
ಮೈಸೂರು (ಅ.01): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ವಿವಾದದಿಂದ ಹಾಗೂ ತನ್ನ ಮೇಲಾಗುತ್ತಿದ್ದ ರಾಜಕೀಯ ತೇಜೋವಧೆಯನ್ನು ಸಹಿಸಲಾರದೇ ನನ್ನ ಪತ್ನಿ ಸೈಟು ಹಿಂದಿರುಗಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದು ಹೇಗೆ ತಪ್ಪೊಪ್ಪಿಕೊಂಡಂತೆ ಆಗುತ್ತದೆಯೇ ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾವು 3 ಎಕರೆ 16 ಗುಂಟೆ ಜಮೀನಿಗೆ ಬದಲಿ ನಿವೇಶನ ಕೊಡಿ ಎಂದು ಮುಡಾಗೆ ಕೇಳಿದಾಗ ವಿಜಯನಗರದ 3 ಮತ್ತು 4ನೇ ಹಂತದಲ್ಲಿ ನಿವೇಶನ ಕೊಟ್ಟಿದ್ದರು. ಇದೀಗ ಅದೊಂದು ದೊಡ್ಡ ವಿವಾದ ಆಗಿದೆ. ಈ ವಿವಾದದಿಂದ ಮನನೊಂದು ನಮ್ಮ ಯಜಮಾನರಿಗೆ ತೇಜೋವಧೆ ಆಗಿತ್ತಿದೆ, ವಿರೋಧ ಪಕ್ಷದವರು ರಾಜಕೀಯ ದ್ವೇಷ ತೀರಿಸಿಕೊಳ್ಳಲು ಮುಂದಾಗಿರುವುದರಿಂದ ಮನನೊಂದು ನನ್ನ ಹೆಂಡತಿ ಸೈಟು ವಾಪಸ್ ಕೊಟ್ಟಿದ್ದಾರೆ. ಇನ್ನು ಜಾರಿ ನಿರ್ದೇಶನಾಲಯ (ಇಡಿ) ಇಸಿಐಆರ್ ದಾಖಲಿಸಿಕೊಂಡಿದೆ. ಕಾನೂನು ಪ್ರಕಾರ ಇಡಿ ಏನು ಮಾಡಬೇಕೋ ಮಾಡಲಿ. ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಅನ್ವಯವಾಗಲ್ಲ. ನಮಗೆ ಸೈಟು ಹಂಚಿಕೆಯಾಗಿದೆ. ಇದರಲ್ಲಿ ನನ್ನ ಪಾತ್ರ ಏನಿದೆ.? ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮುಡಾ ಹಗರಣ: ನಾನು ಸಂಪತ್ತು ಬಯಸಿಲ್ಲ, ಈ ಸೈಟ್ಗಳು ತೃಣಕ್ಕೆ ಸಮ, ಸಿಎಂ ಪತ್ನಿ ಪಾರ್ವತಿ
ನಾನು ಹೆಂಗೆ ತಪ್ಪು ಒಪ್ಪಿಕೊಂಡಂಗೆ. ನನ್ನ ಹೆಂಡತಿ ಮನಸ್ಸು ನೊಂದು ವಿವಾದ ಬೇಡವೆಂದು ಸೈಟು ವಾಪಸ್ ಕೊಟ್ಟರೆ ಅದೆಂಗೆ ತಪ್ಪು ಒಪ್ಪಿಕೊಂಡಂತೆ ಆಗುತ್ತದೆ. ವಿಪಕ್ಷದವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅನಗತ್ಯವಾಗಿ ರಾಜೀನಾಮೆ ಕೇಳುತ್ತಿದ್ದಾರೆ. ಆದರೆ, ನಾನು ತಪ್ಪೇ ಮಾಡಿಲ್ಲ ಎಂದಾಗ ಏಕೆ ರಾಜೀನಾಮೆ ಕೊಡಬೇಕು. ಯಡಿಯೂರಪ್ಪ ಅವರು ಡಿನೋಟಿಫೈ ಮಾಡಿದ್ದರು. ನಾನೇನು ಡಿನೋಟಿಫೈ ಮಾಡಿದ್ದೇನಾ? ನನ್ನದೇನಾದರೂ ಆದೇಶ, ಪತ್ರ ವ್ಯವಹಾರ, ಅಕ್ರಮ ಹಣ ವರ್ಗಾವಣೆ ಏನಾದರೂ ಇದೆನಾ? ಯಡಿಯೂರಪ್ಪ ಹಾಗೂ ನನ್ನ ಪ್ರಕರಣಗಳು ತುಂಬಾ ವ್ಯತ್ಯಾಸಗಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.