
ಕೊಯಮತ್ತೂರು (ಏ.14): ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೊಯಮತ್ತೂರಿಗೆ ತೆರಳಿದ್ದ ವೇಳೆ ಅಚಾನಕ್ಕಾಗಿ ಅಲ್ಲಿನ ಸ್ವೀಟ್ ಅಂಗಡಿಯೊಂದಕ್ಕೆ ಭೇಟಿ ಕೊಟ್ಟು ತಮಗಿಷ್ಟವಾದ ಸಿಹಿತಿನಿಸುಗಳನ್ನು ಖರೀದಿಸಿ ಗಮನಸೆಳೆದರು.
ರಸ್ತೆಯಲ್ಲಿ ಅಂಗಡಿ ನೋಡುತ್ತಿದ್ದಂತೆಯೇ, ಆ ಅಂಗಡಿಗೆ ತೆರಳಲು ರಾಹುಲ್(Rahul gandhi) ರಸ್ತೆಯ ಡಿವೈಡರ್ ನೆಗೆದಿದ್ದು ಎಲ್ಲರ ಗಮನ ಸೆಳೆದಿದೆ. ಬಳಿಕ ರಾಹುಲ್ ತಮಗೆ ಇಷ್ಟವಾದ ಗುಲಾಬ್ ಜಾಮೂನ್ ಖರೀದಿಸಿ, ತಮ್ಮ ಜೊತೆಗೆ ಬಂದಿದ್ದ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ಗೆ ಮೈಸೂರು ಪಾಕ್ ಕೊಡಿಸಿದರು. ಅಲ್ಲದೆ ಅಂಗಡಿಯಲ್ಲಿ 20-30 ನಿಮಿಷಗಳ ಕಾಲ ಇದ್ದು, ಎಲ್ಲ ಸಿಹಿತಿನಿಸುಗಳನ್ನು ರುಚಿ ಮಾಡಿ ಸಿಬ್ಬಂದಿಯೊಂದಿಗೆ ಚಿತ್ರ ತೆಗೆಸಿಕೊಂಡರು.
ಬಳಿಕ ತಾವು ಖರೀದಿಸಿದ ಸಿಹಿತಿನಿಸುಗಳ ಹಣವನ್ನು ಅಂಗಡಿಯವನಿಗೆ ನೀಡಿ ಹಿಂದಿರುಗಿದರು.
ಮೇರಠ್: ರಸ್ತೆ ಮಧ್ಯೆ ನಮಾಜ್ ಮಾಡಿ ಕಿರಿಕಿರಿ; 200ಕ್ಕೂ ಅಧಿಕ ಮಂದಿ ವಿರುದ್ಧ ಕೇಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.