯವರ ಮುತ್ತಜ್ಜನ ಕಾಲದಲ್ಲಿ ದೇಶ ಒಡೆಯಲಾಯಿತು. ಇದರಲ್ಲಿ ಅವರ ಪಾತ್ರವಿದೆ. ಈ ಹಿನ್ನೆಲೆ ರಾಹುಲ್ ಗಾಂಧಿ ಪಾಕಿಸ್ತಾನದಲ್ಲಿ ಅಥವಾ ಬಾಂಗ್ಲಾದೇಶದಿಂದ ಭಾರತ ಜೋಡೋ ಯಾತ್ರೆ ಆರಂಭಿಸಬೇಕಿತ್ತು ಎಂದು ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಚೌಧರಿ ಹೇಳಿದ್ದಾರೆ. 

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ನಡೆಸುತ್ತಿರುವ ಭಾರತ ಜೋಡೋ ಯಾತ್ರೆಯ (Bharat Jodo Yatra) ವಿರುದ್ಧ ಉತ್ತರ ಪ್ರದೇಶದ ಭಾರತೀಯ ಜನತಾ ಪಕ್ಷದ (Bharatiya Janata Party) ರಾಜ್ಯಾಧ್ಯಕ್ಷ ಭೂಪೇಂದ್ರ ಚೌಧರಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಪಾಕಿಸ್ತಾನದಿಂದಲೇ ಪ್ರಯಾಣ ಆರಂಭಿಸಬೇಕಿತ್ತು ಎಂದು ಅವರು ಹೇಳಿದ್ದಾರೆ. ಭಾರತ ವಿಭಜನೆಗೆ (Divide) ಕಾಂಗ್ರೆಸ್ ಹೊಣೆ ಎಂದು ಹೇಳಿದ ಅವರು, ರಾಹುಲ್ ಗಾಂಧಿ ಮುತ್ತಜ್ಜನ ಕಾಲದಲ್ಲಿ ದೇಶ ಒಡೆಯಿತು. ಈಗ ಅದನ್ನು ಜೋಡಿಸುವ ಬಗ್ಗೆ ಮಾತನಾಡುವ ವ್ಯಕ್ತಿ ದೇಶದ ಐಕ್ಯತೆಗಾಗಿ (Unity) ಕೆಲಸ ಮಾಡಬೇಕು ಎಂದು ಭೂಪೇಂದ್ರ ಚೌಧರಿ ಹೇಳಿದ್ದಾರೆ. ಕಾಂಗ್ರೆಸ್ ಸಂಸದ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು 2024ರ ಲೋಕಸಭೆ ಚುನಾವಣೆಗೂ ಮುನ್ನ ಭಾರತ್ ಜೋಡೋ ಯಾತ್ರೆ ಆರಂಭಿಸಿದ್ದಾರೆ. ಈ ಪ್ರಯಾಣದ ಮೂಲಕ, ಅವರು ಜನರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಇದೀಗ ಈ ಯಾತ್ರೆಗೆ ಸಂಬಂಧಿಸಿದಂತೆ ಬಿಜೆಪಿ ತನ್ನ ವಾಗ್ದಾಳಿಯನ್ನು ತೀವ್ರಗೊಳಿಸಿದೆ.

ರಾಹುಲ್ ಗಾಂಧಿ ಪಾಕಿಸ್ತಾನದಿಂದಲೇ ಪ್ರಯಾಣ ಆರಂಭಿಸಬೇಕಿತ್ತು ಎಂದು ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷ ಭೂಪೇಂದ್ರ ಚೌಧರಿ ಕಾಂಗ್ರೆಸ್ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದರು. ಅವರ ಅಜ್ಜ ಮತ್ತು ಮುತ್ತಜ್ಜನ ಕಾಲದಲ್ಲಿ ಭಾರತ ಒಡೆಯಿತು, ವಿಭಜನೆಯಾಯಿತು. ಈಗ ರಾಹುಲ್ ಗಾಂಧಿ ಯಾವ ಭಾರತವನ್ನು ಜೋಡಿಸುವ ಮಾತನಾಡುತ್ತಿದ್ದಾರೆ ಎಂದು ಭೂಪೇಂದ್ರ ಚೌಧರಿ ಪ್ರಶ್ನಿಸಿದರು. ಅಲ್ಲದೆ, ಭಾರತ ಜೋಡೋ ಯಾತ್ರೆಯನ್ನು ರಾಹುಲ್ ಗಾಂಧಿ, ಕನ್ಯಾಕುಮಾರಿಯ ಬದಲು ಕರಾಚಿಯಿಂದಲೇ ಪ್ರಯಾಣ ಬೆಳೆಸಬೇಕಿತ್ತು. ಅಥವಾ ಅವರು ತಮ್ಮ ಪಾದಯಾತ್ರೆಯನ್ನು ಢಾಕಾದಿಂದ ಪ್ರಾರಂಭಿಸಬಹುದಿತ್ತು. ಈ ಭಾಗವು ಭಾರತದಿಂದ ಒಡೆಯಲ್ಪಟ್ಟಿದೆ. ಇದು ಭಾರತದ ಅವಿಭಾಜ್ಯ ಅಂಗವಾಗಿತ್ತು ಎಂದೂ ಉತ್ತರ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದರು.

ಇದನ್ನು ಓದಿ: Rahul Gandhi ಪಾಕಿಸ್ತಾನಕ್ಕೆ ಹೋಗಿ ಭಾರತ್‌ ಜೋಡೋ ಯಾತ್ರೆ ಮಾಡಲಿ: ಅಸ್ಸಾಂ ಸಿಎಂ

ಉತ್ತರ ಪ್ರದೇಶದ ಕಾಂಗ್ರೆಸ್ ಸ್ಥಿತಿಯನ್ನು ನೀವೇ ನೋಡಬಹುದು ಎಂದ ಭೂಪೇಂದ್ರ ಚೌಧರಿ..!
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷದ ಸ್ಥಾನದ ಬಗ್ಗೆ ಏನು ಹೇಳಬೇಕು? ಅದನ್ನು ನೀವೇ ನೋಡಬಹುದು. 1947ರಲ್ಲಿ ಭಾರತ ವಿಭಜನೆಯಾಯಿತು. ಅಂದಿನಿಂದ ದೇಶ ವಿಭಜನೆಯಾಗಿಲ್ಲ. ಹಾಗಾದರೆ ರಾಹುಲ್ ಗಾಂಧಿ ಯಾವ ಭಾರತವನ್ನು ಸಂಪರ್ಕಿಸುವ ಬಗ್ಗೆ ಮಾತನಾಡುತ್ತಿದ್ದಾರೆ..? ಅವರು ಭಾರತ ಜೋಡೋ ಯಾತ್ರೆ ಮಾಡಬೇಕಾದರೆ, ಅವರು ಅದನ್ನು ಪಾಕಿಸ್ತಾನದಿಂದ ಮಾಡುತ್ತಿದ್ದರು. ಬಾಂಗ್ಲಾದೇಶದಿಂದ ಮಾಡುತ್ತಿದ್ದರು. 1947 ರ ವಿಭಜನೆಯ ನಂತರ ಈ ದೇಶಗಳು ಬೇರ್ಪಟ್ಟಿವೆ. ಅದರಲ್ಲಿ ಅವರ ಅಜ್ಜ ಮತ್ತು ದೊಡ್ಡಪ್ಪನ ಪಾತ್ರವಿದೆ ಎಂದೂ ಭೂಪೇಂದ್ರ ಚೌಧರಿ ಆರೋಪಿಸಿದ್ದಾರೆ. 

ಮದರಸಾಗಳ ಸಮೀಕ್ಷೆ ಬಗ್ಗೆ ಯುಪಿ ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದೇನು..?
ಮದರಸಾ ಸಮೀಕ್ಷೆ ನಡೆಸುವ ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶ ಬಿಜೆಪಿ ಸರ್ಕಾರದ ನಿರ್ಧಾರವನ್ನು ಅಲ್ಲಿನ ಬಿಜೆಪಿ ರಾಜ್ಯಾಧ್ಯಕ್ಷರು ಬೆಂಬಲಿಸಿದ್ದಾರೆ. ಮದರಸಾಗಳ ಶ್ರೇಯೋಭಿವೃದ್ಧಿಗೆ ಈ ಸರ್ವೇ ನಡೆಸಲಾಗುತ್ತಿದೆ ಎಂದೂ ಅವರು ಹೇಳಿದರು. ಹಾಗೆ, ಪ್ರತಿಯೊಂದು ವಿಷಯವನ್ನು ರಾಜಕೀಯಗೊಳಿಸಬಾರದು. ಮದರಸಾಗಳ ಸ್ಥಿತಿ ಉತ್ತಮವಾಗಿರಬೇಕು. ಇಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತರೆ ಅದಕ್ಕೆ ಯಾರು ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಉತ್ತರ ಪ್ರದೇಶ ರಾಜಧಾನಿ ಲಖನೌನಲ್ಲಿ ಯುಪಿ ಬಿಜೆಪಿ ರಾಜ್ಯಾಧ್ಯಕ್ಷ ಭುಪೇಂದ್ರ ಚೌಧರಿ ಹೇಳಿದ್ದಾರೆ. ವಾಸ್ತವವಾಗಿ, ಯೋಗಿ ಸರ್ಕಾರದ ಮದರಸಾ ಸಮೀಕ್ಷೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿಪಕ್ಷಗಳಿಂದ ಇದಕ್ಕೆ ತೀವ್ರ ವಿರೋಧವೂ ವ್ಯಕ್ತವಾಗಿದೆ. ಈ ಕುರಿತು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷರ ಹೇಳಿಕೆ ಅತ್ಯಂತ ಮಹತ್ವದ್ದಾಗಿದೆ ಎನ್ನಬಹುದು. 

ಇದನ್ನೂ ಓದಿ: ನೆಹರೂ ಚಡ್ಡಿಗೂ ಬೆಂಕಿ ಹಚ್ತೀರಾ..? ಕಾಂಗ್ರೆಸ್‌ ಪೋಸ್ಟ್‌ಗೆ Himanta Biswa Sharma ತಿರುಗೇಟು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?