ಸಚಿವ ಸ್ಥಾನಕ್ಕಾಗಿ ಆರ್. ಶಂಕರ್ ಹೊಸ ಲಾಜಿಕ್..!

Published : Jan 28, 2020, 07:58 PM ISTUpdated : Jan 28, 2020, 08:04 PM IST
ಸಚಿವ ಸ್ಥಾನಕ್ಕಾಗಿ ಆರ್. ಶಂಕರ್ ಹೊಸ ಲಾಜಿಕ್..!

ಸಾರಾಂಶ

ಕೇಸರಿ ಪಾಳಯದಲ್ಲಿ ಸಂಪುಟ ವಿಸ್ತರಣೆಗೆ ಕೂಲ ಕೂಡಿಬರುತ್ತಿಲ್ಲ. ಮಂತ್ರಿಗಿರಿಗಾಗಿ ಕಾಯ್ತಿರೋ ನೂತನ ಶಾಸಕರ ಎದೆ ಬಡಿತ ಜೋರಾದಂತಿದೆ. ಈ ನಿಟ್ಟಿನಲ್ಲಿ ಸಂಪುಟ ಸಂಕಟದ ಟೆನ್ಷನ್ನಲ್ಲಿರುವ ನೂತನ ಶಾಸಕರು ಇವತ್ತು ದೇವರ ಮೊರೆ ಹೋಗಿದ್ದಾರೆ. ಇದರ ಮಧ್ಯೆ ಆರ್. ಶಂಕರ್  ಮಂತ್ರಿ ಸ್ಥಾನಕ್ಕಾಗಿ ಲಾಜಿಕ್ ಮೂಲಕ ಒತ್ತಡ ಹೇರುತ್ತಿದ್ದಾರೆ. 

ಬೆಂಗಳೂರು, [ಜ.28]: ಸಚಿವ ಸಂಪುಟ ವಿಸ್ತರಣೆ ಈ ವಾರವಾಗುತ್ತೆ. ಮುಂದಿನ ವಾರವಾಗುತ್ತೆ ಎಂದು ಮಂತ್ರಿಗಿರಿ ಆಕಾಂಕ್ಷಿಗಳು ಕಾತರದಿಂದ ಕಾಯುತ್ತಿದ್ದಾರೆ.

ಅಷ್ಟೇ ಅಲ್ಲದೇ ಸಚಿವಾಕಾಂಕ್ಷಿಗಳು ಬಿಎಸ್ ಯಡಿಯೂರಪ್ಪನವರ ದುಂಬಾಲು ಬಿದ್ದಿದ್ದಾರೆ. ಒಂದು ಕಡೆ ನೂತನ  ಉಪಚುನಾವಣೆಯಲ್ಲಿ ಗೆದ್ದ ನೂತನ ಶಾಸಕರು, ಮತ್ತೊಂದೆಡೆ ಬಿಜೆಪಿಯ ಹಿರಿಯ ಶಾಸಕರು ಕೂಡ ಸಚಿವ ಸ್ಥಾನಬೇಕೆ ಬೇಕು ಎಂದು ಲಾಬಿ ನಡೆಸಿದ್ದಾರೆ. ಇದ್ರಿಂದ ಬಿಎಸ್ ವೈಗೆ ದಿಕ್ಕುತೋಚದಂತಾಗಿದೆ.

ಮೇಲ್ಮನೆ ಸ್ಥಾನ ಸವದಿಗೋ, ಶಂಕರ್‌ಗೋ?: ಕಮಲಕ್ಕೆ ಗೆಲುವು ಸುಲಭ!

ವರಸೆ ಬದಲಿಸಿದ ಶಂಕರ್
ಹೌದು...ಗೆದ್ದ ನೂತನ ಶಾಸಕರಿಗೆ ಮಾತ್ರ ಸಂಪುಟದಲ್ಲಿ ಅವಕಾಶವಿದ್ದು, ಸೋತವರಿಗೆ ಮುಂದಿನ ದಿನಗಳಲ್ಲಿ ನೋಡೋಣ ಎನ್ನುವ ಮಾತಗಳು ಬಿಜೆಪಿ ಪಾಳಯದಲ್ಲಿ ಬಲವಾಗಿ ಕೇಳಿಬರುತ್ತಿದೆ.

ಆದ್ರೆ, ಇದಕ್ಕೆ ಲಾಜಿಕ್ ಮಾಡಿರುವ ಆರ್. ಶಂಕರ್, ನಾನು ಚುನಾವಣೆಗೇ ನಿಂತಿಲ್ಲ. ಹೀಗಾಗಿ ನನಗೆ ಅವಕಾಶ ಸಿಗುತ್ತದೆ ಎಂದು ಲಾಜಿಕಲ್​ ಒತ್ತಡ ಹೇರುತ್ತಿದ್ದಾರೆ.

ನಾನು ಈ ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಟ್ಟೆ. ನಾಯಕರು ಹೇಳಿದಂತೆಲ್ಲ ನಡೆದುಕೊಂಡಿದ್ದೇನೆ. ಚುನಾವಣೆಗೆ ನಿಲ್ಲಬೇಡಿ, ವಿಧಾನಪರಿಷತ್ತಿಗೆ ಆಯ್ಕೆ ಮಾಡತ್ತೇವೆ ಎಂದು ಹೇಳಿದ್ದರು. ಹೀಗಾಗಿ ನನಗೆ ಅವಕಾಶ ಕೈತಪ್ಪುವುದಿಲ್ಲ ಎಂದಿದ್ದಾರೆ.

ಲಕ್ಷ್ಮಣ್ ಸವದಿ ಮತ್ತು ನಮ್ಮ ನಡುವೆ ಪೈಪೋಟಿ ಇಲ್ಲ. 11 ಶಾಸಕರೊಟ್ಟಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಹೇಳಿದರು. ಈ ಮೂಲಕ ಕಾಂಗ್ರೆಸ್ ನಾಯಕ ರಿಜ್ವಾನ್ ಅರ್ಷದ್ ಅವರ ರಾಜೀನಾಮೆಯಿಂದ ತೆರವಾದ ವಿಧಾನಪರಿಷತ್‌ಗೆ ತಮ್ಮನ್ನೂ ಆಯ್ಕೆ ಮಾಡಬೇಕೆಂದು ಹೇಳಿದರು.

ಶಂಕರ್ ಹೇಳಿದಂತೆ ಅವರು ಈ ಹಿಂದೆ ಉಪಚುನಾವಣೆಯಿಂದ ಹಿಂದೆ ಸರಿದು, ವರಿಷ್ಠರು ಹೇಳಿದಂತೆ ಅರುಣ್ ಕುಮಾರ್ ಗೆ ಅವಕಾಶ ಮಾಡಿಕೊಟ್ಟಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರ್ನಾಟಕಕ್ಕೆ ಮಹಾತ್ಮ ಗಾಂಧಿ ನರೇಗಾ ಯೋಜನೆ 5 ಕೋಟಿ ಮಾನವ ದಿನ ಕಡಿತ; ಪ್ರಿಯಾಂಕ್ ಖರ್ಗೆ ಆರೋಪ
ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?