ಪಿಎಫ್‌ಐ ನಿಷೇಧ ಗುಜರಾತ್‌ ಚುನಾವಣೆಯ ಗಿಮಿಕ್‌: ಹರಿಪ್ರಸಾದ್‌

Published : Sep 29, 2022, 12:00 AM IST
ಪಿಎಫ್‌ಐ ನಿಷೇಧ ಗುಜರಾತ್‌ ಚುನಾವಣೆಯ ಗಿಮಿಕ್‌: ಹರಿಪ್ರಸಾದ್‌

ಸಾರಾಂಶ

ಪಿಎಫ್‌ಐ ನಿಷೇಧ ವಿಚಾರ ಹೊಸದೇನಲ್ಲ. ಯಾವ್ಯಾವಾಗ ಗುಜರಾತ್‌ ಚುನಾವಣೆ ಬರುತ್ತೋ ಬಿಜೆಪಿಯವರಿಗೆ ವಿಧ್ವಂಸಕ ಚಟುವಟಿಕೆಗಳ ಬಗ್ಗೆ ಜ್ಞಾಪಕ ಬರುತ್ತೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೀವ ಬೆದರಿಕೆ ವಿಚಾರ ಸುದ್ದಿಯಾಗುತ್ತೆ. ಇಲ್ಲ ನಕಲಿ ಎನ್‌ಕೌಂಟರ್‌ ಆಗುತ್ತೆ: ಹರಿಪ್ರಸಾದ್‌

ಬೆಂಗಳೂರು(ಸೆ.29): ಪಿಎಫ್‌ಐ ಸಂಘಟನೆ ನಿಷೇಧ ವಿಚಾರ ಗುಜರಾತ್‌ ಚುನಾವಣೆಗಾಗಿ ಮಾಡಿರುವ ಗಿಮಿಕ್‌, ಜನರ ಅನುಕಂಪ ಗಿಟ್ಟಿಸಿಕೊಳ್ಳಲು ನಡೆಸಿರುವ ಪೂರ್ವ ನಿಯೋಜಿತ ಯೋಜನೆ. ಚುನಾವಣೆ ಮುಗಿದ ಬಳಿಕ ಬಿಜೆಪಿಯವರು ಪಿಎಫ್‌ಐ ಮತ್ತು ಎಸ್‌ಡಿಪಿಐನವರೊಂದಿಗೆ ಜುಗಲ್‌ಬಂದಿ ನಡೆಸುತ್ತಾರೆ ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಹೇಳಿದ್ದಾರೆ. 

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್‌ಐ ನಿಷೇಧ ವಿಚಾರ ಹೊಸದೇನಲ್ಲ. ಯಾವ್ಯಾವಾಗ ಗುಜರಾತ್‌ ಚುನಾವಣೆ ಬರುತ್ತೋ ಬಿಜೆಪಿಯವರಿಗೆ ವಿಧ್ವಂಸಕ ಚಟುವಟಿಕೆಗಳ ಬಗ್ಗೆ ಜ್ಞಾಪಕ ಬರುತ್ತೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೀವ ಬೆದರಿಕೆ ವಿಚಾರ ಸುದ್ದಿಯಾಗುತ್ತೆ. ಇಲ್ಲ ನಕಲಿ ಎನ್‌ಕೌಂಟರ್‌ ಆಗುತ್ತೆ. ಆಗೆಲ್ಲಾ ಪಿಎಫ್‌ಐ ಬ್ಯಾನ್‌ ವಿಚಾರ ತರುತ್ತಾರೆ. ಹಿಂದಿನಿಂದಲೂ ಪಿಎಫ್‌ಐ ವಿರುದ್ಧ ಆರೋಪ ಮಾಡಿಕೊಂಡೇ ಬರುತ್ತಿದ್ದವರಿಗೆ ನಿಷೇಧ ಮಾಡುವುದಕ್ಕೆ ಎಂಟು ವರ್ಷ ಬೇಕಿತ್ತಾ? ಎಂದು ಪ್ರಶ್ನಿಸಿದರು.

ಸಂಸ್ಥೆಗಳನ್ನು ಬ್ಯಾನ್ ಮಾಡಿದ್ರೆ ಅಂಡರ್ ವರ್ಲ್ಡ್ ಹಾಗೆ ಕೆಲಸ ಮಾಡ್ತಾರೆ; PFI ಬ್ಯಾನ್‌ಗೆ ನಟ ಚೇತನ್ ರಿಯಾಕ್ಷನ್

ಇದುವರೆಗೆ ಕೈಗೆ ಗೋರಂಟಿ ಹಾಕಿಕೊಂಡು ಕುಳಿತಿದ್ದರಾ ಎಂದು ತರಾಟೆಗೆ ತೆಗೆದುಕೊಂಡರು. ಗುಜರಾತ್‌ ಚುನಾವಣೆ ಸಂದರ್ಭದಲ್ಲೇ ಬ್ಯಾನ್‌ ಮಾಡಿರುವ ಉದ್ದೇಶ ಇನ್ನೇನೂ ಇಲ್ಲ. ನಾವು ಭಯೋತ್ಪಾದನೆ ನಿಗ್ರಹಿಸುವವರು ಅಂತ ವಾಟ್ಸ್‌ಪ್‌ ಯೂನಿವರ್ಸಿಟಿಯಲ್ಲಿ ಪ್ರಕಟಿಸಿ ಸಿಂಪತಿ ಗಿಟ್ಟಿಸುವುದು ಅಷ್ಟೆಎಂದರು.

ಗುಜರಾತ್‌ ಚುನಾವಣೆ ಮುಗಿದ ಬಳಿಕ ಬಿಜೆಪಿ, ಪಿಎಫ್‌ಐ ಮತ್ತು ಎಸ್‌ಡಿಪಿಐ ಜುಗಲ್‌ಬಂದಿ ನಡೆಸುತ್ತವೆ. ಪಿಎಫ್‌ಐ ಮತ್ತು ಆರೆಸ್ಸೆಸ್‌ ಒಂದೇ ನಾಣ್ಯದ ಎರಡು ಮುಖಗಳು. ಆರೆಸ್ಸೆಸ್‌ ಬ್ಯಾನ್‌ ವಿಚಾರದ ಬಗ್ಗೆ ಈಗ ಮಾತನಾಡುವುದಿಲ್ಲ. ಸಮಯ ಬಂದಾಗ ಮಾತನಾಡುತ್ತೇನೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾಜವಾದ ಸಿದ್ಧಾಂತದಿಂದ ಕೋಮುವಾದ ಸಿದ್ಧಾಂತಕ್ಕೆ ಮತಾಂತರವಾಗಿದ್ದಾರೆ. ಕೇಶವಕೃಪಾದವರನ್ನು ಓಲೈಸಲು ಏನು ಬೇಕಾದರೂ ಮಾಡುತ್ತಾರೆ. ಇಷ್ಟುವರ್ಷ ನಂಬಿಕೊಂಡು ಬಂದ ಸಿದ್ಧಾಂತವನ್ನೂ ಗಾಳಿಗೆ ತೂರುತ್ತಾರೆ ಅಂತ ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ತಿಳಿಸಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ