'ದೆಹಲಿಗೆ ಅಲ್ಲ, ಅಮೆರಿಕಕ್ಕೆ ಹೋಗ್ತಾ ಇದ್ದೇನೆ..' ರಾಜಕೀಯ ಗೊಂದಲದ ಮಧ್ಯೆ ರಾಜಣ್ಣ ಹೊಸ ಬಾಂಬ್!

Published : May 26, 2026, 12:18 PM IST
Not Going to Delh KN Rajannas Shocking Statement Amid Karnataka Leadership Buzz rav

ಸಾರಾಂಶ

ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ತಮ್ಮ ಅಮೆರಿಕ ಪ್ರವಾಸ, ಸಿಎಂ ಬದಲಾವಣೆ, ಮತ್ತು ಸಂಪುಟ ಪುನರ್‌ರಚನೆ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸೆಪ್ಟೆಂಬರ್ ಕ್ರಾಂತಿಯ ಬಗ್ಗೆ ಮತ್ತೆ ಮಾತನಾಡಿದ್, ಡಾ.ಜಿ. ಪರಮೇಶ್ವರ್ ಸಿಎಂ ಆಗಬೇಕೆಂಬ ತಮ್ಮ ಅಭಿಪ್ರಾಯಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ. 

ಬೆಂಗಳೂರು ಮೇ.26): 'ನಾನು ದೆಹಲಿಗೆ ಹೋಗಲ್ಲ, ಅಮೆರಿಕಕ್ಕೆ ಹೋಗ್ತಾ ಇದ್ದೇನೆ' ಎಂದು ಹೇಳುವ ಮೂಲಕ ಮಾಜಿ ಸಚಿವ ಕೆಎನ್ ರಾಜಣ್ಣ ಕಾಂಗ್ರೆಸ್ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದಾರೆ. ರಾಜ್ಯ ರಾಜಕೀಯದ ಗೊಂದಲ, ಸಿಎಂ ಬದಲಾವಣೆ, ಸಂಪುಟ ರಚನೆ ಚರ್ಚೆ ನಡುವೆ ರಾಜಣ್ಣ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಸಮಸ್ಯೆಗಳು ಇದ್ದೇ ಇರುತ್ತವೆ

ಎಲ್ಲಾ ಸಮಸ್ಯೆಗಳು ಪರಿಹಾರ ಆದರೆ ಜೀವನಪೂರ್ತಿ ಇರಲ್ಲ. ಸಮಸ್ಯೆಗಳು ಬರುತ್ತಾನೇ ಇರುತ್ತವೆ, ಅದಕ್ಕೆ ಪರಿಹಾರ ಹುಡುಕಬೇಕು ಎಂದು ರಾಜಣ್ಣ ಹೇಳಿದರು. ರಾಜ್ಯಸಭೆ ಹಾಗೂ ಪರಿಷತ್ ಸ್ಥಾನಗಳ ಬಗ್ಗೆ ಇವತ್ತು ಚರ್ಚೆ ಆಗಬಹುದು ಎಂದೂ ತಿಳಿಸಿದರು.

ಸಂಪುಟ ಪುನರ್‌ರಚನೆ ಬಗ್ಗೆ ಸುಳಿವು

ಸಿಎಂ ಸಂಪುಟ ಪುನರ್‌ರಚನೆ ಬಗ್ಗೆ ಹಲವರು ಬೇಡಿಕೆ ಇಟ್ಟಿದ್ದಾರೆ. ಬಹಳ ಮಂತ್ರಿಗಳು ತಮ್ಮ ಆಕಾಂಕ್ಷೆ ಹೇಳಿದ್ದಾರೆ. ಆದರೆ ನನಗೆ ಮಂತ್ರಿ ಆಗಬೇಕು ಅನ್ನೋ ಆಸೆ ಇಲ್ಲ. ಆಗಿದ್ದೂ ಆಯ್ತು, ಬಿಟ್ಟಿದ್ದೂ ಆಯ್ತು ಎಂದು ರಾಜಣ್ಣ ಸ್ಪಷ್ಟಪಡಿಸಿದರು.

ಗೊಂದಲ ಬೇಗ ಕ್ಲಿಯರ್ ಆಗಬೇಕು

ಸಿಎಂ ಬದಲಾವಣೆ ಆಗಲಿ, ಸಂಪುಟ ಪುನರ್‌ರಚನೆ ಆಗಲಿ, ಏನೇ ಇದ್ದರೂ ಬೇಗ ನಿರ್ಧಾರ ಆಗಬೇಕು ಎಂದು ರಾಜಣ್ಣ ಒತ್ತಾಯಿಸಿದರು. ಅಧಿಕಾರ ಹಸ್ತಾಂತರದ ಬಗ್ಗೆ ಒಂದು ಇತ್ಯರ್ಥ ಆಗಬೇಕು. ಇಲ್ಲ ಅಂದ್ರೆ ಅಧಿಕಾರಿಗಳು ಹಿಡಿತಕ್ಕೆ ಸಿಗಲ್ಲ ಎಂದು ಹೇಳಿದರು.

ಸೆಪ್ಟೆಂಬರ್ ಕ್ರಾಂತಿ ಹೇಳಿಕೆಗೆ ಮತ್ತೆ ಸ್ಟ್ಯಾಂಡ್

ಸೆಪ್ಟೆಂಬರ್ ಕ್ರಾಂತಿ ಅಂತ ಮೊದಲು ಹೇಳಿದ್ದು ನಾನು. ರಾಜಕಾರಣ ನಿಂತ ನೀರಲ್ಲ. ಕ್ರಾಂತಿ ಬಿಜೆಪಿಯಲ್ಲೂ ಆಗಬಹುದು ಎಂದು ರಾಜಣ್ಣ ಮತ್ತೆ ತಮ್ಮ ಹೇಳಿಕೆಗೆ ಬದ್ದರಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಮಾತ್ರವಲ್ಲ, ರಾಜ್ಯ ರಾಜಕೀಯದಲ್ಲೇ ದೊಡ್ಡ ಬದಲಾವಣೆಗಳ ಸುಳಿವು ನೀಡಿದರು.

ಪರಮೇಶ್ವರ್ ಸಿಎಂ ಆಗಬೇಕು ಅನ್ನೋ ಅಭಿಪ್ರಾಯ ನನ್ನದೇ

ಸಿಎಂ ಬದಲಾವಣೆ ಆದರೆ ಡಾ.ಜಿ. ಪರಮೇಶ್ವರ್ ಸಿಎಂ ಆಗಬೇಕು ಎಂಬ ತಮ್ಮ ಹಿಂದಿನ ಹೇಳಿಕೆಗೆ ಈಗಲೂ ಬದ್ದ ಎಂದು ರಾಜಣ್ಣ ಹೇಳಿದರು. ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಅಂತಿಮ ನಿರ್ಧಾರ ಹೈಕಮಾಂಡ್‌ದ್ದು ಎಂದು ಸ್ಪಷ್ಟಪಡಿಸಿದರು. ಜೊತೆಗೆ, ರಾಹುಲ್ ಗಾಂಧಿ ರಾಜೀನಾಮೆ ಕೊಡಿ ಅಂದ್ರೆ ಸಿದ್ದರಾಮಯ್ಯ ಒಂದು ಕ್ಷಣವೂ ವಿಳಂಬ ಮಾಡಲ್ಲ ಅಂತ ಹೇಳಿದ್ದಾರೆ. ಅಷ್ಟು ಹೇಳಿದ ಮೇಲೆ ಗೊಂದಲ ಇರಬಾರದು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯ ಜೊತೆ ಪರಂ ಒಟ್ಟಿಗೆ ದೆಹಲಿ ಪ್ರಯಾಣ; ದಲಿತ ಸಿಎಂ ಕಾರ್ಡ್ ಪ್ಲೇ ಆಗುತ್ತದಾ? ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ!
ವಿಜಯ್ 'ವಿಷಲ್‌' ಸದ್ದಿಗೆ ತಮಿಳುನಾಡು ರಾಜಕೀಯದಲ್ಲಿ ಕಂಪನ! ಅಣ್ಣಾಡಿಎಂಕೆ ಮತ್ತೊಂದು ಹೋಳು, 3 ಬಂಡಾಯ ಶಾಸಕರ ರಾಜೀನಾಮೆ